ಆ್ಯಪ್ನಗರ

ಅಲಯನ್ಸ್ ವಿವಿ ಮಾಜಿ ಕುಲಪತಿ ಅಯ್ಯಪ್ಪ ದೊರೆ ಹತ್ಯೆ ಪ್ರಕರಣ; ಮತ್ತೆ 7 ಜನರ ಬಂಧನ

ಅಲಯನ್ಸ್‌ ವಿವಿ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣ ಸಂಬಂಧ ತನಿಖೆ ಮುಂದುವರಿಸಿರುವ ಉತ್ತರ ವಿಭಾಗ ಪೊಲೀಸರು, ಶಂಕಿತ ಆರೋಪಿಗಳು ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.ಪ್ರಮುಖವಾಗಿ ಈ ಕೊಲೆಯಲ್ಲಿ ಪಾತ್ರ ಹೊಂದಿದ್ದಾರೆ ಎನ್ನಲಾದ ವಿವಿಯ ನಿರ್ದೇಶಕ ಸೇರಿದಂತೆ ಕೆಲವು ಸಿಬ್ಬಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Vijaya Karnataka Web 25 Oct 2019, 3:02 pm
ಬೆಂಗಳೂರು: ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದಲ್ಲಿ ಇನ್ನೂ ಏಳು ಜನ ಆರೋಪಿಗಳನ್ನು ಉತ್ತರ ವಿಭಾಗ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ayyappa-dore

ಜಯಮಹಲ್ ನಿವಾಸಿ ಕಾಂತರಾಜು, ಜೆ.ಸಿ ನಗರದ ಸುನೀಲ್ ರಾವ್, ಆರ್.ಟಿ ನಗರದ ಫಯಾಜ್ , ವಿನಯ್ ಹಾಗೂ ಈ ಆರೋಪಿಗಳು ತಲೆಮರೆಸಿಕೊಳ್ಳಲು ಆಶ್ರಯ ನೀಡಿದ ಅರುಣ್ ಕುಮಾರ್, ರಿಜ್ವಾನಾ ಮತ್ತು ಸಲ್ಮಾ ಎಂಬುವರನ್ನು ಬಂಧಿಸಲಾಗಿದೆ.

ಇದರೊಂದಿಗೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ ಹತ್ತಕ್ಕೇರಿದೆ.

ಲಯನ್ಸ್ ವಿವಿ ಕುಲಪತಿ ಸುಧೀರ್ ಅಂಗೂರ್ ಮತ್ತು ಸುಧೀರ್ ಸಹಾಯಕನಾಗಿರುವ ವಿವಿ ಉದ್ಯೋಗಿ ಸೂರಜ್ ಸಿಂಗ್ ಎಂಬುವರನ್ನು ಕೊಲೆ ನಡೆದ 24 ತಾಸುಗಳಲ್ಲಿ ಬಂಧಿಸಲಾಗಿತ್ತು. ನಂತರ ಮತ್ತೊಬ್ಬ ಆರೋಪಿ ಗಣೇಶ್ ಎಂಬಾತನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.

ವಾಯುವಿಹಾರಕ್ಕೆ ಹೋದಾಗ ಹತ್ಯೆ

ಅ.15ರಂದು ರಾತ್ರಿ ಅಯ್ಯಪ್ಪ ಅವರನ್ನು ಎಚ್ಎಂಟಿ ಮೈದಾನದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ‌ ಕೊಲೆ‌ ಮಾಡಲಾಗಿತ್ತು.

ಅಲಯನ್ಸ್‌ ವಿವಿಯ ವಿಶ್ರಾಂತ ಉಪ ಕುಲಪತಿ ಅಯ್ಯಪ್ಪ ದೊರೆ (53) ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದು ಸುಮಾರು 2 ಸಾವಿರ ಕೋಟಿ ರೂ. ಬೆಲೆಬಾಳುವ ಅಲಯನ್ಸ್‌ ವಿವಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವುದಕ್ಕಾಗಿ ಎನ್ನುವುದು ಬಯಲಾಗಿದೆ.

ಸಹೋದರರಾಗಿರುವ ಸುಧೀರ್‌ ಅಂಗೂರ್‌ ಮತ್ತು ಮಧುಕರ್‌ ಅಂಗೂರ್‌ ಸೇರಿ 2010ರಲ್ಲಿ ಅಲಯನ್ಸ್‌ ವಿವಿ ಸ್ಥಾಪಿಸಿದ್ದರು. ಅದಕ್ಕೆ ಅಯಪ್ಪ ದೊರೆ ಸಂಸ್ಥಾಪಕ ಉಪ ಕುಲಪತಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ