ಆ್ಯಪ್ನಗರ

ಬೆಂಗಳೂರು ಉದ್ಯಮಿ ಸಾವು

ಕೆ.ಬಿ. ಕ್ರಾಸ್‌ ಸಮೀಪದ ರಜತಾದ್ರಿಪುರ ಗೇಟ್‌ ಬಳಿ ಸೋಮವಾರ ನಡೆದ ಅಪಘಾತದಲ್ಲಿ ಬೆಂಗಳೂರು ಮೂಲದ ಉದ್ಯಮಿ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ.

Vijaya Karnataka 24 Apr 2018, 5:00 am
ತುಮಕೂರು: ಕೆ.ಬಿ. ಕ್ರಾಸ್‌ ಸಮೀಪದ ರಜತಾದ್ರಿಪುರ ಗೇಟ್‌ ಬಳಿ ಸೋಮವಾರ ನಡೆದ ಅಪಘಾತದಲ್ಲಿ ಬೆಂಗಳೂರು ಮೂಲದ ಉದ್ಯಮಿ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web accident bangalore businessman dies
ಬೆಂಗಳೂರು ಉದ್ಯಮಿ ಸಾವು


ಬೆಂಗಳೂರಿನಿಂದ ಸಿಗಂಧೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೋ ಕಾರು ಅಪಘಾತಕ್ಕೊಳಗಾಗಿದೆ. ಘಟನೆಯಲ್ಲಿ ವಾಹನದ ಮಾಲೀಕ ಬೆಂಗಳೂರಿನ ರಾಮಮೂರ್ತಿ ನಗರದ ಉದ್ಯಮಿ ಅನಿಲ್‌ ಕುಮಾರ್‌ (38) ಮೃತರಾಗಿದ್ದಾರೆ. ಮೃತರ ಪತ್ನಿ, ಇಬ್ಬರು ಮಕ್ಕಳು, ಅತ್ತೆ, ಮಾವ ಹಾಗೂ ಚಾಲಕ ಗಾಯಗೊಂಡಿದ್ದಾರೆ. ಪುತ್ರ ಗಗನ್‌(7)ತೀವ್ರ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವೇಳೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ಸಕಾಲದಲ್ಲಿ ಆಂಬ್ಯುಲೆನ್ಸ್‌ ಸಿಗದೆ ಪರದಾಡುವಂತಾಯಿತು. ಆಂಬ್ಯುಲೆನ್ಸ್‌ ತಡವಾಗಿದ್ದರಿಂದ ಕೆ.ಬಿ. ಕ್ರಾಸ್‌ ಪಿಎಸ್‌ಐ ರಾಮಮೂರ್ತಿ, ತಮ್ಮ ಇಲಾಖೆ ಜೀಪಿನಲ್ಲೇ ಗಾಯಾಳುಗಳನ್ನು ತಿಪಟೂರು ಸರಕಾರಿ ಆಸ್ಪತ್ರೆಗೆ ರವಾನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ