ಆ್ಯಪ್ನಗರ

ಸ್ಕೂಟರ್‌ನಲ್ಲಿದ್ದ 3 ಲಕ್ಷ ರೂ ಕಳ್ಳತನ

ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಸ್ಕೂಟರ್‌ನಲ್ಲಿ ಇಟ್ಟಿದ್ದ ಮೂರು ಲಕ್ಷ ರೂಪಾಯಿಯನ್ನು ದುಷ್ಕರ್ಮಿಗಳು ಕೆಲವೇ ನಿಮಿಷಗಳಲ್ಲಿ ಕದ್ದಿರುವ ಬಗ್ಗೆ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Vijaya Karnataka 2 Feb 2019, 5:00 am
ಬೆಂಗಳೂರು: ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಸ್ಕೂಟರ್‌ನಲ್ಲಿ ಇಟ್ಟಿದ್ದ ಮೂರು ಲಕ್ಷ ರೂಪಾಯಿಯನ್ನು ದುಷ್ಕರ್ಮಿಗಳು ಕೆಲವೇ ನಿಮಿಷಗಳಲ್ಲಿ ಕದ್ದಿರುವ ಬಗ್ಗೆ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web money


ಯಶವಂತಪುರ ನಿವಾಸಿ ಹಾಗೂ ಟೈಲ್ಸ್‌ ವ್ಯಾಪಾರಿ ಆಗಿರುವ ಗಣೇಶ್‌ ಹಣ ಕಳೆದುಕೊಂಡವರು. ಶುಕ್ರವಾರ ಬೆಳಗ್ಗೆ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ಇವರು ಹಣವನ್ನು ಸ್ಕೂಟರ್‌ ಡಿಕ್ಕಿಯಲ್ಲಿಟ್ಟಿದ್ದರು. ಯಶವಂತಪುರ ಮಾರುಕಟ್ಟೆಯಲ್ಲಿ ಸಾಮಾಗ್ರಿ ಖರೀದಿಗೆಂದು ಹೊರಟಿದ್ದರು. ಮಾರ್ಗ ಮಧ್ಯೆ ನಾಲ್ಕೈದು ಕಡೆ ಸ್ನೇಹಿತರನ್ನು ಮಾತನಾಡಿಸಲು ಮತ್ತು ಊಟಕ್ಕೆಂದು ಹೋಟೆಲ್‌ ಎದುರಿಗೆ ನಿಲ್ಲಿಸಿದ್ದರು. ಮಾರುಕಟ್ಟೆ ತಲುಪಿದ ನಂತರ ಡಿಕ್ಕಿ ತೆರೆದರೆ ಹಣ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

''ಬ್ಯಾಂಕ್‌ನಿಂದ ಮಾರುಕಟ್ಟೆಗೆ ಬರುವ ಮಾರ್ಗದಲ್ಲಿ ಎಲ್ಲೆಲ್ಲಿ ಸ್ಕೂಟರ್‌ ನಿಲ್ಲಿಸಿದ್ದರೋ ಆ ಸ್ಥಳದ ಸುತ್ತ ಮುತ್ತ ಇರುವ ಸಿಸಿಟಿವಿಗಳ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ದುಷ್ಕರ್ಮಿಯ ಗುರುತು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು,'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ