ಆ್ಯಪ್ನಗರ

ಪಕ್ಷೇತರರಿಗೆ ಮಣೆ ಹಾಕಿದ ಮತದಾರ

ಅರೆಮಲೆನಾಡು ಎಂದೇ ಖ್ಯಾತಿ ಪಡೆದಿರುವ ಹೊಳಲ್ಕೆರೆ ಪಪಂನ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು ರಾಷ್ಟ್ರೀಯ ಪಕ್ಷ ಗಳಾದ ಕಾಂಗ್ರೆಸ್‌, ಬಿಜೆಪಿ ಮೇಲೆ ಮುನಿದಿರುವ ಮತದಾರ ಪಕ್ಷೇತರರಿಗೆ ಮಣೆ ಹಾಕಿದ್ದಾರೆ.

Vijaya Karnataka 1 Jun 2019, 5:00 am
ಹೊಳಲ್ಕೆರೆ : ಅರೆಮಲೆನಾಡು ಎಂದೇ ಖ್ಯಾತಿ ಪಡೆದಿರುವ ಹೊಳಲ್ಕೆರೆ ಪಪಂನ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು ರಾಷ್ಟ್ರೀಯ ಪಕ್ಷ ಗಳಾದ ಕಾಂಗ್ರೆಸ್‌, ಬಿಜೆಪಿ ಮೇಲೆ ಮುನಿದಿರುವ ಮತದಾರ ಪಕ್ಷೇತರರಿಗೆ ಮಣೆ ಹಾಕಿದ್ದಾರೆ.
Vijaya Karnataka Web voter turnout for independents
ಪಕ್ಷೇತರರಿಗೆ ಮಣೆ ಹಾಕಿದ ಮತದಾರ


ಪಪಂ ಒಟ್ಟು 16 ವಾರ್ಡ್‌ಗಳಿದ್ದು ಅದರಲ್ಲಿ ಕಾಂಗ್ರೆಸ್‌ 3, ಬಿಜೆಪಿ 6, ಪಕ್ಷೇತರರು 7 ಸ್ಥಾನ ಪಡೆಯುವ ಮೂಲಕ ಅತಂತ್ರ ಸ್ಥಿತಿ ಎದುರಾಗಿದೆ. ಅಲ್ಲದೆ ಒಂದೇ ಕುಟುಂಬದ ಖಾಟ್ರೋತ್‌ ಕುಟುಂಬದ ಮೂವರನ್ನು ಪಕ್ಷೇತರ ಸ್ಥಾನದಲ್ಲಿ ಗೆಲ್ಲಿಸುವ ಮೂಲಕ ಐತಿಹಾಸಿಕ ಗೆಲುವನ್ನು ಪಟ್ಟಣದ ಮತದಾರ ಸೃಷ್ಟಿಸಿದಂತಾಗಿದೆ.

ಕಳೆದ ಬಾರಿ 2014ರಲ್ಲಿ ಬಿಜೆಪಿ ಮತ್ತು ಕೆಜೆಪಿ ಇಬ್ಬಾಗವಾಗಿ ಸ್ಪರ್ಧಿಸಿದ್ದವು. ಕಳೆದ ಬಾರಿ ಒಟ್ಟು 15 ವಾರ್ಡ್‌ಗಳಿದ್ದವು. ಅದರಲ್ಲಿ ಕಾಂಗ್ರೆಸ್‌ 7, ಕೆಜೆಪಿ 5, ಬಿಜೆಪಿ 2, ಪಕ್ಷೇತರ 1 ಸ್ಥಾನ ಪಡೆದಿತ್ತು. ಪಕ್ಷೇತರರ ಜತೆಗೂಡಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಿತ್ತು.

ಈ ಬಾರಿ ಒಟ್ಟು 16 ವಾರ್ಡ್‌ಗಳಲ್ಲಿ 44 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಕಾಂಗ್ರೆಸ್‌ 13 ರಲ್ಲಿ, ಬಿಜೆಪಿ 14ರಲ್ಲಿ, ಜೆಡಿಎಸ್‌ 2ರಲ್ಲಿ ಪಕ್ಷೇತರರು 15 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಕಾಂಗ್ರೆಸ್‌ 2, 5 ಮತ್ತು 6ನೇ ವಾರ್ಡ್‌ನಲ್ಲಿ, ಬಿಜೆಪಿ 7 ಮತ್ತು 10 ವಾರ್ಡ್‌ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.

ಮರು ಆಯ್ಕೆಯಾದವರು: ಸೈಯದ್‌ ಸಜೀಲ್‌ ಮೂರನೇ ಬಾರಿ ಆಯ್ಕೆಯಾಗಿದ್ದು ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಸವಿತಾ ನರಸಿಂಹ ಖಾಟ್ರೋತ್‌, ಕೆ.ಸಿ.ರಮೇಶ್‌, ಪಿ.ಎಚ್‌.ಮುರುಗೇಶ್‌ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

59 ನೋಟ ಮತದಾನ: ವಿಶೇಷವೆಂದರೆ 16 ವಾರ್ಡ್‌ಗಳಲ್ಲಿಯೂ ಕೂಡ ನೋಟ ಮತದಾನ ಚಲಾವಣೆಯಾಗಿದ್ದು, ಪ್ರತಿ ವಾರ್ಡ್‌ಗಳಲ್ಲಿಯೂ ಕೂಡ ನೋಟ ಮತ ಚಲಾವಣೆಯಾಗಿದೆ. 16 ವಾರ್ಡ್‌ಗಳಲ್ಲಿ ಒಟ್ಟು 59 ನೋಟ ಮತದಾನವಾಗಿದೆ. 8 ಅಂಚೆ ಮತದಾನವಾಗಿದೆ.

ಗೆಲುವಿನ ಅಂತರ: 8ನೇ ವಾರ್ಡ್‌ನ ಆರ್‌.ಎ.ಅಶೋಕ್‌ ಅತಿ ಹೆಚ್ಚು 294 ಮತಗಳ ಅಂತರದಿಂದ, 3ನೇ ವಾರ್ಡ್‌ ಡಿ.ಎಸ್‌.ವಿಜಯ ಅತಿ ಕಡಿಮೆ 8 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

----

45 ನಿಮಿಷದಲ್ಲಿ ಮತ ಎಣಿಕೆ ಮುಕ್ತಾಯ

ತಾಲೂಕು ಕಚೇರಿ ಕೊಠಡಿಯೊಂದರಲ್ಲಿ ಮತ ಎಣಿಕೆ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಿದ್ದು ಒಂದು ಬಾರಿಗೆ 2 ವಾರ್ಡ್‌ಗಳ ಮತ ಎಣಿಕೆ ಮಾಡಿದ್ದು, 8 ಸುತ್ತುಗಳಲ್ಲಿ ಮತ ಎಣಿಕೆ ಮುಕ್ತಾಯಗೊಳಿಸಲಾಯಿತು. 8.45ಕ್ಕೆ ಅಂದರೆ ಕೇವಲ 45 ನಿಮಿಷಗಳಲ್ಲಿ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿತು.

====

ಒಂದೇ ಕುಟುಂಬದ ಮೂವರ ಗೆಲುವು

ಯಾವ ಪಕ್ಷ ದಿಂದಲೂ ಟಿಕೆಟ್‌ ನಿರೀಕ್ಷಿಸದೆ 5ನೇ ವಾರ್ಡ್‌ನಲ್ಲಿ ವಿಜಯಸಿಂಹ ಖಾಟ್ರೋತ್‌, 6ನೇ ವಾರ್ಡ್‌ ಮಮತ ಜಯಸಿಂಹ ಖಾಟ್ರೋತ್‌ ಮತ್ತು 15 ವಾರ್ಡ್‌ನಲ್ಲಿ ಸವಿತಾ ನರಸಿಂಹ ಖಾಟ್ರೋತ್‌ ಕಣದಲ್ಲಿದ್ದರು. ಪಟ್ಟಣದ ಖಾಟ್ರೋತ್‌ ಪ್ಯಾಮಿಲಿಯ ಮೂವರು ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

=======

ಆತ್ಮಹತ್ಯೆಗೆ ಯತ್ನ

ಪಪಂನ ಎಂಟನೇ ವಾರ್ಡ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಹಣಾಹಣಿ ಇತ್ತು. ಕಾಂಗ್ರೆಸ್‌ನಿಂದ ಮಂಜುನಾಥ್‌ ಸಂಗನಗುಂಡಿ, ಬಿಜೆಪಿಯಿಂದ ಆರ್‌.ಎ.ಅಶೋಕ್‌ ಆಯ್ಕೆ ಬಯಸಿದ್ದರು. ಇಲ್ಲಿನ ವಾರ್ಡ್‌ನಲ್ಲಿ ಬಿಜೆಪಿಯ ಅಶೋಕ್‌ ಜಯಗಳಿಸಿದ್ದರು. ಮಾವ ಮಂಜುನಾಥ್‌ ಅವರ ಸೋಲಿನಿಂದ ಮನನೊಂದ ಅಳಿಯ ಅರ್ಜುನ್‌(25)ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಈತನನ್ನು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ