ಆ್ಯಪ್ನಗರ

ವಿಮೆ ಹಣಕ್ಕಾಗಿ ಸುಪಾರಿ ನೀಡಿ ಗಂಡನ ಕೊಲೆ

2018ರ ಸೆ.15ರಂದು ರಾ.ಹೆ-4ರ ರಸ್ತೆಯಲ್ಲಿ ಸೀಬಾರ ಸಮೀಪ ಕಾಪ್ರಾ ಪೆಟ್ರೋಲ್‌ ಬಂಕ್‌ ಹತ್ತಿರ ರಾಜಣ್ಣ (42) ಅಪಘಾತದಿಂದ ಮೃತಪಟ್ಟಿದ್ದಾರೆಂದು ಆತನ ಹೆಂಡತಿ ಕಮಲಮ್ಮ ದೂರು ನೀಡಿದ್ದರು.

Vijaya Karnataka 17 Feb 2019, 8:05 am
ಚಿತ್ರದುರ್ಗ: ಇನ್ಶೂರೆನ್ಸ್‌ ಹಣದಾಸೆಗಾಗಿ ಗಂಡನ ಕೊಲೆಗೆ ಪತ್ನಿಯೇ ಸುಪಾರಿ ನೀಡಿದ ಪ್ರಕರಣವೊಂದನ್ನು ಬೇಧಿಸುವಲ್ಲಿ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಆರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web Kill 1


ನಾಗರಾಜ (35), ಚಿಕ್ಕಬೆನ್ನೂರು, ಕಮಲಮ್ಮ ಮೃತನ ಪತ್ನಿ(32) ಗುಡ್ಡದರಂಗವ್ವನಹಳ್ಳಿ, ಕಾವಾಡಿಗರಹಟ್ಟಿಯ ಎಂ ಪ್ರದೀಪ (22), ಗಿರೀಶ (20), ಕೊಟೇಶ(19), ಕಿರಣ್‌ (19) ನಲ್ಲಿಕಟ್ಟೆ ಇವರನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

2018ರ ಸೆ.15ರಂದು ರಾ.ಹೆ-4ರ ರಸ್ತೆಯಲ್ಲಿ ಸೀಬಾರ ಸಮೀಪ ಕಾಪ್ರಾ ಪೆಟ್ರೋಲ್‌ ಬಂಕ್‌ ಹತ್ತಿರ ರಾಜಣ್ಣ (42) ಅಪಘಾತದಿಂದ ಮೃತಪಟ್ಟಿದ್ದಾರೆಂದು ಆತನ ಹೆಂಡತಿ ಕಮಲಮ್ಮ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ರಾಜಣ್ಣನನ್ನು ಕೊಲೆ ಮಾಡಲಾಗಿದ್ದು, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ನಂಬಿಸಲು ಯತ್ನಿಸಲಾಗಿದೆ ಎನ್ನುವ ಅನುಮಾನ ಬಂದಿದೆ.

ಮೃತನ ಪತ್ನಿ ಕಮಲಮ್ಮ ಪೊಲೀಸರು ವಿಚಾರಣೆಗೊಳಪಡಿಸಿದಾಗ ತನ್ನ ಗಂಡನು ಐದು ಲಕ್ಷ ರೂ. ಇನ್ಸೂರೆನ್ಸ್‌ ಪಾಲಿಸಿ ಮಾಡಿಸಿದ್ದು ಸಾಯಿಸಿದರೆ ಹಣ ಸಿಗುತ್ತದೆ ಎಂದು ಭಾವಿಸಿ ಕೊಲೆಗೆ ಸುಪಾರಿ ನೀಡಿರುವುದಾಗಿ ತಿಳಿದು ಬಂದಿದೆ. ಕಮಲಮ್ಮ ತನ್ನ ಕುಟುಂಬ ಸ್ನೇಹಿತನಾದ ಗುಡ್ಡದ ರಂಗವ್ವನಹಳ್ಳಿ ಗ್ರಾಮದ ನಾಗರಾಜನಿಗೆ ತನ್ನ ಗಂಡನನ್ನು ಕೊಲೆ ಮಾಡಿದರೆ ಒಂದೂವರೆ ಲಕ್ಷ ರೂ. ಹಣ ಕೊಡುವುದಾಗಿ ಅಮಿಷವೊಡ್ಡಿದ್ದಾಳೆ. ತನ್ನ ಗಂಡ ರಾಜಣ್ಣನನ್ನು ಸೆ.14, 2018 ರಂದು ಸಂಜೆ ರಾಜಣ್ಣನನ್ನು ನಾಗರಾಜನೊಂದಿಗೆ ದೇವಸ್ಥಾನಕ್ಕೆ ಹೋಗಿ ಬಾ ಕಳುಹಿಸಿದ್ದಾಳೆ. ನಾಗರಾಜನು ರಾಜಣ್ಣನನ್ನು ಆತನ ಮೋಟಾರ್‌ ಸೈಕಲ್‌ನಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ತನ್ನ ಸ್ನೇಹಿತರೊಂದಿಗೆ ಸೇರಿ ಮಫ್ಲರ್‌ನಿಂದ ರಾಜಣ್ಣನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ.

ರಾಜಣ್ಣನ ಸಾವು ಆಕ್ಸಿಡೆಂಟ್‌ನಿಂದ ಆಗಿದೆ ಎಂದು ನಂಬಿಸಲು ಹೆಣವನ್ನು ಪ್ರದೀಪನ ಆಟೋದಲ್ಲೇ ಹಾಕಿಕೊಂಡು ಬಂದು ಕಾಪ್ರಾ ಪೆಟ್ರೋಲ್‌ ಬಂಕ್‌ ಹತ್ತಿರ ಎನ್‌.ಹೆಚ್‌-4 ರಸ್ತೆಗೆ ಹಾಕಿ ಮೋಟಾರ್‌ ಸೈಕಲ್‌ನ್ನು ಮಾಸ್ಕ್‌ನ್ನು ಮತ್ತು ಮಿರರ್‌ನ್ನು ಕಲ್ಲಿನಿಂದ ಜಜ್ಜಿ ಅದನ್ನು ಸಹ ಹೆಣದ ಸಮೀಪ ತಳ್ಳಿ ಬಂದಿದ್ದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಈ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದು, ಬಹುಮಾನ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ