ಆ್ಯಪ್ನಗರ

45 ಲಕ್ಷ ರೂ. ಜಪ್ತಿ: ಓರ್ವನ ಬಂಧನ

ಸೂಕ್ತ ದಾಖಲೆಗಳು ಇಲ್ಲದ ಹಣ ಸಾಗಿಸುತ್ತಿದ್ದ ಆಭರಣ ಮಳಿಗೆ ನೌಕರನ ಬಂಧಿಸಿರುವ ಮಹಾಲಕ್ಷ್ಮೇಲೇಔಟ್‌ ಠಾಣೆ ಪೊಲೀಸರು, 45 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.

Vijaya Karnataka 3 Apr 2019, 5:00 am
ಬೆಂಗಳೂರು: ಸೂಕ್ತ ದಾಖಲೆಗಳು ಇಲ್ಲದ ಹಣ ಸಾಗಿಸುತ್ತಿದ್ದ ಆಭರಣ ಮಳಿಗೆ ನೌಕರನ ಬಂಧಿಸಿರುವ ಮಹಾಲಕ್ಷ್ಮೇಲೇಔಟ್‌ ಠಾಣೆ ಪೊಲೀಸರು, 45 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.
Vijaya Karnataka Web money


ಜೆ.ಸಿ. ರಸ್ತೆಯ ವಿನೋಬನಗರದ ರಾಹುಲ್‌(30) ಬಂಧಿತ ಆರೋಪಿ. ಮಂಗಳವಾರ ಬೆಳಗ್ಗೆ 11ರ ಸುಮಾರಿಗೆ ಗಸ್ತಿನಲ್ಲಿದ್ದ ಠಾಣೆಯ ಅಧಿಕಾರಿಗೆ ಅಕ್ರಮ ಹಣ ಸಾಗಣೆ ಕುರಿತು ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಫ್ಲೈಯಿಂಗ್‌ ಸ್ಕ್ವಾಡ್‌ನ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪೊಲೀಸರು, ಮಹಾಲಕ್ಷ್ಮೇ ಲೇಔಟ್‌ ಜಿ.ಡಿ ನಾಯ್ಡು ಹಾಲ್‌ ರಸ್ತೆಗೆ ಕರೆಸಿಕೊಂಡರು. ಅದೇ ರಸ್ತೆಯಲ್ಲಿ ಬರುತ್ತಿದ್ದ ಸ್ಕೂಟರ್‌ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಬ್ಯಾಗೊಂದರಲ್ಲಿ 45 ಲಕ್ಷ ರೂ. ಪತ್ತೆಯಾಗಿದೆ. ಸವಾರ ರಾಹುಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಸೂಕ್ತ ದಾಖಲೆಗಳು ಮತ್ತು ಮಾಹಿತಿ ನೀಡಲಿಲ್ಲ.

'ನಗರತ್‌ಪೇಟೆಯ ಎಸ್‌.ಎಸ್‌. ಜ್ಯುವೆಲರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಬಂಧಿ ಸುನೀಲ್‌ ಎಂಬಾತನಿಂದ ಹಣ ಪಡೆದು ಚಿನ್ನಾಭರಣ ಖರೀದಿಗಾಗಿ ಹೋಗುತ್ತಿದ್ದೆ' ಎಂದು ರಾಹುಲ್‌ ಹೇಳಿಕೆ ನೀಡಿದ್ದಾನೆ. ಆದರೆ, ದೊಡ್ಡ ಪ್ರಮಾಣದ ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲ. ಪತ್ತೆಯಾಗಿರುವ ಹಣಕ್ಕೂ ಚುನಾವಣೆಗೂ ಸಂಬಂಧ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಚುನಾವಣಾಧಿಕಾರಿ ನೀಡಿದ ದೂರು ಆಧರಿಸಿ ಕೇಸ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ