ಆ್ಯಪ್ನಗರ

ಮಹಿಳೆ ಕೊಲೆ: ಆರು ಆರೋಪಿಗಳ ಬಂಧನ

ಮಹಿಳೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka 12 May 2019, 5:00 am
ಚಿತ್ರದುರ್ಗ : ಮಹಿಳೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web woman murder six convicts arrested
ಮಹಿಳೆ ಕೊಲೆ: ಆರು ಆರೋಪಿಗಳ ಬಂಧನ


ಹಿರಿಯೂರು ಟೌನ್‌ ಹರಿಶ್ಚಂದ್ರ ಘಾಟ್‌ನ ರೇಷ್ಮಾ(25) ಕೊಲೆಗೀಡಾದ ಮಹಿಳೆ. ಕೊಲೆ ಆರೋಪದ ಮೇರೆಗೆ ರೇಷ್ಮಾಳ ಗಂಡ ಇಬ್ರಾಹಿಂ ಕಲೀಲುಲ್ಲಾ(26), ತಾಯಿ ಮುನೀರಾ (60), ಸಹೋದರ ಸಾದಿಕ್‌(30), ಮೋಹಿದ್ದೀನ್‌ ಸಾಬ್‌(65), ನೂರ್‌ ಅಹಮದ್‌(37) ಯಾಸ್ಮಿನಾ(30) ಬಂಧಿತರು.

ಪ್ರಕರಣದ ಹಿನ್ನೆಲೆ:

ಎರಡು ವರ್ಷದ ಹಿಂದೆ ಹೊಸದುರ್ಗ ತಾಲೂಕಿನ ಮತ್ತೋಡು ಗ್ರಾಮದ ರೇಷ್ಮಾರನ್ನು ಹಿರಿಯೂರು ಹರಿಶ್ಚಂದ್ರ ಘಾಟ್‌ನ ಇಬ್ರಾಹಿಂ ಕಲೀಲುಲ್ಲಾಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಯ ನಡುವೆ ವೈಮನಸ್ಯ ಇದ್ದು, ಆಗಾಗ ಜಗಳವಾಡುತ್ತಿದ್ದರು ಎನ್ನಲಾಗಿದೆ.

ಏ.29ರಂದು ರೇಷ್ಮಾಳ ತಾಯಿ ಮುಮ್ತಾಜ್‌ ತನ್ನ ಮಗಳು ಏ.25 ರಿಂದ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಮೇ 5 ರಂದು ಹಿರಿಯೂರು ತಾಲೂಕಿನ ಗಿಡ್ಡೋಬಹಳ್ಳಿ ಕ್ರಾಸ್‌ ಬಳಿ ಮಹಿಳೆಯ ಶವ ಸಿಕ್ಕಿದೆ. ಮಹಿಳೆ ಬುರ್ಖಾ ಧರಿಸಿದ್ದರಿಂದ ಪೊಲೀಸರು ಚುರುಕಾಗಿ ರೇಷ್ಮಾಳ ತಾಯಿ ಮುಮ್ತಾಜ್‌ರನ್ನು ಕರೆಸಿ, ಗುರುತಿಸಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಪಿಐ ಚನ್ನೆಗೌಡ ನೇತೃತ್ವದ ತಂಡ ಕುಟುಂಬದ ಸದಸ್ಯರೇ ಸಂಚು ಮಾಡಿ ಕೊಲೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ರೇಷ್ಮಾಳ ಗಂಡ ಇಬ್ರಾಹಿಂ ಸೇರಿ ಒಟ್ಟು ಆರು ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

-------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ