ಆ್ಯಪ್ನಗರ

ಮೊಬೈಲ್‌ ಫೋನ್‌ ದೋಚುತ್ತಿದ್ದ ಮೂವರು ಆರೋಪಿಗಳ ಬಂಧನ: 100 ಮೊಬೈಲ್ ಜಪ್ತಿ

ಬೆಂಗಳೂರಲ್ಲಿ ಒಂಟಿಯಾಗಿ ಓಡಾಡುವವರನ್ನು ಬೆದರಿಸಿ, ಮೊಬೈಲ್‌ ಫೋನ್‌ ದೋಚುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು, 100 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka Web 17 Sep 2020, 6:38 pm
ಬೆಂಗಳೂರು: ಒಂಟಿಯಾಗಿ ಓಡಾಡುವವರನ್ನು ಬೆದರಿಸಿ, ಮೊಬೈಲ್‌ ಫೋನ್‌ ದೋಚುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ವಿಜಯನಗರ ಠಾಣೆ ಪೊಲೀಸರು, 100 ಮೊಬೈಲ್‌ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web theft


ಚಾಮರಾಜಪೇಟೆ ಮತ್ತು ಗಂಗೊಂಡನಹಳ್ಳಿ ನಿವಾಸಿಗಳಾದ ಮುಜಾಮಿಲ್‌ ಪಾಷಾ(19), ಮೊಹಮ್ಮದ್‌ ಆಸೀಫ್‌(22) ಹಾಗೂ ಮೊಹಮ್ಮದ್‌ ಮುಬಾರಕ್‌(20) ಬಂಧಿತರು.

ವಿಜಯನಗರದಲ್ಲಿ ಕ್ಲಿನಿಕ್‌ ನಡೆಸುತ್ತಿರುವ ಡಾ.ರಾಜು, ಆ.30ರಂದು ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ಆರೋಪಿಗಳು, 45 ಸಾವಿರ ರೂ. ಮೌಲ್ಯದ ಐಫೋನ್‌-8 ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಡಾ.ರಾಜು ಠಾಣೆಗೆ ದೂರು ನೀಡಿದ್ದರು.

ಸೈಬರ್ ಕ್ರೈಂ ವಂಚಕರ ವಿಶ್ವರೂಪ ಅನಾವರಣ..! ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ ಅನುಭವ ಕಥನ

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ನಗರದ ನಾನಾ ಭಾಗಗಳಲ್ಲಿಸುಲಿಗೆ, ಕಳ್ಳತನವಾಗಿದ್ದ 8 ಲಕ್ಷ ರೂ. ಮೌಲ್ಯದ 100 ಮೊಬೈಲ್‌ಫೋನ್‌ ಮತ್ತು 4 ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಕಳವು ಮಾಡಿದ್ದ ಫೋನ್‌ಗಳನ್ನು ಸ್ವೀಕರಿಸಿದ್ದ ವಾಲ್ಮೀಕಿನಗರದ ನಿವಾಸಿ ಸಲ್ಮಾನ್‌ ಹಾಗೂ ಚಾಮರಾಜಪೇಟೆಯ ಇರ್ಫಾನ್‌ ಪಾಷಾ ಎಂಬಾತನಿಂದ ಈ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಫೋನ್‌ಗಳ ವಾರಸುದಾರರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾಧಿರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ