ಆ್ಯಪ್ನಗರ

2 ಮಕ್ಕಳ ತಾಯಿಗೆ ಅಕ್ಕನ ಮಗನ ಜತೆ ಪ್ರೇಮ ಸಂಬಂಧ; ಬ್ಲ್ಯಾಕ್​ಮೇಲ್ ಮಾಡಿದ್ದಾಕೆಯನ್ನು ಕೊಲೆಗೈದ ಹುಡುಗ!

ಕೊಲೆಯಾದ ಮಹಿಳೆಗೆ ತನ್ನ ಅಕ್ಕನ ಮಗನ ಜತೆ ಪ್ರೇಮಾಂಕುರವಾಗಿತ್ತು. ಪತ್ನಿಯ ರಹಸ್ಯ ಫೋನ್‌ ಕರೆ ಹಾಗೂ ಮೆಸೇಜ್‌ಗಳನ್ನು ನೋಡಿ ಪತಿ, ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಆದರೆ, ಆಕೆ ಅಕ್ಕನ ಮಗನೊಂದಿಗೆ ಪ್ರೇಮದ ಬಲೆಯಲ್ಲಿ ಸಿಲುಕಿದ್ದಾಳೆ ಎಂಬುದು ಗಂಡನಿಗೆ ಗೊತ್ತಿರಲಿಲ್ಲ. ಅ. 19ರಂದು ಕೂಡ ಪತಿ- ಪತ್ನಿ ನಡುವೆ ಜಗಳ ನಡೆದಿತ್ತು. ಇದರಿಂದ ಬೇಸತ್ತ ಕೊಲೆಗೈಯಲ್ಪಟ್ಟ ಮಹಿಳೆ ಬಾಲಕನ ಜತೆ ಓಡಿ ಹೋಗಲು ಯೋಚಿಸಿದ್ದಳು. ತನ್ನ ಇಬ್ಬರು ಮಕ್ಕಳನ್ನು ಅಮ್ಮನ ಮನೆಗೆ ಕಳಿಸಿದ್ದಳು. ಆದರೆ, ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕ ಓಡಿ ಹೋಗಲು ಒಪ್ಪಿರಲಿಲ್ಲ.!

Vijaya Karnataka 21 Oct 2021, 7:16 am
ಬೆಂಗಳೂರು: ಪಿಯುಸಿ ಓದುವ ಅಕ್ಕನ ಮಗನ ಪ್ರೇಮದ ಬಲೆಗೆ ಸಿಲುಕಿದ ಇಬ್ಬರು ಮಕ್ಕಳ ತಾಯಿಯೊಬ್ಬರು ಬರ್ಬರವಾಗಿ ಹತ್ಯೆಗೀಡಾಗಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಯಾರಬ್‌ ನಗರದಲ್ಲಿ ನಡೆದಿದೆ.
Vijaya Karnataka Web Crime


ಆಫ್ರೀನ್‌ ಖಾನಂ (28) ಕೊಲೆಯಾದ ಮಹಿಳೆ. ಈಕೆಯನ್ನು ಕೊಲೆ ಮಾಡಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಆಫ್ರೀನ್‌ ಖಾನಂಗೆ ಇಬ್ಬರು ಮಕ್ಕಳಿದ್ದು, ಪತಿ ಟಿಂಬರ್‌ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದಾಗ ಪತಿ ಮನೆಯಲ್ಲಿರಲಿಲ್ಲ. ಕೊಲೆ ಪ್ರಕರಣ ನಡೆದ ಬಳಿಕ ವಿಚಾರಣೆ ನಡೆಸಿದ ಪೊಲೀಸರು ಮೊದಲು ಪತಿ ವಿರುದ್ಧವೇ ಸಂಶಯ ವ್ಯಕ್ತಪಡಿಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕೂಲಂಕುಶವಾಗಿ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಕೊಲೆಯಾದ ಆಫ್ರೀನ್‌ ಖಾನಂಗೆ ಅಕ್ಕನ ಮಗನ ಜತೆ ಪ್ರೇಮಾಂಕುರವಾಗಿತ್ತು. ಪತ್ನಿಯ ರಹಸ್ಯ ಫೋನ್‌ ಕರೆ ಹಾಗೂ ಮೆಸೇಜ್‌ಗಳನ್ನು ನೋಡಿ ಪತಿ, ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಆದರೆ, ಅಕ್ಕನ ಮಗನೊಂದಿಗೆ ಪತ್ನಿ ಪ್ರೇಮದ ಬಲೆಯಲ್ಲಿ ಸಿಲುಕಿದ್ದಾಳೆ ಎಂಬುದು ಗಂಡನಿಗೆ ಗೊತ್ತಿರಲಿಲ್ಲ.
ಇಸ್ಲಾಂನಲ್ಲಿ ಮದುವೆ ಅನ್ನೋದು ಸಂಸ್ಕಾರವಲ್ಲ, ಅದೊಂದು ಒಪ್ಪಂದ; ಕರ್ನಾಟಕ ಹೈಕೋರ್ಟ್​
ಅ. 19ರಂದು ಕೂಡ ಪತಿ- ಪತ್ನಿ ನಡುವೆ ಜಗಳ ನಡೆದಿತ್ತು. ಇದರಿಂದ ಬೇಸತ್ತ ಆಫ್ರೀನ್‌ ಬಾಲಕನ ಜತೆ ಓಡಿ ಹೋಗಲು ಯೋಚಿಸಿದ್ದಳು. ತನ್ನ ಇಬ್ಬರು ಮಕ್ಕಳನ್ನು ಅಮ್ಮನ ಮನೆಗೆ ಕಳಿಸಿದ್ದಳು. ಆದರೆ, ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕ ಓಡಿ ಹೋಗಲು ಒಪ್ಪಿರಲಿಲ್ಲ. ಇದರಿಂದ ಆಫ್ರೀನ್‌ ಬ್ಲ್ಯಾಕ್‌ಮೇಲ್‌ ಮಾಡಲು ಶುರು ಮಾಡಿದಳು. ಇದರಿಂದ ಕೋಪಗೊಂಡ ಬಾಲಕ ಚಾಕುವಿನಿಂದ ಮನಬಂದಂತೆ ಇರಿದಿದ್ದ. ಅಲ್ಲದೆ, ಬೆಡ್‌ ಪಕ್ಕದಲ್ಲಿದ್ದ ಕತ್ತರಿ ತೆಗೆದುಕೊಂಡು ಕುತ್ತಿಗೆಗೆ ತಿವಿದಿದ್ದ. ಬಳಿಕ ಗ್ಯಾಸ್‌ ಹಚ್ಚಿ ಬಟ್ಟೆಗೆ ಬೆಂಕಿ ತಗಲಿಸಿ ದೇಹದ ಮೇಲೆ ಬಿಸಾಡಿದ್ದ. ಬಟ್ಟೆಗೆ ಹೊತ್ತಿಕೊಂಡ ಬೆಂಕಿ ಬಳಿಕ ಹಾಸಿಗೆಗೆ ತಗಲಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
‘ಕಬ್ಬು ಕೊಡುತ್ತೇನೆ’ ಎಂದು ಪುಸಲಾಯಿಸಿ ವಿಶೇಷಚೇತನ ಯುವಕನ ಮೇಲೆ ಅತ್ಯಾಚಾರ ಎಸಗಿದ ಕಾಮುಕ!
ಹಾಸಿಗೆಗೆ ಬೆಂಕಿ ಇಟ್ಟ ಪರಿಣಾಮ ಮನೆಯ ತುಂಬೆಲ್ಲಾ ಹೊಗೆ ದಟ್ಟವಾಗಿ ಆವರಿಸಿಕೊಂಡಿತ್ತು. ಆರೋಪಿ ಕೊಲೆ ಮಾಡಿದ ನಂತರ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದ. ಮನೆಯ ಒಳಗಿಂದ ಯಾರಾದರೂ ಬೀಗ ಹಾಕಿರಬೇಕು ಅಥವಾ ಮನೆಯ ಕೀ ನಲ್ಲಿ ಹೊರಗಡೆಯಿಂದ ಯಾರಾದರೂ ಬೀಗ ಹಾಕಿರಬೇಕು. ಮನೆಯೊಳಗೆ ಮಹಿಳೆ ಕೊಲೆಯಾಗಿದ್ದರಿಂದ ಆಕೆಯೇ ಬಾಗಿಲಿಗೆ ಬೀಗ ಹಾಕಿರುವುದು ಅಸಾಧ್ಯ. ಹೀಗಾಗಿ, ಮನೆಯ ಕೀಯಿಂದಲೇ ಹೊರಗಡೆಯಿಂದ ಬೀಗ ಹಾಕಿರುವುದು ಖಚಿತವಾಗಿತ್ತು. ಮನೆಯ ಮಾಲೀಕರು ಮೃತ ಮಹಿಳೆ ಹಾಗೂ ಆಕೆಯ ಪತಿಗೆ ಕೊಟ್ಟಿದ್ದು ಒಂದೇ ಕೀ. ಹೀಗಾಗಿ, ಪತಿಯ ಮೇಲೆ ಮೊದಲು ಅನುಮಾನ ಬಂದು, ಆತನನ್ನು ಬಂಧಿಸಿ ಮಾಡಿ ತನಿಖೆ ನಡೆಸಲಾಗಿತ್ತು. ನಂತರ ಪ್ರಕರಣ ಹೊಸ ತಿರುವು ಪಡೆದಿದೆ ಎಂದು ಡಿಸಿಪಿ ಹರೀಶ್‌ ಪಾಂಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ