ಆ್ಯಪ್ನಗರ

ಹೊರ ರಾಜ್ಯದ ಕಾರ್ಮಿಕ ದಂಪತಿ ಅಡ್ಡಗಟ್ಟಿ ದರೋಡೆ

ಕಾರ್ಮಿಕ ದಂಪತಿಯನ್ನು ದುಷ್ಕರ್ಮಿಗಳ ಗ್ಯಾಂಗ್‌ ಅಡ್ಡಗಟ್ಟಿ ಹಣ ಸುಲಿಗೆ ನಡೆಸಿರುವ ಘಟನೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 23 Nov 2018, 5:00 am
ಬೆಂಗಳೂರು: ಕಾರ್ಮಿಕ ದಂಪತಿಯನ್ನು ದುಷ್ಕರ್ಮಿಗಳ ಗ್ಯಾಂಗ್‌ ಅಡ್ಡಗಟ್ಟಿ ಹಣ ಸುಲಿಗೆ ನಡೆಸಿರುವ ಘಟನೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web
ಹೊರ ರಾಜ್ಯದ ಕಾರ್ಮಿಕ ದಂಪತಿ ಅಡ್ಡಗಟ್ಟಿ ದರೋಡೆ


ಪಶ್ಚಿಮ ಬಂಗಾಳ ಮೂಲದ ಸುಖವತಿ ಮತ್ತು ಸುನೀಲ್‌ ದಂಪತಿ ದರೋಡೆಗೆ ಒಳಗಾದವರು. ಒಂದು ವರ್ಷದ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಇವರು ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದರಿಂದ ಹೊಸ ಕೆಲಸ ಹುಡುಕಿಕೊಂಡು ಮುಂಬಯಿಯ ಭೀವಂಡಿಗೆ ತೆರಳಿದ್ದರು. ಬೀವಂಡಿಯಲ್ಲಿ ಕೆಲಸ ಸಿಗದ ಕಾರಣ ನ.19 ರಂದು ರಾತ್ರಿ 11 ಗಂಟೆ ಸುಮಾರಿಗೆ ರೈಲಿನಲ್ಲಿ ಯಶವಂತಪುರಕ್ಕೆ ವಾಪಸ್‌ ಬಂದಿದ್ದರು. ಯಶವಂತಪುರ ರೈಲ್ವೆ ನಿಲ್ದಾಣದಿಂದ ಕೊಡಿಗೇಹಳ್ಳಿ ಗೇಟ್‌ಗೆ ತಡರಾತ್ರಿಯಲ್ಲಿ ಕಾಲ್ನಡಿಯಲ್ಲಿ ತೆರಳುತ್ತಿದ್ದರು. ಹೆಬ್ಬಾಳ ಕೆರೆಯ ಪಾರ್ಕ್‌ ಬಳಿ ದಂಪತಿ ನಡೆದುಕೊಂಡು ಹೋಗುವಾಗ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನಾಲ್ವರು ದುಷ್ಕರ್ಮಿಗಳು ದಂಪತಿಯನ್ನು ಅಡ್ಡಗಟ್ಟಿ, ಥಳಿಸಿದ್ದಾರೆ. ಮೊದಲು ಸುನೀಲ್‌ ಪ್ಯಾಂಟ್‌ ಜೇಬಿನಲ್ಲಿ ದುಷ್ಕರ್ಮಿಗಳು ಹುಡುಕಾಟ ನಡೆಸಿದ್ದು, ಹಣ ಸಿಗದಿದ್ದಾಗ ಮಹಿಳೆಯ ಕಿವಿ ಓಲೆ ಹಾಗೂ ಮೂಗುತಿ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಹಿಂದೆ ಸುನೀಲ್‌ ಕೊಡಿಗೇಹಳ್ಳಿ ಗೇಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ಹುಡುಕಿಕೊಂಡು ಕೊಡಿಗೇಹಳ್ಳಿ ಗೇಟ್‌ಗೆ ಹೋಗುವಾಗ ಘಟನೆ ನಡೆದಿದೆ. ಘಟನೆ ಸಂಬಂಧ ಸಿಸಿವಿಟಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿರುವ ಕೊತ್ತನೂರು ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ