ಆ್ಯಪ್ನಗರ

ಬ್ಯಾಂಕ್‌ ಕೌಂಟರ್‌ನಿಂದ 10 ಲಕ್ಷ ಕಳವು!

ಮಲ್ಲೇಶ್ವರದಲ್ಲಿರುವ ವಿಜಯಾ ಬ್ಯಾಂಕ್‌ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳ ತಂಡವೊಂದು 10 ಲಕ್ಷ ರೂ. ದೋಚಿದ್ದಾರೆ.

Vijaya Karnataka 5 Sep 2018, 5:00 am
ಬೆಂಗಳೂರು: ಮಲ್ಲೇಶ್ವರದಲ್ಲಿರುವ ವಿಜಯಾ ಬ್ಯಾಂಕ್‌ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳ ತಂಡವೊಂದು 10 ಲಕ್ಷ ರೂ. ದೋಚಿದ್ದಾರೆ.
Vijaya Karnataka Web money


ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಜಯಾ ಬ್ಯಾಂಕ್‌ ಸಂಪಿಗೆ ರಸ್ತೆ ಚೀಫ್‌ ಮ್ಯಾನೇಜರ್‌ ಎಸ್‌.ಸಿ ನಾಯಕ್‌ ಅವರು ಸೋಮವಾರ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆ.31ರಂದು 12 ಗಂಟೆ ವೇಳಗೆ ಬ್ಯಾಂಕ್‌ಗೆ ಬಂದಿದ್ದ ಖದೀಮರ ಗುಂಪೊಂದು ಅಲ್ಲಿಂದ ಸಿಬ್ಬಂದಿಗಳ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿದ್ದರು. ಬಳಿಕ ಕ್ಯಾಶ್‌ ಕೌಂಟರ್‌ನ ಹಿಂಭಾಗಕ್ಕೆ ಹೋಗಿ ಅಲ್ಲಿದ್ದ ಸುಮಾರು 10 ಲಕ್ಷ ರೂ. ದೋಚಿದ್ದರು. ಆದರೆ, ತಕ್ಷಣದಲ್ಲಿ ವಿಷಯ ಸಿಬ್ಬಂದಿಗಳ ಗಮನಕ್ಕೆ ಬಂದಿರಲಿಲ್ಲ

ಆದರೆ, ಲೆಕ್ಕ ಪರಿಶೀಲನೆ ವೇಳೆ ಬ್ಯಾಂಕ್‌ನ ಒಟ್ಟು ಹಣದಲ್ಲಿ 10 ಲಕ್ಷ ರೂ. ಕಮ್ಮಿ ಬಂದಿತ್ತು. ಮೊದಲಿಗೆ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿತ್ತು. ಬಳಿಕ ಸಿಸಿ ಟಿವಿ ಕ್ಯಾಮೆರಾ ವಿಡಿಯೊ ಪರಿಶೀಲಿಸಿದಾಗ ಅಪರಿಚಿತ ಏಳು ಜನರ ಗುಂಪು ಕ್ಯಾಶ್‌ ಕೌಂಟರ್‌ ಬಳಿಯಿಂದ ಹಣ ಕದ್ದಿರುವುದು ಗೊತ್ತಾಗಿದೆ ಎಂದು ಎಸ್‌.ಸಿ ನಾಯಕ್‌ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿರುವುದಾಗಿ ಮಲ್ಲೇಶ್ವರ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ