ಆ್ಯಪ್ನಗರ

ಎಸ್‌ಬಿಐಗೆ 9.39 ಕೋಟಿ ರೂ. ವಂಚನೆ

ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಈಗ ಎಸ್‌ಬಿಐ) ಲಾಲ್‌ಬಾಗ್‌ ಶಾಖೆಗೆ ನಕಲಿ ದಾಖಲೆ ಸಲ್ಲಿಸಿ 9.39 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೆ ವಂಚನೆ ಮಾಡಿದ ಪ್ರಕರಣದಲ್ಲಿ ಚೆನ್ನೈನ ಸಿಬಿಐ ಆರ್ಥಿಕ ಅಪರಾಧಗಳ ದಳದಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 25 Apr 2019, 5:00 am
ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಈಗ ಎಸ್‌ಬಿಐ) ಲಾಲ್‌ಬಾಗ್‌ ಶಾಖೆಗೆ ನಕಲಿ ದಾಖಲೆ ಸಲ್ಲಿಸಿ 9.39 ಕೋಟಿ ರೂ. ಸಾಲ ಪಡೆದು ಮರುಪಾವತಿ ಮಾಡದೆ ವಂಚನೆ ಮಾಡಿದ ಪ್ರಕರಣದಲ್ಲಿ ಚೆನ್ನೈನ ಸಿಬಿಐ ಆರ್ಥಿಕ ಅಪರಾಧಗಳ ದಳದಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web 9 39 crore cheating to sbi
ಎಸ್‌ಬಿಐಗೆ 9.39 ಕೋಟಿ ರೂ. ವಂಚನೆ


ಇನ್ಫೆಂಟ್ರಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಐ.ಟಿ ಎಸ್ಟೇಟ್ಸ್‌ನ ಮಾಲೀಕ ಎನ್‌.ಡಿ ರವಿ ಹಾಗೂ ಸಾಲಗಾರರಾದ ಜೊ ಅಬ್ರಾಹಂ, ರಮ್ಯ, ಸೋಲೋಮನ್‌, ವರ್ಚಸ್ವಿ ಚಂದನ್‌, ಎನ್‌. ಧನಲಕ್ಷ್ಮೇ ಸೇರಿದಂತೆ ಒಟ್ಟು 16 ಮಂದಿ ಅಪರಿಚಿತರ ವಿರುದ್ಧ ಕೇಸ್‌ ದಾಖಲಾಗಿದೆ.

ಸೀಗೇಹಳ್ಳಿ ಗ್ರಾಮದಲ್ಲಿ ಶ್ರೀನಿವಾಸಯ್ಯ, ಗೀತಾ, ಲೋಕೇಶ್‌ ಎಂಬುವರ 1 ಎಕರೆ 7 ಗುಂಟೆ ಜಮೀನಿನಲ್ಲಿ ಗಾರ್ಡನ್‌ ರೆಸಿಡೆನ್ಸಿ ಹೆಸರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕಾಗಿ 2013ರಲ್ಲಿ ಬಿಲ್ಡರ್‌ ಎನ್‌.ಡಿ ರವಿ ಅವರು ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿದ್ದರು. ಹೀಗಾಗಿ 2016ರ ಜೂನ್‌ನಿಂದ 2017ರ ಮಾರ್ಚ್‌ವರೆಗೆ ಬ್ಯಾಂಕ್‌ನಿಂದ ಒಟ್ಟು 15 ಜನರಿಗೆ 65 ರಿಂದ 71 ಲಕ್ಷ ರೂ.ವರೆಗೆ ಸಾಲ ಮಂಜೂರು ಮಾಡಲಾಗಿತ್ತು. ಅವರೆಲ್ಲರೂ 2018 ಜನವರಿಯಿಂದ ಮರುಪಾವತಿ ನಿಲ್ಲಿಸಿದ್ದರು.

ಹೀಗಾಗಿ, ಸಾಲಗಾರರ ಹೆಸರು, ವಿಳಾಸ, ಕೆಲಸದ ಸ್ಥಳ ಪರಿಶೀಲಿಸಿದಾಗ ನಾಲ್ಕು ಜನ ಮಾತ್ರ ಕೆಲಸದಲ್ಲಿ ಇದ್ದರು. ಉಳಿದವರು ಹೇಳಿದ ಕಂಪನಿಯಲ್ಲಿ ಕೆಲಸ ಮಾಡುತ್ತಿರಲಿಲ್ಲ. ಅವರು ನೀಡಿದ್ದ ಐಟಿ ರಿಟರ್ನ್‌ ಸೇರಿದಂತೆ ಎಲ್ಲ ದಾಖಲೆಗಳು ನಕಲಿಯಾಗಿದ್ದವು.

ಈ ಕುರಿತು ಬ್ಯಾಂಕ್‌ ಅಧಿಕಾರಿಗಳು, ಬಿಲ್ಡರ್‌ ಅನ್ನು ವಿಚಾರಿಸಿದಾಗ ಹಣವನ್ನು ಬೇರೆ ಬಿಲ್ಡರ್‌ಗಳು ಅಭಿವೃದ್ಧಿಪಡಿಸುತ್ತಿರುವ ಬೇರೆ ಯೋಜನೆಗಳಿಗೆ ವರ್ಗಾಯಿಸಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಯೋಜನೆ ಪೂರ್ಣಗೊಳ್ಳದ ಕಾರಣ ಜಪ್ತಿ ಮಾಡಿಕೊಳ್ಳಲು ಸಾಧ್ಯವಾಗದೇ ಪ್ರಕರಣ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ