ಆ್ಯಪ್ನಗರ

ಐಟಿ ಅಧಿಕಾರಿ ಸೋಗಿನಲ್ಲಿ ಪರಿಚಿತನಿಂದಲೇ ದರೋಡೆ

ಆದಾಯ ಇಲಾಖೆ ಅಧಿಕಾರಿಗಳ ಸೋಗಿನಲ್ಲಿವಿದ್ಯಾರಣ್ಯಪುರ ವ್ಯಾಪ್ತಿಯ ಬೊಮ್ಮಸಂದ್ರದ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಆರೋಪಿಯು ಮನೆ ಮಾಲೀಕರಿಗೆ ಪರಿಚಯದವನೇ ಆಗಿದ್ದ ಎನ್ನುವ ಸಂಗತಿ ಬಹಿರಂಗಗೊಂಡಿದೆ.

Vijaya Karnataka Web 18 Dec 2017, 9:53 am
ಬೆಂಗಳೂರು: ಆದಾಯ ಇಲಾಖೆ ಅಧಿಕಾರಿಗಳ ಸೋಗಿನಲ್ಲಿವಿದ್ಯಾರಣ್ಯಪುರ ವ್ಯಾಪ್ತಿಯ ಬೊಮ್ಮಸಂದ್ರದ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಆರೋಪಿಯು ಮನೆ ಮಾಲೀಕರಿಗೆ ಪರಿಚಯದವನೇ ಆಗಿದ್ದ ಎನ್ನುವ ಸಂಗತಿ ಬಹಿರಂಗಗೊಂಡಿದೆ.
Vijaya Karnataka Web act like it officer and theft in bengaluru
ಐಟಿ ಅಧಿಕಾರಿ ಸೋಗಿನಲ್ಲಿ ಪರಿಚಿತನಿಂದಲೇ ದರೋಡೆ


ಪ್ರಕರಣದ ತನಿಖೆಗಿಳಿದ ವಿವೇಕ್‌ನಗರ ಠಾಣೆ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದಾಗ ಈ ವಿಷಯ ಬಹಿರಂಗಗೊಂಡಿದೆ. ಹೆಗ್ಡೆ ನಗರ ನಿವಾಸಿ ಅಬ್ದಾ‌ಲ್ ನಾಸಿರ್‌ ಹಾಗೂ ಮಹಮದ್‌ ಇಲಿಯಾಸ್‌ ಬಂಧಿತ ಆರೋಪಿಗಳು.

ನಾಸಿರ್‌ ಮನೆ ಮಾಲೀಕರಾದ ಲಾವಣ್ಯ ಅವರಿಗೆ ಪರಿಚಯಸ್ಥನೇ ಆಗಿದ್ದು, ಈತನೇ ದರೋಡೆ ನಡೆಸಿದ್ದಾನೆ ಎನ್ನುವ ಸಂಗತಿ ಗೊತ್ತಿದ್ದರೂ ದೂರು ನೀಡುವ ವೇಳೆ ಇವರು ತಮಗೆ ಮಾಹಿತಿ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪೇಂಟಿಂಗ್‌ ಕೆಲಸ ಮಾಡಿಕೊಂಡಿರುವ ಮಂಗಳೂರು ಮೂಲದ ನಾಸಿರ್‌ ನಾಲ್ಕು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ವಿದ್ಯಾರಣ್ಯಪುರದಲ್ಲಿಪೇಂಟಿಂಗ್‌ ಕೆಲಸ ಮಾಡುತ್ತಿದ್ದ ಈತ, ಆಗಾಗ ಸಿಗರೇಟ್‌ ಕೊಳ್ಳಲು ಲಾವಣ್ಯ ಅವರ ಅಂಗಡಿಗೆ ಹೋಗುತ್ತಿದ್ದ. ಈ ವೇಳೆ ಲಾವಣ್ಯ ಅವರ ಪರಿಚಯ ಆಗಿತ್ತು. ಇವರ ಮನೆಯಲ್ಲಿವಯಸ್ಸಾದ ತಾಯಿ ಮತ್ತು 11 ವರ್ಷದ ಮಗ ಮಾತ್ರ ಇರುತ್ತಾನೆ ಎನ್ನುವುದೂ ಸೇರಿದಂತೆ ಲಾವಣ್ಯ ಅವರ ಸಂಪೂರ್ಣ ಪೂರ್ವಾಪರವನ್ನು ನಾಸಿರ್‌ ತಿಳಿದುಕೊಂಡಿದ್ದ. ಆನಂತರ ಆರೋಪಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಲಾವಣ್ಯ ಅವರು ಗುರುವಾರ ಅಂಗಡಿಯಲ್ಲೇ ಇರುವುದನ್ನು ಗಮನಿಸಿದ್ದ ಈತ, ಅದೇ ವೇಳೆಯಲ್ಲಿಕಳ್ಳತನ ಮಾಡಲು ಸ್ಕೆಚ್‌ ಹಾಕಿದ್ದ. ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿತನ್ನ ಸಹಚರನ ಜತೆ ಹೋಗಿ ಲಾವಣ್ಯ ಅವರ ಮನೆ ಬಾಗಿಲು ತಟ್ಟಿದ್ದ. ಹೋಂ ವರ್ಕ್‌ ಮಾಡುತ್ತಿದ್ದ ಬಾಲಕ ಜಗನ್‌, ಮನೆ ಬಾಗಿಲು ತೆಗೆಯುತ್ತಿದ್ದಂತೆ ಆರೋಪಿಗಳು ಮನೆಯೊಳಗೆ ನುಗ್ಗಿ ಬಾಲಕನ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ 20 ಸಾವಿರ ರೂ. ನಗದು ಮತ್ತು 25 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

ಶುಕ್ರವಾರ ರಾತ್ರಿ ವಿವೇಕನಗರ ಠಾಣೆ ವ್ಯಾಪ್ತಿಯ ದೇವಸ್ಥಾನವೊಂದರಲ್ಲಿಕಳ್ಳತನ ಮಾಡಿ ಪರಾರಿಯಾಗುತ್ತಿದ್ದವರನ್ನು ಬಂಧಿಸಿದಾಗ ದರೋಡೆ ಪ್ರಕರಣವೂ ಬೆಳಕಿಗೆ ಬಂದಿದೆ. ಕಳ್ಳರನ್ನು ಬಂಧಿಸಿದಾಗ ಅವರ ಬ್ಯಾಗಿನಲ್ಲಿದೇವರ ಆಭರಣಗಳು ಪತ್ತೆಯಾದವು. ದೇವಸ್ಥಾನದಲ್ಲಿಕಳ್ಳತನ ಮಾಡಿದ್ದನ್ನು ಸ್ಥಳದಲ್ಲೇ ಒಪ್ಪಿಕೊಂಡರು. ಆರೋಪಿಗಳನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಲಾವಣ್ಯ ಅವರ ಮನೆಯಲ್ಲಿದರೋಡೆ ಮಾಡಿದ್ದು ತಾವೇ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ