ಆ್ಯಪ್ನಗರ

ಕೇರಳ ಪೊಲೀಸರಿಂದ ಮಹಿಳೆಗೆ ಕಿರುಕುಳ

ಕೇರಳದ ಮೂವರು ಪೊಲೀಸ್‌ ಅಧಿಕಾರಿಗಳು ಕಿರುಕುಳ ನೀಡಿರುವುದಾಗಿ ವಿಕ್ಟೋರಿಯಾ ಲೇಔಟ್‌ನ ವಿವೇಕನಗರದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

TIMESOFINDIA.COM 6 Jun 2018, 2:55 pm
ಬೆಂಗಳೂರು: ಕೇರಳದ ಮೂವರು ಪೊಲೀಸ್‌ ಅಧಿಕಾರಿಗಳು ಕಿರುಕುಳ ನೀಡಿರುವುದಾಗಿ ವಿಕ್ಟೋರಿಯಾ ಲೇಔಟ್‌ನ ವಿವೇಕನಗರದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
Vijaya Karnataka Web harassment


ಸಂತ್ರಸ್ತ ಮಹಿಳೆ ವಿವೇಕನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೇ 22ರಂದು ಈ ಘಟನೆ ನಡೆದಿದ್ದು ಜೂನ್‌ ಒಂದರಂದು ದೂರು ನೀಡಿದ್ದಾರೆ.

ಕೇರಳದ ಸಿಬಿ-ಸಿಐಡಿ ಘಟಕದ ಮೂವರು ಅಧಿಕಾರಿಗಳು ವಂಚನೆ ಪ್ರಕರಣದಲ್ಲಿ ಬಿನ್ನಿ ಥಾಮಸ್‌ ಎಂಬವರನ್ನು ವಿಚಾರಣೆ ನಡೆಸುವುದಕ್ಕಾಗಿ ವಿವೇಕನಗರದಲ್ಲಿರುವ ಸಂಸ್ಥೆಗೆ ಬಂದಿದ್ದರು. ಸಬ್‌ ಇನ್ಸ್‌ಪೆಕ್ಟರ್‌ ಅರುಣ್‌ ನಾರಾಯಣ ನೇತೃತ್ವದ ತಂಡವು ಕಚೇರಿಗೆ ಆಗಮಿಸಿ ಥಾಮಸ್‌ ಅವರನ್ನು ಭೇಟಿ ಮಾಡಬೇಕಿದೆ ಎಂದು ಹೇಳಿದೆ. ಥಾಮಸ್‌ ಅವರು 11.30ವರೆಗೆ ಆಗಮಿಸುತ್ತಿದ್ದು, ಕಾಯುವಂತೆ ಸಂತ್ರಸ್ತೆ ಹೇಳಿದ್ದರು.

'ಕಚೇರಿಯ ಲ್ಯಾಂಡ್‌ಲೈನ್‌ ದೂರವಾಣಿ ಮೂಲಕ ಥಾಮಸ್‌ ಅವರಿಗೆ ಕರೆ ಮಾಡಿ, ಮೂವರು ಬಂದಿದ್ದು ನಿಮಗಾಗಿ ಕಾಯುತ್ತಿದ್ದಾರೆಂದು ಹೇಳಿದೆ. ಅಷ್ಟರಲ್ಲಿ ಆ ಮೂವರು ನನಗೆ ಗುದ್ದಿದ್ದಾರೆ. ಕೈ ಹಿಡಿದು ಎಳೆದು ಥಾಮಸ್‌ ಅವರ ಕ್ಯಾಬಿನ್‌ಗೆ ಕರೆದೊಯ್ದರು. ಕೈ ನೋಯುವಂತೆ ಹಿಡಿದಿದ್ದರು. ಇತರ ಸಿಬ್ಬಂದಿ ಹತ್ತಿರ ಬರದಂತೆ ನೋಡಿಕೊಂಡರು,' ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಥಾಮಸ್‌ ವಿರುದ್ಧ ಕೇರಳದಲ್ಲಿ ಮೂವತ್ತು ಲಕ್ಷ ರೂ. ವಂಚನೆ ಪ್ರಕರಣ ದಾಖಲಾಗಿತ್ತು. ಆ ಸಂಬಂಧ ವಿಚಾರಣೆಗಾಗಿ ಪೊಲೀಸರು ವಿವೇಕನಗರದಲ್ಲಿರುವ ಕಚೇರಿಗೆ ಬಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ