ಆ್ಯಪ್ನಗರ

ಖಾಸಗಿ ಕಂಪನಿಗೆ ನೌಕರನಿಂದಲೇ 77 ಲಕ್ಷ ರೂ. ವಂಚನೆ

ರಾಜಾಜಿ ನಗರದಲ್ಲಿರುವ ಓಸ್ವಾಲ್‌ ಮಿನರಲ್ಸ್‌ನ ಸಿಇಒ ಶ್ರೀಪಾಲ್‌ ಕುಮಾರ್‌ ಎಂಬುವವರು, ಕೃಪಾಲ್‌ ಶಾ ಎಂಬುವವರ ವಿರುದ್ಧ ರಾಜಾಜಿನಗರ ಠಾಣೆಗೆ ದೂರು ನೀಡಿದ್ದಾರೆ.

Vijaya Karnataka 18 Oct 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web 77 lakh rupees fraud by employee to private company
ಖಾಸಗಿ ಕಂಪನಿಗೆ ನೌಕರನಿಂದಲೇ 77 ಲಕ್ಷ ರೂ. ವಂಚನೆ


ಖಾಸಗಿ ಕಂಪನಿಯಲ್ಲಿಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕಂಪನಿಗೆ ಸೇರಿದ 77 ಲಕ್ಷ ರೂ.ಯನ್ನು ದುರುಪಯೋಗ ಮಾಡಿಕೊಂಡು ವಂಚಿಸಿದ್ದಾನೆ.

ರಾಜಾಜಿ ನಗರದಲ್ಲಿರುವ ಓಸ್ವಾಲ್‌ ಮಿನರಲ್ಸ್‌ನ ಸಿಇಒ ಶ್ರೀಪಾಲ್‌ ಕುಮಾರ್‌ ಎಂಬುವವರು, ಕೃಪಾಲ್‌ ಶಾ ಎಂಬುವವರ ವಿರುದ್ಧ ರಾಜಾಜಿನಗರ ಠಾಣೆಗೆ ದೂರು ನೀಡಿದ್ದಾರೆ.

ಕಬ್ಬಿಣ ಮಕ್ಕು ಉಕ್ಕಿನ ಕಾರ್ಖಾನೆಗಳಿಗೆ ಕಚ್ಚಾ ಸಾಮಗ್ರಿ ಪೂರೈಸುವ ಓಸ್ವಾಲ್‌ ಮಿನರಲ್ಸ್‌ಗೆ ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ 2014ರಲ್ಲಿಕೃಪಾಲ್‌ ಶಾ ಕೆಲಸಕ್ಕೆ ಸೇರಿದ್ದರು.

ಗ್ರಾಹಕರಿಂದ ಹಣ, ಪೋಸ್ಟ್‌ ಡೇಟೆಡ್‌ ಚೆಕ್‌ಗಳನ್ನು ಸಂಗ್ರಹಿಸಿ ಕಂಪನಿಯ ಅಕೌಂಟ್‌ ವಿಭಾಗಕ್ಕೆ ಪಾವತಿ ಮಾಡುವುದು ಅವರ ಕೆಲಸವಾಗಿತ್ತು. ಇತ್ತೀಚೆಗೆ ಆಂತರಿಕ ಆಡಿಟಿಂಗ್‌ ನಡೆಸಿದಾಗ ಗ್ರಾಹಕರಿಂದ ಬರಬೇಕಾದ ದೊಡ್ಡ ಪ್ರಮಾಣದ ಹಣ ಕಂಪನಿಗೆ ಜಮಾ ಆಗಿರಲಿಲ್ಲ. ಪರಿಶೀಲನೆ ನಡೆಸಿದಾಗ, ಕೃಪಾಲ್‌ ಕೈವಾಡ ಬೆಳಕಿಗೆ ಬಂದಿದೆ.

ಗ್ರಾಹಕರಿಂದ ಸಂಗ್ರಹಿಸಿದ ಚೆಕ್‌ಗಳನ್ನು ಸಹಕಾರಿ ಬ್ಯಾಂಕ್‌ಗಳಿಗೆ ಕೊಡುತ್ತಿದ್ದ ಕೃಪಾಲ್‌, ಡಿಸ್ಕೌಂಟ್‌ ಮಾಡಿಸಿಕೊಂಡು ತಾನೇ ಹಣವನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಈ ಅಕ್ರಮದಲ್ಲಿಕೃಪಾಲ್‌ ಜೊತೆಗೆ ಕಂಪನಿಯ ಇತರ ನೌಕರರು ಭಾಗಿಯಾಗಿರುವ ಅನುಮಾನವಿದೆ ಎಂದು ಶ್ರೀಪಾಲ್‌ ದೂರು ನೀಡಿದ್ದಾರೆ.

ವಂಚನೆ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ರಾಜಾಜಿನಗರ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ