ಆ್ಯಪ್ನಗರ

ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ಪಡೆದು ವಂಚನೆ

ವಧು-ವರರ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಬ್ಬಳು, ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ರೂ. ಪಡೆದು ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ವಂಚಿಸಿದ್ದಾಳೆ.

Vijaya Karnataka 16 Mar 2019, 5:00 am
ಬೆಂಗಳೂರು : ವಧು-ವರರ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಬ್ಬಳು, ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ರೂ. ಪಡೆದು ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ವಂಚಿಸಿದ್ದಾಳೆ.
Vijaya Karnataka Web 18 lakhs cheating techie filed the complaint
ಮದುವೆಯಾಗುವುದಾಗಿ ನಂಬಿಸಿ 18 ಲಕ್ಷ ಪಡೆದು ವಂಚನೆ


ಈ ಸಂಬಂಧ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಜ್ಯೋತಿಕೃಷ್ಣನ್‌(35) ಎಂಬುವರು ನೀಡಿದ ದೂರು ಆಧರಿಸಿ ಜೆ.ಪಿ.ನಗರ ಪುಟ್ಟೇನಹಳ್ಳಿಯ ರಮ್ಯಾ ನಾಯರ್‌ ಮತ್ತು ಟಿ.ಕೆ ಕುಂಜೀರಾಮನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪರಪ್ಪನ ಅಗ್ರಹಾರ ಪೊಲೀಸರು ತಿಳಿಸಿದ್ದಾರೆ.

ಅಮೆರಿಕಾದ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿಕೃಷ್ಣನ್‌, ಭಾರತ್‌ ಮ್ಯಾಟ್ರಿಮೊನಿಯಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದಾಗ 2013ರ ಮಾರ್ಚ್‌ನಲ್ಲಿ ರಮ್ಯಾ ನಾಯರ್‌ ಪರಿಚಯವಾಗಿದ್ದರು. ಕೆಲ ದಿನಗಳ ಚಾಟಿಂಗ್‌ ಬಳಿಕ ಮದುವೆಗೆ ಒಪ್ಪಿದ್ದಳು. ಐಎಎಸ್‌ ಪರೀಕ್ಷೆ ಬರೆಯಲು ಸಿದ್ದತೆ ನಡೆಸಿದ್ದೇನೆ. ಎರಡು ವರ್ಷಗಳ ಬಳಿಕ ಮದುವೆ ಆಗುತ್ತೇನೆ ಎಂದಾಗ, ಜ್ಯೋತಿಕೃಷ್ಣನ್‌ ಒಪ್ಪಿದ್ದರು. ನಂತರ ಪರಸ್ಪರ ಮೊಬೈಲ್‌ ನಂಬರ್‌ ವಿನಿಮಯ ಮಾಡಿಕೊಂಡಿದ್ದರು.

ಹಣ ವರ್ಗಾವಣೆ

''ಖರ್ಚಿಗೆ ಸ್ವಲ್ಪ ಹಣ ಬೇಕೆಂದು ರಮ್ಯಾ ನಾಯರ್‌ ಕೇಳಿದಾಗ ಆಕೆ ನೀಡಿದ ಬ್ಯಾಂಕ್‌ ಖಾತೆಗೆ ಹಂತ ಹಂತವಾಗಿ 3 ಲಕ್ಷ ರೂ. ವರ್ಗಾವಣೆ ಮಾಡಿದೆ. ನಂತರ ಐಫೋನ್‌, ಐಪ್ಯಾಡ್‌ ಎಂದು ಉಡುಗೊರೆ ರೂಪದಲ್ಲಿ 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕೊಡಿಸಿದೆ. 2015ರಿಂದ 2017ರ ವರೆಗೆ ಮದುವೆ ತಯಾರಿ, ವೈದ್ಯಕೀಯ ಚಿಕಿತ್ಸೆಗೆಂದು ಕುಂಜೀರಾಮನ್‌ ಎಂಬುವವರ ಖಾತೆಗೆ 10 ಲಕ್ಷ ರೂ. ವರ್ಗಾವಣೆ ಮಾಡಿದ್ದೆ. ಆ ವ್ಯಕ್ತಿ ಯಾರೆಂಬುದು ಗೊತ್ತಿರಲಿಲ್ಲ. ನಂತರದ ದಿನಗಳಲ್ಲಿ ಕರೆ ಮಾಡಿದಾಗ ರಮ್ಯಾ ಸ್ಪಂದಿಸುತ್ತಿರಲಿಲ್ಲ. ಅಮೆರಿಕಾದಿಂದ ಬೆಂಗಳೂರಿಗೆ ಬಂದು ಆಕೆಯ ಮನೆಗೆ ಹೋಗಿ ನಿಶ್ಚಿತಾರ್ಥ ಮಾಡಿಕೊಳ್ಳುವಂತೆ ಕೇಳಿದೆ. 2018ರಲ್ಲಿ ಒಂದೇ ಸಲಕ್ಕೆ ನಿಶ್ಚಿತಾರ್ಥ, ಮದುವೆ ಮಾಡಿಕೊಳ್ಳೋಣ ಎಂದು ರಮ್ಯಾ ಹೇಳಿದ್ದಳು'' ಎಂದು ದೂರಿನಲ್ಲಿ ಜ್ಯೋತಿಕೃಷ್ಣನ್‌ ತಿಳಿಸಿದ್ದಾರೆ.

''ವಾಪಸ್‌ ಅಮೆರಿಕಾಗೆ ಹೋದಾಗ ಮತ್ತೆ ರಮ್ಯಾ ಕೇಳಿ ಹಣವನ್ನು ಪಡೆದಳು. 2019 ಜನವರಿ 21ರಂದು ಬೆಂಗಳೂರಿಗೆ ಮರಳಿದೆ. ಆಕೆ ಮೊಬೈಲ್‌ ಸಂಪರ್ಕದಲ್ಲಿ ಇದ್ದಳು. ಆದರೆ, ಫೆ.20ರಂದು ಬೆಳಗ್ಗೆ 8 ಗಂಟೆಗೆ ರಮ್ಯಾ ಮನೆ ಬಳಿ ಹೋದಾಗ ಖಾಲಿ ಮಾಡಿಕೊಂಡು ಕುಟುಂಬ ಸಮೇತ ನಾಪತ್ತೆ ಆಗಿರುವುದು ಗೊತ್ತಾಗಿದೆ. ವಂಚನೆ ಮಾಡಿರುವ ರಮ್ಯಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ