ಆ್ಯಪ್ನಗರ

ಕಳ್ಳತನ ಮಾಡಲು ಬಂದವರು ಮರ್ಯಾದೆ ಕದ್ದೊಯ್ದರು!

ನಗರದ ನಿವಾಸಿಯೊಬ್ಬರ ಮೇಲೆ ದಾಳಿ ಮಾಡಿರುವ ಕಳ್ಳರು ಚಿನ್ನಾಭರಣದೊಂದಿಗೆ 'ಮರ್ಯಾದೆ'ಯನ್ನೂ ಕದ್ದೊಯ್ದ ಪ್ರಕರಣ ದಾಖಲಾಗಿದೆ.

Bangalore Mirror Bureau 27 Sep 2017, 2:47 pm
ಬೆಂಗಳೂರು: ಕಳ್ಳತನಕ್ಕೆ ಮುಂದಾಗುವ ಗ್ಯಾಂಗ್‌ ಹೆಚ್ಚಿನ ಸಂದರ್ಭದಲ್ಲಿ ಜೀವ ಹಾಗೂ ಬಟ್ಟೆ ಬಿಟ್ಟು ಮತ್ತೆಲ್ಲವನ್ನೂ ದೋಚುವುದು ಮಾಮೂಲಿ. ಆದರೆ ನಗರದ ನಿವಾಸಿಯೊಬ್ಬರ ಮೇಲೆ ದಾಳಿ ಮಾಡಿರುವ ಕಳ್ಳರು ಚಿನ್ನಾಭರಣದೊಂದಿಗೆ 'ಮರ್ಯಾದೆ'ಯನ್ನೂ ಕದ್ದೊಯ್ದ ಪ್ರಕರಣ ದಾಖಲಾಗಿದೆ.
Vijaya Karnataka Web 2 men on bike abduct executive leave him naked man robbed of valuables dignity
ಕಳ್ಳತನ ಮಾಡಲು ಬಂದವರು ಮರ್ಯಾದೆ ಕದ್ದೊಯ್ದರು!


ಘಟನೆ ಕಳೆದ ಮಂಗಳವಾರದಂದು ನಡೆದಿದ್ದು, ಚೆನ್ನೈನ ಪ್ರತಿಷ್ಠಿತ ಕಂಪನಿಯ ಉನ್ನತ ಹುದ್ದೆಯಲ್ಲಿರುವ ಸುರೇಶ್‌ (ಹೆಸರು ಬದಲಿಸಲಾಗಿದೆ) ಎಂಬವರು ಹುಳಿಮಾವಿನ ಸಾಯಿಬಾಬಾ ಮಂದಿರದ ಬಳಿಕ ನಡೆದುಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಇಬ್ಬರು ಯುವಕರು ಆಯುಧಗಳನ್ನು ತೋರಿಸಿ ಕಿಡ್ನ್ಯಾಪ್ ಮಾಡಿ ನೋಬೋ ನಗರದ ಬಳಿ ಕರೆದೊಯ್ದಿದ್ದಾರೆ.

ಸುರೇಶ್ ಬಳಿಯಿದ್ದ ಚಿನ್ನಾಭರಣಗಳನ್ನು ಪಡೆದ ಬಳಿಕ ಯುವಕರು ನಗದು ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಸುರೇಶ್‌ ಬಳಿ ಹಣವಿಲ್ಲ ಎಂದು ತಿಳಿದ ಬಳಿಕ ಅವರ ಬಟ್ಟೆಯನ್ನು ಬಿಚ್ಚುವಂತೆ ಆಗಂತುಕರು ಆಗ್ರಹಿಸಿದ್ದಾರೆ. ಬಟ್ಟೆ ಬಿಚ್ಚಿ ಕೊಡುತ್ತಿದ್ದಂತಯೇ ಇಬ್ಬರೂ ದುಷ್ಕರ್ಮಿಗಳು ಬಟ್ಟೆಯನ್ನು ಹಿಡಿದುಕೊಂಡು ಪರಾರಿಯಾಗಿದ್ದಾರೆ. ಆದರೆ ಸುಮಾರು ದೂರದಲ್ಲಿ ಅವರ ಬಟ್ಟೆ ಹಾಗೂ ಮೊಬೈಲ್‌ ಎಸೆದಿದ್ದಾರೆ ಎಂದು ಪ್ರಕರಣದ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಸುರೇಶ್‌ ಅವರಿಗೆ ಸುಲಭವಾಗಿ ಯಾರ ಸಹಾಯ ಸಿಗದೇ ಇರಲು ದರೋಡೆಕೋರರು ಈ ರೀತಿ ಬೆತ್ತಲೆಯಾಗಿ ಅವರನ್ನು ಬಿಟ್ಟಿ ಹೋಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಕಳ್ಳರ ವರ್ತನೆಯಿಂದ ಅಸಹಾಯಕರಾಗಿ ನಿಂತಿದ್ದ ಸುರೇಶ್‌ ಯಾರ ಸಹಾಯ ಪಡೆಯಲು ಮುಜುಗರವಾಗಿತ್ತು. ಒಂದು ವೇಳೆ ಯಾರನ್ನಾದರೂ ಕರೆದರೆ ತಪ್ಪು ಭಾವಿಸುತ್ತಾರೋ ಎಂಬ ಭಯದಿಂದ ಹೀಗಾಗಿ ಬಟ್ಟೆಗಾಗಿ ಹುಡುಕಾಟ ನಡೆಸಿದ ಸುರೇಶ್‌ಗೆ 45 ನಿಮಿಷಗಳ ಬಳಿಕ ತಮ್ಮ ಬಟ್ಟೆ ದೊರೆತಿದೆ. ಇದೇ ಸ್ಥಳದಲ್ಲಿ ಅವರ ಮೊಬೈಲ್‌ ಕೂಡಾ ದೊರಕಿದ್ದರೂ ಅದು ಒಡೆದು ಹೋಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ.

ಹೀಗಾಗಿ ಅಲ್ಲೇ ಹತ್ತಿರದಲ್ಲಿದ್ದ ಗ್ಯಾರೇಜ್‌ನವರ ಸಹಾಯದಿಂದ ತಮ್ಮ ಸೋದರನಿಗೆ ಕರೆ ಮಾಡಿದ ಸುರೇಶ್‌ ಸುಮಾರು ರಾತ್ರಿ 10.30ರ ವೇಳೆಗೆ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ.

2 men on bike abduct executive, leave him naked: man robbed of valuables, dignity

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ