ಆ್ಯಪ್ನಗರ

ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 5ಕ್ಕೇರಿಕೆ

ಮೃತರ ಕುಟುಂಬಕ್ಕೆ ಬಿಬಿಎಂಪಿಯಿಂದ 5 ಲಕ್ಷ ಪರಿಹಾರ ಘೋಷಿಸಲಾಗಿದೆ.

Vijaya Karnataka Web 10 Jul 2019, 1:56 pm
ಬೆಂಗಳೂರು: ಎರಡು ಅಪಾರ್ಟ್‌ಮೆಂಟ್ ಕುಸಿದು ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ. ಕಟ್ಟಡ 1ರಲ್ಲಿ ಮಗು ಸೇರಿದಂತೆ ಮೂವರು ಕೊನೆಯುಸಿರೆಳೆದಿದ್ದಾರೆ. ನಾರಾಯಣ (28) ನಿರ್ಮಲ (26)
Vijaya Karnataka Web ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 5ಕ್ಕೇರಿಕೆ

ಅನುಷ್ಕಾ( 6) ಮತ್ತೊಂದು ಕಟ್ಟಡದಲ್ಲಿ ಇನ್ನಿಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಖಜನಾ ಎಂಬುವರ ಶವ ತೆರವುಗೊಳಿಸಲಾಗುತ್ತಿದ್ದು, ಮತ್ತೊಬ್ಬರ ಶವವನ್ನು ಅವಶೇಷಗಳಿಂದ ತೆಗೆಯಲಾಗಿದೆ.

ಒಟ್ಟು ಏಳು ಜನರ ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಡ್೯-59(ಮಾರುತಿ ಸೇವಾ ನಗರ), ಎರಡನೇ ಕ್ರಾಸ್, ಹುಚಿನ್ಸ್ ರಸ್ತೆ, ಥಾಮಸ್ ನಗರದ ಬಳಿ ನಸುಕಿನ ಜಾವ 2.15ರ ಸುಮಾರಿಗೆ ಕಟ್ಟಡ ಕುಸಿತವಾಗಿತ್ತು. 65×70 ಜಾಗದಲ್ಲಿ ಸೈಟ್ 39ರಲ್ಲಿ ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಹೊಸ ಕಟ್ಟಡದಲ್ಲಿ ಐದು ಮಂದಿ ಕಾರ್ಮಿಕರು ನೆಲಮಹಡಿಯಲ್ಲಿ ವಾಸವಿದ್ದರು. ಮುಂಜಾನೆ 2.15 ಗಂಟೆ ಸುಮಾರಿಗೆ ಕಟ್ಟಡ ಕುಸಿದಿದೆ. ಪರಿಣಾಮ ನಿದ್ದೆಯಲ್ಲಿದ್ದ ಕಾರ್ಮಿಕರು ಸಾವನ್ನಪ್ಪಿದ್ದಾರೆ.

NDRF ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಮಹಾಪೌರರು, ಕಟ್ಟಡ ದುರಂತದಿಂದ ಮೃತಪಟ್ಟ ಹಾಗೂ ಗಾಯಾಳುಗಳಿಗೆ ಕಟ್ಟಡದ ಮಾಲೀಕನಿಂದಲೇ ಪರಿಹಾರ ಕೊಡಿಸಲು ಕ್ರಮ ವಹಿಸಲಾಗುವುದು. ಜತೆಗೆ ಅನಧಿಕೃತ ಕಟ್ಟಡಕ್ಕೆ ಅನುಮತಿ ಕೊಟ್ಟ ಇಂಜಿನಿಯರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಕಟ್ಟಡ ನಿರ್ಮಾಣ ಮಾಡಿರುವ ಸ್ಥಳದಲ್ಲಿ ಈ ಹಿಂದೆ ಜೌಗು ಪ್ರದೇಶವಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿದ್ದಾರೆ. ಆದರೆ ಕಟ್ಟಡ ಮಾಲೀಕರು ಅನಧಿಕೃವಾಗಿ ಒಂದು ಕಟ್ಟಡವನ್ನು ಹೆಚ್ಚಾಗಿ ನಿರ್ಮಾಣ ಮಾಡಿರುವ ಪರಿಣಾಮ ದುರಂತ ಸಂಭವಿಸಿದೆ. ಕಟ್ಟಡವನ್ನು ನೆಲಮಹಡಿ ಸೇರಿ ಮೂರು ಅಂತಸ್ತಿಗೆ ಮಾತ್ರ ಅನುಮತಿ ಕೊಟ್ಟಿದ್ದರೂ ಅನಧಿಕೃತವಾಗಿ ನಾಲ್ಕು ಅಂತಸ್ತನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ ಜತೆಗೆ ಅಡಿಪಾಯದ ಗುಣಮಟ್ಟ ಕಳಪೆಯಾಗಿರುವ ಪರಿಣಾಮ ದುರಂತ ಸಂಭವಿಸಿದೆ. ಈ ಸಂಬಂಧ ಕಟ್ಟಡ ನಿರ್ಮಾಣ ಮಾಲೀಕರ ಹಾಗೂ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಕೊಟ್ಟ ಇಂಜಿನಿರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. NDRF, ಅಗ್ನಿಶಾಮಕ‌ದಳ ಶೋಧಕಾರ್ಯ ನಡೆಸಿದ ಬಳಿಕ ಬಿಬಿಎಂಪಿ‌ ತಾಂತ್ರಿಕ ತಂಡದ ನೇತೃತ್ವದಲ್ಲಿ ಎರಡು ಕಟ್ಟಡಗಳನ್ನು ನೆಲಸಮ ಮಾಡಲಾಗುವುದು.

ಮೃತರಿಗೆ 5 ಲಕ್ಷ ರು. ಪರಿಹಾರ: ಮೃತರ ಸಂಬಂಧಿಗಳಿಗೆ ಬಿಬಿಎಂಪಿಯಿಂದ 5 ಲಕ್ಷ ಪರಿಹಾರ ನೀಡಲಾಗುವುದು. ಬಳಿಕ ಕಟ್ಟಡ ಮಾಲೀಕನಿಂದ ಪರಿಹಾರ ಹಣ ಪಡೆಯಲಾಗುವುದು. ಜತೆಗೆ ಕಟ್ಟ ಕುಸಿಯಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮಹಾಪೌರರು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ