ಆ್ಯಪ್ನಗರ

ಡ್ರಗ್ಸ್‌ ಸೇವಿಸಿ ಕಾಟ ಕೊಡಬೇಡಿ ಎಂದಿದ್ದಕ್ಕೆ ಚಾಕು ಇರಿತ

ಮಾದಕ ವಸ್ತುವಿನ ಚಟಕ್ಕೆ ಬಿದ್ದು ಏರಿಯಾದಲ್ಲಿ ಮಹಿಳೆಯರಿಗೆ ಕಾಟ ಕೊಡಬೇಡಿ ಎಂದು ಬುದ್ಧಿವಾದ ಹೇಳಿದವರಿಗೇ ಚಾಕುವಿನಿಂದ ಇರಿದು ಪರಾರಿ ಆಗಿದ್ದ ಆರು ಮಂದಿಯ ಗ್ಯಾಂಗನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka 1 Nov 2018, 5:00 am
ಬೆಂಗಳೂರು : ಮಾದಕ ವಸ್ತುವಿನ ಚಟಕ್ಕೆ ಬಿದ್ದು ಏರಿಯಾದಲ್ಲಿ ಮಹಿಳೆಯರಿಗೆ ಕಾಟ ಕೊಡಬೇಡಿ ಎಂದು ಬುದ್ಧಿವಾದ ಹೇಳಿದವರಿಗೇ ಚಾಕುವಿನಿಂದ ಇರಿದು ಪರಾರಿ ಆಗಿದ್ದ ಆರು ಮಂದಿಯ ಗ್ಯಾಂಗನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web  4
ಡ್ರಗ್ಸ್‌ ಸೇವಿಸಿ ಕಾಟ ಕೊಡಬೇಡಿ ಎಂದಿದ್ದಕ್ಕೆ ಚಾಕು ಇರಿತ


ಕಸವನಹಳ್ಳಿ ಮುಖ್ಯರಸ್ತೆಯ ನಿವಾಸಿಯಾದ ಅರ್ಜುನ್‌ (33) ಮತ್ತು ಇವರ ಸ್ನೇಹಿತ ಕಾಲೇಜು ವಿದ್ಯಾರ್ಥಿ ಚಂದ್ರು ಚಾಕು ಇರಿತಕ್ಕೆ ಒಳಗಾದವರು. ಚಾಕು ಇರಿದ ಆರೋಪದ ಮೇಲೆ ಅದೇ ಏರಿಯಾದ ಸೆಲ್ವರಾಜ್‌, ಅರುಣ್‌, ದಿನೇಶ್‌, ಆನಂದ್‌, ಅವಿನಾಶ್‌, ಲೆಹರ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಕಸವನಹಳ್ಳಿ ಪಕ್ಕದ ಸ್ಲಂ ನಿವಾಸಿಗಳಾಗಿದ್ದು ಇವರೆಲ್ಲರೂ ಏರಿಯಾದಲ್ಲಿ ಓಡಾಡುವ ಮಹಿಳೆಯರಿಗೆ ನಾನಾ ರೀತಿಯ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮೇಲಿಂದ ಮೇಲೆ ದೂರುಗಳು ಕೇಳಿ ಬಂದಿದ್ದರಿಂದ ಅರ್ಜುನ್‌ ಅವರು ಆರೋಪಿಗಳಿಗೆ ಬೀದಿಯಲ್ಲೇ ಬುದ್ಧಿ ಹೇಳಿದ್ದರು. ವರ್ತನೆ ಬದಲಿಸಿಕೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿಯೂ ಎಚ್ಚರಿಸಿದ್ದರು. ಇದೇ ಸೇಡು ಇಟ್ಟುಕೊಂಡು ಆರೋಪಿಗಳು ಹೊಂಚು ಹಾಕಿ ಚಾಕು ಇರಿದಿದ್ದಾರೆ. ಇರಿತಕ್ಕೆ ಒಳಗಾದ ಇಬ್ಬರೂ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ