ಆ್ಯಪ್ನಗರ

ಹೆಣ್ಣು ಮಗುವೆಂದು 8 ದಿನಗಳ ಹಸುಗೂಸನ್ನು 1ನೇ ಮಹಡಿಯಿಂದ ಎಸೆದು ಕೊಂದ ಅಜ್ಜಿ!

ಅವಧಿ ಪೂರ್ವ ಪ್ರಸವದಲ್ಲಿ ಜನಿಸಿದ್ದ ಮಗುವನ್ನು ಹೆಣ್ಣು ಮಗು ಎಂದು ತಾತ್ಸಾರ ಮಾಡಿ 8 ದಿನಗಳ ಹಸುಗೂಸನ್ನು ಸ್ವಂತ ಅಜ್ಜಿಯೇ ಮಹಡಿಯಿಂದ ಎಸೆದು ಕೊಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Vijaya Karnataka Web 1 Dec 2019, 9:58 am
ಬೆಂಗಳೂರು: ಹೆಣ್ಣು ಮಗು ಎಂದು ತಾತ್ಸಾರ ಮಾಡಿ 8 ದಿನಗಳ ಹಸುಗೂಸನ್ನು ಸ್ವಂತ ಅಜ್ಜಿಯೇ ಒಂದನೇ ಮಹಡಿಯಿಂದ ಕೆಳಗೆ ಎಸೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Vijaya Karnataka Web bengaluru


ಹಸುಗೂಸು ಕೊಂದ ಆರೋಪದ ಮೇರೆಗೆ ತಮಿಳುನಾಡಿನ ತಿರುಚ್ಚಿ ಮೂಲದ ಪರಮೇಶ್ವರಿ (60) ಎಂಬುವರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹೆಸರುಘಟ್ಟ ರಸ್ತೆಯ ಸಮೀಪದ ಮೇದರಹಳ್ಳಿಯಲ್ಲಿ ವಾಸವಿರುವ ಮಾರ್ಷಲ್‌ ಮತ್ತು ತಮಿಳುಸೆಲ್ವಿ ದಂಪತಿ ಹಾಲಿನ ಬೂತ್‌ ನಡೆಸುತ್ತಿದ್ದಾರೆ. 8 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ತಮಿಳುಸೆಲ್ವಿಗೆ ಹೆಣ್ಣು ಮಗು ಜನಿಸಿತ್ತು. ಮಗು ಅವಧಿಪೂರ್ವವಾಗಿ ಜನಿಸಿದ್ದು, ಕಾಮಾಲೆ ಕಾಣಿಸಿಕೊಂಡಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಮಗುವನ್ನು ಮನೆಗೆ ಕರೆತರಲಾಗಿತ್ತು.

ಕೊಲೆಗಡುಕರಿಗೆ ಮರಣದಂಡನೆ ವಿಧಿಸಿ

ಶನಿವಾರ ರಾತ್ರಿ ಕೆಲಸದ ಮೇಲೆ ಮಾರ್ಷಲ್‌ ಮನೆಯಿಂದ ಹೊರ ಹೋಗಿದ್ದರು. ತಮಿಳುಸೆಲ್ವಿ ಬಾತ್‌ರೂಮ್‌ಗೆ ತೆರಳಿದ್ದರು. ಈ ವೇಳೆ ಮಗುವನ್ನು ನೋಡಿಕೊಳ್ಳುತ್ತಿದ್ದ ಮಾರ್ಷಲ್‌ ತಾಯಿ ಪರಮೇಶ್ವರಿ, ಮಗುವನ್ನು ತೆಗೆದುಕೊಂಡು ಮನೆಯ ಮಹಡಿಯಿಂದ ಹಿಂಭಾಗದ ಖಾಲಿ ಜಾಗಕ್ಕೆ ಬಿಸಾಡಿ ಏನೂ ಗೊತ್ತಿಲ್ಲದಂತೆ ಸುಮ್ಮನಾಗಿದ್ದರು.

ಹೈದರಾಬಾದ್‌ನ ಅತ್ಯಾಚಾರ- ಕೊಲೆ ಖಂಡನೀಯ

ಬಾತ್‌ರೂಮ್‌ನಿಂದ ಹೊರ ಬಂದ ತಾಯಿ, ಮಗು ಎಲ್ಲಿದೆ ಎಂದು ಅತ್ತೆ ಪರಮೇಶ್ವರಿಗೆ ಕೇಳಿದ್ದಾರೆ. ಆದರೆ, ಅವರು ಯಾವುದೇ ಉತ್ತರ ಕೊಟ್ಟಿಲ್ಲ. ಅಷ್ಟರಲ್ಲೇ ಪತಿ ಮಾರ್ಷಲ್‌ ಕೂಡ ಮನೆಗೆ ಬಂದಿದ್ದರು. ಮಗು ಕಾಣಿಸದ ಕಾರಣ ಹುಡುಕಾಟ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ''ಮಾಹಿತಿ ಬರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ತೆರಳಿದರು. ಮನೆಯ ಒಳಗೆ, ಹೊರಗೆ ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕೆಳಗೆ ಬಿದ್ದಿದ್ದ ಮಗುವನ್ನು ತಂದೆಯೇ ಹುಡುಕಿದ್ದರು. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗೆ ಮೃತಪಟ್ಟಿತ್ತು. ಈ ಸಂಬಂಧ ಪರಮೇಶ್ವರಿ ಹಾಗೂ ಹಸುಗೂಸಿನ ತಂದೆ-ತಾಯಿಯನ್ನು ವಿಚಾರಣೆ ನಡೆಸಲಾಗುತ್ತಿದೆ'' ಎಂದು ಸೋಲದೇವನಹಳ್ಳಿ ಠಾಣೆ ಇನ್ಸ್‌ಪೆಕ್ಟರ್‌ ತಿಳಿಸಿದರು.

ಪಶುವೈದ್ಯೆಯ ಅತ್ಯಾಚಾರ, ಕೊಲೆಗೆ ಎಬಿವಿಪಿ ಖಂಡನೆ

ಹೆಣ್ಣುಮಗುವೆಂದು ತಾತ್ಸಾರ
ಮಾರ್ಷಲ್‌ ಮತ್ತು ತಮಿಳುಸೆಲ್ವಿಗೆ 3 ವರ್ಷಗಳ ಹಿಂದೆ ವಿವಾಹವಾಗಿದೆ. ಈಗ ಕೊಲೆಯಾಗಿರುವ ಹೆಣ್ಣು ಶಿಶುವೇ ಮೊದಲ ಮಗು. ''ಅವಧಿಪೂರ್ವ ಹೆಣ್ಣು ಮಗು ಜನಿಸಿದ್ದಕ್ಕೆ ಅತ್ತೆ ಸದಾ ಬೈಯ್ಯುತ್ತಿದ್ದರು'' ಎಂದು ತಮಿಳುಸೆಲ್ವಿ ಆರೋಪಿಸಿದ್ದಾರೆ.

ಪಶುವೈದ್ಯೆ ಅತ್ಯಾಚಾರ: ಗಲ್ಲಿಗೇರಿಸಿ ಎಂದು ಪ್ರತಿಭಟಿಸಿದವರ ಮೇಲೆ ಲಾಠಿ, ನ್ಯಾಯಾಂಗ ಕಸ್ಟಡಿಗೆ ಆರೋಪಿಗಳು

''ಅನಾರೋಗ್ಯದ ಕಾರಣ ಚಿಕಿತ್ಸೆಗೆ ಹಣ ಖರ್ಚಾಗುತ್ತದೆ. ಅಲ್ಲದೇ, ಹೆಣ್ಣು ಮಗು ಬೇರೆ'' ಎಂದು ಹೇಳಿ ಪರಮೇಶ್ವರಿ ತಾತ್ಸಾರದಿಂದ ಕಾಣುತ್ತಿದ್ದರು ಎಂದು ತಮಿಳುಸೆಲ್ವಿ ಹಾಗೂ ಪತಿ ಮಾರ್ಷಲ್‌ ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ