ಆ್ಯಪ್ನಗರ

ಪೊಲೀಸ್‌ ಕಮಿಷನರ್‌ ಭೇಟಿಯಾದ ನಟ ಪ್ರಕಾಶ್‌ ರೈ

ಪ್ರಜಾ ಪ್ರಣಾಳಿಕೆ ಚರ್ಚೆ ಸಂಬಂಧ ಮತದಾರರ ಭೇಟಿಗೆ ತೆರಳಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿಕೊಂಡಿರುವ ನಟ ಪ್ರಕಾಶ್‌ ರೈ, ನಗರ ಪೊಲೀಸ್‌ ಕಮಿಷನರ್‌ ಟಿ.ಸುನಿಲ್‌ಕುಮಾರ್‌ ಅವರನ್ನು ಭೇಟಿಯಾಗಿ ಭದ್ರತೆ ಕುರಿತು ಚರ್ಚಿಸಿದ್ದಾರೆ.

Vijaya Karnataka 28 Jan 2019, 5:00 am
ಬೆಂಗಳೂರು: ಪ್ರಜಾ ಪ್ರಣಾಳಿಕೆ ಚರ್ಚೆ ಸಂಬಂಧ ಮತದಾರರ ಭೇಟಿಗೆ ತೆರಳಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿಕೊಂಡಿರುವ ನಟ ಪ್ರಕಾಶ್‌ ರೈ, ನಗರ ಪೊಲೀಸ್‌ ಕಮಿಷನರ್‌ ಟಿ.ಸುನಿಲ್‌ಕುಮಾರ್‌ ಅವರನ್ನು ಭೇಟಿಯಾಗಿ ಭದ್ರತೆ ಕುರಿತು ಚರ್ಚಿಸಿದ್ದಾರೆ.
Vijaya Karnataka Web prakash rai


ಬಳಿಕ ಮಾತನಾಡಿದ ಪ್ರಕಾಶ್‌ ರೈ ''ನಾನು ಹಮ್ಮಿಕೊಂಡಿರುವ ಅಭಿಯಾನದ ಭದ್ರತೆ ನೀಡುವ ಕುರಿತು ನಗರ ಪೊಲೀಸ್‌ ಆಯುಕ್ತ ಟಿ.ಸುನಿಲ್‌ಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,'' ಎಂದರು.

ದಿಢೀರ್‌ ರದ್ದು: ಶಾಂತಿನಗರದಲ್ಲಿ ಭಾನುವಾರ ಪ್ರಜಾ ಪ್ರಣಾಳಿಕೆ ಚರ್ಚೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ದಿಢೀರ್‌ ಆಗಿ ಈ ಕಾರ್ಯಕ್ರಮ ರದ್ದಾಗಿತ್ತು.

''ಕೆಲವು ಹಿತಾಸಕ್ತಿಗಳು ಬಲ ಪ್ರಯೋಗದ ಮೂಲಕ ಅಭಿಯಾನ ತಡೆಯುತ್ತಿದೆ. ನಮ್ಮ ಜತೆ ಗುರುತಿಸಿಕೊಂಡಿದ್ದ ಕೆಲವರನ್ನು ಬೆದರಿಸಲಾಗಿದೆ. ಪ್ರಜೆಗಳ ಧ್ವನಿಯನ್ನು ಹತ್ತಿಕ್ಕುವ ಕ್ರೌರ್ಯ ಭಾರತದಲ್ಲಿ ಯಾವತ್ತೂ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ತಾತ್ಕಾಲಿಕವಾಗಿ ದೌರ್ಜನ್ಯ ನಡೆಸಬಹುದು,'' ಎಂದು ಅವರು ತಿಳಿಸಿದರು.

ಪ್ರಜಾ ಪ್ರಣಾಳಿಕೆ ಕಾರ್ಯಕ್ರಮ ನಡೆಸುವ ದಿನಾಂಕ ಮತ್ತು ಸ್ಥಳಗಳ ಪಟ್ಟಿಯನ್ನು ಕೇಳಿರುವ ನಗರ ಪೊಲೀಸ್‌ ಕಮಿಷನರ್‌, ಪಟ್ಟಿ ಸಿಕ್ಕ ತಕ್ಷಣ ಸೂಕ್ತ ಭದ್ರತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ