ಆ್ಯಪ್ನಗರ

ಊಟ ಬಡಿಸಲಿಲ್ಲ ಎಂದು ವೃದ್ಧ ಪತ್ನಿಗೆ ಗುಂಡಿಕ್ಕಿದ!

ಊಟ ಬಡಿಸಲು ತಡವಾಯಿತು ಎಂಬ ಕ್ಷುಲಕ ಕಾರಣಕ್ಕೆ ಪತ್ನಿಯನ್ನು 60 ವರ್ಷದ ವ್ಯಕ್ತಿ ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವಿಕ ಸುದ್ದಿಲೋಕ 10 Jul 2017, 11:31 am
ಘಾಜಿಯಾಬಾದ್: ಊಟ ಬಡಿಸಲು ತಡವಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ವೃದ್ಧ ಪತ್ನಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
Vijaya Karnataka Web 60 year old man shoots wife over delay in serving dinner
ಊಟ ಬಡಿಸಲಿಲ್ಲ ಎಂದು ವೃದ್ಧ ಪತ್ನಿಗೆ ಗುಂಡಿಕ್ಕಿದ!


ಮಾನಸ ಸರೋವರ ಪಾರ್ಕ್‌ ಕಾಲೋನಿಯ ಅಶೋಕ್‌ ಕುಮಾರ್‌(60) ರಾತ್ರಿ 9 ಗಂಟೆಗೆ ಕುಡಿದು ಮನೆಗೆ ಬಂದು ಪತ್ನಿ ಸುನೈನಾ(55) ಜತೆ ಜಗಳ ತೆಗೆದಿದ್ದರು. ನಂತರ ರಾತ್ರಿ 11ಕ್ಕೆ ಹೆಂಡತಿಗೆ ಊಟ ಬಡಿಸುವಂತೆ ಹೇಳಿದಾಗ, ಪತಿಯ ವರ್ತನೆಯಿಂದ ಬೇಸತ್ತ ಪತ್ನಿ ಊಟ ಬಡಿಸಲು ನಿರಾಕರಿಸಿದ್ದರು.

ಪತ್ನಿ ವರ್ತನೆಯಿಂದ ಕೋಪಗೊಂಡಿದ್ದ ಅಶೋಕ್‌ ಕುಮಾರ್‌ ಪಿಸ್ತೂಲ್‌ ತೆಗೆದು ಹೆಂಡತಿ ಕಡೆಗೆ ಗುರಿ ಇಟ್ಟರು. ಈ ಸಮಯದಲ್ಲಿ ಮನೆಯಲ್ಲೇ ಇದ್ದ ಮಗ, ಸೊಸೆ ಅವರ ಕೈಯಿಂದ ಪಿಸ್ತೂಲ್ ಕಿತ್ತುಕೊಳ್ಳಲು ಪ್ರಯತ್ನಿಸಿದರೂ, ಪರಿಸ್ಥಿತಿ ಕೈ ಮೀರಿತ್ತು. ಗುಂಡು ಸುನೈನಾ ಅವರ ತಲೆಗೆ ಹೊಕ್ಕಿತ್ತು.

'ತಾಯಿಯ ತಲೆಗೆ ಗುಂಡೇಟು ಬಿದ್ದಿತ್ತು, ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ'ಎಂದು ಅವರ ಮಗ ರಿಂಕು ಹೇಳಿದ್ದಾರೆ.

ಕವಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಅಶೋಕ್‌ ಕುಮಾರ್‌ ತಪ್ಪೊಪ್ಪಿಕೊಂಡಿದ್ದಾರೆ. ಅಕ್ರಮವಾಗಿ ಇಟ್ಟುಕೊಂಡಿದ್ದ ಪಿಸ್ತೂಲನ್ನು ದುಷ್ಕೃತ್ಯಕ್ಕೆ ಬಳಿಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಬಂದೂಕು ಆರೋಪಿ ಕೈಗೆ ಹೇಗೆ ಸಿಕ್ಕಿತು ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ