ಆ್ಯಪ್ನಗರ

ಯುವ ಜನತೆ ದಲಿತ ಲೇಖಕರ ಕೃತಿ ಓದಲಿ

ದಲಿತ ಲೇಖಕರ ಬರವಣಿಗೆಯನ್ನು ಇಂದಿನ ಯುವ ಜನಾಂಗ ಓದಬೇಕು ಎಂದು ಸಾಹಿತಿ ಚಂದ್ರಶೇಖರ ತಾಳ್ಯ ಹೇಳಿದರು.

Vijaya Karnataka 21 Jan 2019, 5:00 am
ಚಿತ್ರದುರ್ಗ : ದಲಿತ ಲೇಖಕರ ಬರವಣಿಗೆಯನ್ನು ಇಂದಿನ ಯುವ ಜನಾಂಗ ಓದಬೇಕು ಎಂದು ಸಾಹಿತಿ ಚಂದ್ರಶೇಖರ ತಾಳ್ಯ ಹೇಳಿದರು.
Vijaya Karnataka Web young people should read the work of dalit writers
ಯುವ ಜನತೆ ದಲಿತ ಲೇಖಕರ ಕೃತಿ ಓದಲಿ


ನಗರದ ತರಾಸು ರಂಗ ಮಂದಿರದಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್‌ ಭಾನುವಾರ ಆಯೋಜಿಸಿದ್ದ 15ನೇ ವರ್ಷದ ಜಾನಪದ ಸಾಂಸ್ಕೃತಿಕ ಉತ್ಸವದಲ್ಲಿ ಡಾ.ಗೋವಿಂದ ಅವರ ನಾಲ್ಕು ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ದಲಿತ ಲೇಖಕರು ದುಃಖ, ಸಂಕಟ ಅನುಭವಿಸಿ ಬರೆಯುತ್ತಾರೆ. ಆದ್ದರಿಂದ ಅವರ ಬರವಣಿಗೆಯಲ್ಲಿ ಸಂವೇದನಾಶೀಲತೆ ಇರುತ್ತದೆ. ಭಾರತದಲ್ಲಿ ದಲಿತ ಸಮಾಜ ಹೆಚ್ಚು ನೋವು, ಸಂಕಟ ಅನುಭವಿಸುತ್ತಿದೆ. ದಲಿತ ಸಮುದಾಯ ಅತ್ಯಂತ ವಿಶಿಷ್ಟ ಸಮುದಾಯ. ಇಂದೂ ಕೂಡ ಕೋಲಾರ ಜಿಲ್ಲೆಯಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ. ಮಾನವೀಯತೆ ಇರುವ ಯಾವ ವ್ಯಕ್ತಿ ಕೂಡ ಈ ರೀತಿ ನಡೆದುಕೊಳ್ಳಬಾರದು. ಇದನ್ನು ನೋಡಿದರೆ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ಕೊನೆಗಾಣುವುದಿಲ್ಲ ಅಂಥ ಅನಿಸುತ್ತಿದೆ. ಇಡೀ ಮಾನವ ಕುಲ ಮೇಲಕ್ಕೆತ್ತುವ ಚಿಂತನೆ ಮಾಡಿದವರು ಗಾಂಧೀಜಿ, ಅಂಬೇಡ್ಕರ್‌ ಹಾಗೂ ಜಗಜೀವನರಾಮ್‌ ಎಂದರು.

ಕಾರ್ಯಕ್ರಮದಲ್ಲಿ ಡಾ.ಯಲ್ಲಪ್ಪ ಕೆ.ಕೆ.ಪುರ ಅವರ ಬರಹ ಕುರಿತು ಲೇಖಕ ರಂಗನಾಥ ಆರನಕಟ್ಟೆ, ಪ್ರೊ.ಏ.ಕೆ.ಹಂಪಣ್ಣ ಅವರ ಕಾವ್ಯವಲೋಕನ ಕುರಿತು ಮೈಸೂರಿನ ವಿಮರ್ಶಕ ಡಾ.ಬಿ.ವಿ.ವಸಂತಕುಮಾರ್‌, ಎಸ್‌.ಆರ್‌.ಗುರುನಾಥ ಅವರ ಬದುಕು ಬರಹ ಕುರಿತು ಇತಿಹಾಸ ಉಪನ್ಯಾಸಕ ಡಾ.ಮಹಾಂತೇಶ್‌, ಪ್ರೊ.ಎಚ್‌.ಲಿಂಗಪ್ಪ ಅವರ ಬದುಕು ಬರಹ ಕುರಿತು ಚಿತ್ರದುರ್ಗ ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿದರು.

ಡಾ.ಗೋವಿಂದ ಅವರ ಜಾನಪದ ಚಿಂತನೆ, ಸಿಂಚನ, ಅವಲೋಕನ ಹಾಗೂ ಜಾನಪದ ಸಮಾಗಮ ಕೃತಿ ಬಿಡುಗಡೆ ಮಾಡಲಾಯಿತು.

ಜಾನಪದ ಲೇಖಕ ಮೀರಸಾಬಿಹಳ್ಳಿ ಶಿವಣ್ಣ, ಮುಖಂಡ ಜಯಣ್ಣ, ಸಾಹಿತಿ ಡಾ.ಗೋವಿಂದ, ಚಿಂತಕ ಎಸ್‌.ಎ.ಗೋವರ್ಧನ, ಪ್ರೊ.ಎಚ್‌.ಲಿಂಗಪ್ಪ, ಸಾಹಿತಿ ಎಸ್‌.ಆರ್‌.ಗುರುನಾಥ, ಸಾಹಿತಿ ಪ್ರೊ.ಏ.ಕೆ.ಹಂಪಣ್ಣ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ