ಆ್ಯಪ್ನಗರ

ಚಿತ್ರದುರ್ಗದ ವಿವಿ ಸಾಗರಕ್ಕೆ 20 ಟಿಎಂಸಿ ನೀರು ಹರಿಸುವ ವಿಶ್ವಾಸ: ಸಂಸದ ಎ.ನಾರಾಯಣಸ್ವಾಮಿ

ಚಿತ್ರದುರ್ಗ ಜಿಲ್ಲೆಯ ಸಂಸದನಾಗಿ ಭದ್ರಾ ಯೋಜನೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಸುತ್ತೇನೆ. ಈ ವರ್ಷದ ಮಳೆಗಾಲ ಮುಗಿಯುವ ಸಮಯದೊಳಗೆ ವಿವಿ ಸಾಗರಕ್ಕೆ 20 ಟಿಎಂಸಿ ನೀರು ತುಂಬಿಸುವ ವಿಶ್ವಾಸವಿದೆ ಎಂದು ಸಂಸದ ನಾರಾಯಣಸ್ವಾಮಿ ಹೇಳಿದರು.

Vijaya Karnataka Web 22 May 2020, 1:15 pm
ಹೊಸದುರ್ಗ: ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿದರೆ, ಈ ವರ್ಷದ ಮಳೆಗಾಲ ಮುಗಿಯುವ ಸಮಯದೊಳಗೆ ವಿವಿ ಸಾಗರಕ್ಕೆ 20 ಟಿಎಂಸಿ ನೀರು ತುಂಬಿಸುವ ವಿಶ್ವಾಸವಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
Vijaya Karnataka Web ವಾಣಿ ವಿಲಾಸ ಸಾಗರ
ವಾಣಿ ವಿಲಾಸ ಸಾಗರ


ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಬಳಿಯ ಭದ್ರಾ ಮೇಲ್ದಂಡೆ ಯೋಜನೆಯ ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಭದ್ರಾ ಯೋಜನೆ ಆದಷ್ಟು ಬೇಗ ಸಾಕಾರಗೊಳ್ಳಬೇಕು. ಚಿತ್ರದುರ್ಗ ಜಿಲ್ಲೆಯ ಸಂಸದನಾಗಿ ಭದ್ರಾ ಯೋಜನೆಯ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಸುತ್ತೇನೆ. ರೈಲ್ವೆ ಅಂಡರ್‌ ಪಾಸ್‌ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಿದೆ. ಈ ಸಂಬಂಧ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಮನವರಿಕೆ ಮಾಡಿದ್ದೆ. ಅವರು ರೈಲು ನಿಲುಗಡೆಗೆ ಆದೇಶ ನೀಡಿದ್ದರು. ಅದರೆ ಅಧಿಕಾರಿಗಳು ಬದಲಿ ರೈಲು ಮಾರ್ಗ ನಿರ್ಮಿಸಿ ಕಾಮಗಾರಿಗೆ ಅವಕಾಶ ಮಾಡಿಕೊಡುವ ತೀರ್ಮಾನ ಮಾಡಿದ್ದರಿಂದ ಕಾಮಗಾರಿ ಆರಂಭ ತಡವಾಗಲಿದೆ. ದಿನಪೂರ್ತಿ ಕೆಲಸ ನಿರ್ವಹಿಸುವ ಮೂಲಕ ಬದಲಿ ರೈಲು ಮಾರ್ಗ ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ. 10 ದಿನದಲ್ಲಿ ಕೆಲಸ ಮುಗಿದು ಕಾಮಗಾರಿ ಆರಂಭವಾಗಲಿದೆ. ಕಾಮಗಾರಿ ಮುಗಿಯುವರಗೆ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸುವ ಕೆಲಸ ಮಾಡುತ್ತೇನೆ ಎಂದರು.

ವಾಣಿ ವಿಲಾಸ ಸಾಗರ ಜಲಾಶಯ ಭರ್ತಿ ಮಾಡುವ ಕನಸು ನನಸು - ರಮೇಶ್‌ ಜಾರಕಿಹೊಳಿ

ಕಾಮಗಾರಿಯ ವೇಗ ಹೆಚ್ಚಿಸಲು ಮತ್ತಷ್ಟು ಟಿಪ್ಪರ್‌ ಲಾರಿ ಮತ್ತಿತರ ಯಂತ್ರಗಳ ಅವಶ್ಯಕತೆಯಿದೆ ಎಂಬುದನ್ನು ಅಧಿಕಾರಿಗಳು ಸಂಸದರ ಗಮನಕ್ಕೆ ತಂದಿದ್ದರಿಂದ ಅಗತ್ಯವಾದ ಲಾರಿ ಹಾಗೂ ಯಂತ್ರಗಳನ್ನು ತರಿಸುವಂತೆ ಅದಕ್ಕೆ ಅಗತ್ಯವಾದ ಹಣವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸುವುದಾಗಿ ತಿಳಿಸಿದರು. ಜತೆಗೆ ಟಿಪ್ಪರ್‌ ಲಾರಿಗಳು ಸ್ಥಳಕ್ಕೆ ತರಿಸಿ ಕಾಮಗಾರಿಗೆ ಒದಗಿಸಿದರು.

ವೇದಾವತಿಗೆ ಹರಿಯಿತು ವಿವಿ ಸಾಗರ ನೀರು: ಸಚಿವ ರಮೇಶ್‌ ಜಾರಕಿಹೊಳಿ ಚಾಲನೆ

ರೈಲ್ವೆ ಇಲಾಖೆ ಹಾಗೂ ಭದ್ರಾ ಮೇಲ್ದಂಡೆ ಇಲಾಖೆ ಅಧಿಕಾರಿಗಳು, ಬಿಜೆಪಿ ಮುಖಂಡ ಗೂಳಿಹಟ್ಟಿ ಕೃಷ್ಣಮೂರ್ತಿ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ತುಂಬಿನಕೆರೆ ಬಸವರಾಜ್‌, ಪುರಸಭೆ ಸದಸ್ಯ ಮಂಜುನಾಥ್‌, ಉಮೇಶ್‌ ಗುಜ್ಜಾರ್‌, ಅರುಣ ಕುಮಾರ್‌, ಗೌತಮ್‌ ಮತ್ತಿತರರಿದ್ದರು.

ಶೀಘ್ರದಲ್ಲಿಯೇ ವೇದಾವತಿ ನದಿಗೆ ನೀರು, ಸಂಸದ ನಾರಾಯಣಸ್ವಾಮಿ ಭರವಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ