ಆ್ಯಪ್ನಗರ

ಎಣ್ಣೆ ಮತ್ತಿನಲ್ಲಿ ಕ್ಷುಲ್ಲಕ ಜಗಳ, ಎದೆಗೆ ಗುದ್ದಿ ಕೊಲೆ

ಕುಡಿದ ಅಮಲಿನಲ್ಲಿ ನಡೆದ ಕ್ಷುಲ್ಲಕ ಜಗಳದ ವೇಳೆ ಸೆಕ್ಯುರಿಟಿ ಗಾರ್ಡ್‌ ಒಬ್ಬರ ಎದೆಗೆ ಗುದ್ದಿ ಕೊಲೆ ಮಾಡಿರುವ ಘಟನೆ ಪೀಣ್ಯ ಕೈಗಾರಿಕಾ ದೇಶದಲ್ಲಿ ನಡೆದಿದೆ. ಕುಡಿದು ಬಂದಿರುವುದರಿಂದ ಪ್ರವೇಶ ನಿರಾಕರಿಸಿದ್ದಕ್ಕೆ ಈ ಘಟನೆ ನಡೆದಿದೆ.

Vijaya Karnataka Web 3 Jan 2020, 11:20 am
ಬೆಂಗಳೂರು: ಕುಡಿದ ಅಮಲಿನಲ್ಲಿ ನಡೆದ ಕ್ಷುಲ್ಲಕ ಜಗಳದ ವೇಳೆ ಸೆಕ್ಯುರಿಟಿ ಗಾರ್ಡ್‌ ಒಬ್ಬರ ಎದೆಗೆ ಗುದ್ದಿ ಕೊಲೆ ಮಾಡಿರುವ ಘಟನೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
Vijaya Karnataka Web a drunken fight between two security guards one dies in bengaluru
ಎಣ್ಣೆ ಮತ್ತಿನಲ್ಲಿ ಕ್ಷುಲ್ಲಕ ಜಗಳ, ಎದೆಗೆ ಗುದ್ದಿ ಕೊಲೆ


ಬ್ಯಾಡರಹಳ್ಳಿಯ ತಿಪ್ಪೇಸ್ವಾಮಿ(62) ಕೊಲೆಯಾದವರು. ಬುಧವಾರ ರಾತ್ರಿ 11 ಗಂಟೆ ವೇಳೆಗೆ ಘಟನೆ ನಡೆದಿದೆ. ಬಿಹಾರ ಮೂಲದ ಸಂಜಯ್‌ ಯಾದವ್‌(55) ಕೊಲೆ ಮಾಡಿದವನಾಗಿದ್ದು, ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶದ ಸೋಲಾರ್‌ ಜನರೇಟರ್‌ ಕಂಪನಿಯಲ್ಲಿ ಸಂಜಯ್‌ ಕೂಲಿ ಕಾರ್ಮಿಕನಾಗಿದ್ದು, ಇದೇ ಕಾರ್ಖಾನೆಯಲ್ಲಿ ತಿಪ್ಪೇಸ್ವಾಮಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಇಬ್ಬರೂ ಪರಸ್ಪರ ಪರಿಚಿತರಾದವರಾಗಿದ್ದು, ಹಲವು ಬಾರಿ ಒಟ್ಟಿಗೇ ಕುಳಿತು ಮದ್ಯಪಾನ ಕೂಡ ಮಾಡಿದ್ದರು. ಬುಧವಾರ ರಾತ್ರಿ ಸಂಜಯ್‌ ಕಂಠಮಟ್ಟ ಕುಡಿದು ಬಂದು, ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ತಿಪ್ಪೇಸ್ವಾಮಿ ಎದೆಗೆ ಗುದ್ದಿದ್ದ. ಹಲ್ಲೆಗೆ ಒಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದ ತಿಪ್ಪೇಸ್ವಾಮಿಯನ್ನು ಉಳಿದ ಸಿಬ್ಬಂದಿ ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಡೆದದ್ದು ಏನು?
ಕುಡಿದು ಬಂದಿದ್ದ ಸಂಜಯ್‌ನನ್ನು ಕಾರ್ಖಾನೆಯೊಳಗೆ ಹೋಗಲು ತಿಪ್ಪೇಸ್ವಾಮಿ ತಡೆದಿದ್ದರು. ಈ ಸ್ಥಿತಿಯಲ್ಲಿ ಒಳಗೆ ಹೋಗಬೇಡ ಎಂದು ಹೇಳಿ ತಡೆದಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ತಳ್ಳಾಟ ನಡೆದಿದ್ದು, ತನ್ನನ್ನು ತಡೆದಿದ್ದ ತಿಪ್ಪೇಸ್ವಾಮಿಯನ್ನು ಸಂಜಯ್‌ ತಳ್ಳಿದ್ದ. ತಳ್ಳಿದ ರಭಸಕ್ಕೆ ಕೆಳಕ್ಕೆ ಬಿದ್ದ ತಿಪ್ಪೇಸ್ವಾಮಿ ಮೇಲೆ ಮತ್ತೆ ಸಂಜಯ್‌ ಬಿದ್ದು ಗುದ್ದಿದ. ಇಡೀ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿಸೆರೆಯಾಗಿದ್ದು, ಇದರ ಆಧಾರದಲ್ಲಿಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ