ಆ್ಯಪ್ನಗರ

ಮೀಟರ್‌ ಬಡ್ಡಿಯಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಒಂದೂವರೆ ಲಕ್ಷ ರೂ. ಸಾಲಕ್ಕೆ ಮೂರು ಲಕ್ಷ ರೂ. ಬಡ್ಡಿಯನ್ನೇ ಪಡೆದು ಮತ್ತೆ ಅಸಲು ಮರಳಿಸುವಂತೆ ಬಡ್ಡಿ ವ್ಯವಹಾರ ನಡೆಸುವಾತ ನೀಡಿದ ಕಿರುಕುಳದಿಂದ ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜರಾಜೇಶ್ವರಿ ನಗರದ ಕರಿಯಪ್ಪ ಲೇಔಟ್‌ನಲ್ಲಿ ನಡೆದಿದೆ.

Vijaya Karnataka 19 May 2018, 5:00 am
ಬೆಂಗಳೂರು: ಒಂದೂವರೆ ಲಕ್ಷ ರೂ. ಸಾಲಕ್ಕೆ ಮೂರು ಲಕ್ಷ ರೂ. ಬಡ್ಡಿಯನ್ನೇ ಪಡೆದು ಮತ್ತೆ ಅಸಲು ಮರಳಿಸುವಂತೆ ಬಡ್ಡಿ ವ್ಯವಹಾರ ನಡೆಸುವಾತ ನೀಡಿದ ಕಿರುಕುಳದಿಂದ ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜರಾಜೇಶ್ವರಿ ನಗರದ ಕರಿಯಪ್ಪ ಲೇಔಟ್‌ನಲ್ಲಿ ನಡೆದಿದೆ.
Vijaya Karnataka Web a young man tried to commit suicide by meter interest
ಮೀಟರ್‌ ಬಡ್ಡಿಯಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ


ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದ ಕುಮಾರ್‌ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈ ಸಂಬಂಧ ಕುಮಾರ್‌ ತಾಯಿ ರಾಜಮ್ಮ ಎಂಬುವರು ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತೆಂಗಿನ ಕಾಯಿ ವ್ಯಾಪಾರ ಮಾಡಲೆಂದು ಕುಮಾರ್‌, 2014ರಲ್ಲಿ ರಾಜುಗೌಡ ಎಂಬಾತನಿಂದ ಶೇ.10ರ ಬಡ್ಡಿ ದರದಲ್ಲಿ 1.50 ಲಕ್ಷ ರೂ. ಸಾಲ ಪಡೆದಿದ್ದ. ಅದರಂತೆ ಪ್ರತಿ ತಿಂಗಳ ಶೇ.10 ದರದಲ್ಲಿ ಬಡ್ಡಿಯನ್ನು ಕಟ್ಟುತ್ತಿದ್ದ. ಅದರಂತೆ ಒಟ್ಟು 3 ಲಕ್ಷ ರೂ. ಪಾವತಿಸಿದ್ದ. ಆದರೂ, ಬಿಡದೆ ನೀನು ಇಷ್ಟು ತಿಂಗಳು ಕಟ್ಟಿದ ಹಣವನ್ನು ಬಡ್ಡಿಗೆ ವಜಾ ಮಾಡಿಕೊಳ್ಳಲಾಗಿದೆ. ಸಾಲದ ಹಣವನ್ನು ಮರಳಿಸುವಂತೆ ಪೀಡಿಸಿ ಸಾಲ ಕೊಟ್ಟಿದ್ದ ರಾಜುಗೌಡ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಕುಮಾರ್‌ ತಾಯಿ ರಾಜಮ್ಮ ಆರೋಪಿಸಿದ್ದಾರೆ.

ಪ್ರತಿದಿನ ಸಾಲದ ಹಣ ನೀಡುವಂತೆ ನೀಡುತ್ತಿದ್ದ ಕಿರುಕುಳ ಸಹಿಸದೆ ಮೇ 16ರಂದು ಸಂಜೆ ಕುಮಾರ್‌ ನಿದ್ರೆ ಮಾತ್ರೆಗಳನ್ನು ಸೇವಿಸಿ ಅಸ್ವತ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಗಿರಿನಗರದ ಪಲ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಂಭೀರ ಸ್ಥಿತಿಯಲ್ಲಿರುವ ಕುಮಾರ್‌ಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಾಯಿ ರಾಜಮ್ಮ ತಿಳಿಸಿದ್ದಾರೆ.

ಮಗನಿಗೆ ಕಿರುಕುಳ ನೀಡಿ ಆತ್ಮಹತ್ಯೆ ದಾರಿ ಹಿಡಿದ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ರಾಜುಗೌಡ ವಿರುದ್ಧ ಅಧಿಕ ಬಡ್ಡಿ ನಿಷೇಧ ಕಾಯ್ದೆ, ಚೀಟಿ ವ್ಯವಹಾರ ನಿಯಂತ್ರಣ ಕಾಯ್ದೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ