ಆ್ಯಪ್ನಗರ

'ಸೈಡ್' ಕೊಡೋ ವಿಚಾರಕ್ಕೆ ಶುರುವಾಯ್ತು ಜಗಳ: 'ಡಯಲ್ 100' ಉಳಿಸಿತು ಕ್ಯಾಬ್ ಡ್ರೈವರ್ ಪ್ರಾಣ!

ಅದೊಂದು ಕ್ಷುಲ್ಲಕ ಕಾರಣ. ಕಾರ್‌ ಚಾಲಕ ಬೈಕ್‌ಗೆ ಜಾಗ ಬಿಡಲಿಲ್ಲ ಅನ್ನೋ ವಿಚಾರ, ಗಂಭೀರ ಸ್ವರೂಪದ ಹಲ್ಲೆ ಪ್ರಕರಣಕ್ಕೆ ದಾರಿ ಮಾಡಿಕೊಟ್ಟಿದೆ. ಕುಡುಕ ಯುವಕರ ಆರ್ಭಟದಿಂದಾಗಿ ಹೊಟ್ಟೆ ಪಾಡಿಗಾಗಿ ಕ್ಯಾಬ್‌ ಓಡಿಸುತ್ತಿದ್ದ ಚಾಲಕ ಆಸ್ಪತ್ರೆ ಪಾಲಾಗಿದ್ದಾನೆ.

Bangalore Mirror Bureau 23 Oct 2019, 2:08 pm
ರಸ್ತೆಯಲ್ಲಿ ಸೈಡ್‌ ಕೊಡಲಿಲ್ಲ ಅನ್ನೋ ಕ್ಷುಲ್ಲಕ ಕಾರಣಕ್ಕೆ ಕ್ಯಾಬ್ ಚಾಲಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎರಡು ಬೈಕ್‌ಗಳಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ದುಷ್ಕರ್ಮಿಗಳು, ಕುಡಿದ ಅಮಲಿನಲ್ಲಿ ಕ್ಯಾಬ್‌ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
Vijaya Karnataka Web cab driver caricature


ಕ್ಯಾಬ್ ಚಾಲಕರೇ, ಪ್ರಯಾಣಿಕರೇ ಹುಷಾರ್! ತಿಥಿ ಕಾರ್ಯದ ನೆಪ ಹೇಳಿ 'ತಿಥಿ' ಮಾಡ್ತಾರೆ!

ಸೈಡ್‌ ಕೊಡೋ ವಿಚಾರದಲ್ಲಿ ಶುರುವಾಯ್ತು ಜಗಳ..!

ಕೆ. ಆರ್. ಪುರಂ ನಿವಾಸಿ ಕ್ಯಾಬ್ ಚಾಲಕ ವಸೀಮ್ ಸಿದ್ದಿಕಿ ಅಹ್ಮದ್, ಬೆಳಗಿನ ಜಾವ 1.40ರ ಸುಮಾರಿಗೆ ಮಾನ್ಯತಾ ಟೆಕ್‌ ಪಾರ್ಕ್‌ನಿಂದ ಕಸ್ತೂರಿನ ನಗರಕ್ಕೆ ಪ್ರಯಾಣಿಕರನ್ನು ಇಳಿಸಿ ವಾಪಸ್ಸಾಗುತ್ತಿದ್ದರು. ಪೈ ಲೇಔಟ್‌ನಲ್ಲಿ ತಮ್ ಕ್ಯಾಬ್ ಓಡಿಸುತ್ತಿದ್ದ ವೇಳೆ, ಎರಡು ಬೈಕ್‌ಗಳು ವಿರುದ್ಧ ದಿಕ್ಕಿನಲ್ಲಿ ಕ್ಯಾಬ್‌ ಎದುರಿಗೆ ಬಂದು ನಿಂತವು. ಕೂಡಲೇ ಬ್ರೇಕ್ ಹಾಕಿದ ಕ್ಯಾಬ್‌ ಚಾಲಕ ವಸೀಮ್, ರಸ್ತೆಯಲ್ಲಿ ಬೈಕ್ ನುಗ್ಗಲು ಸ್ಥಳಾವಕಾಶ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಎರಡೂ ಬೈಕ್‌ನಿಂದ ಇಳಿದ ನಾಲ್ವರು ಮನಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಸಾಕಷ್ಟು ಜಾಗ ಇದೆ, ಹಿಂದೆ ಹೋಗು ಎಂದು ಹೇಳಿದ್ದಾರೆ. ಇದೇ ವಾಗ್ವಾದ ಜಗಳಕ್ಕೆ ರೂಪಕ್ಕೆ ತಿರುಗಿದೆ.

ಮುಳುವಾಯ್ತು ಮುಂಗೋಪ: ಕ್ಯಾಬ್‌ ಡ್ರೈವರ್‌ ಜೊತೆ ಜಗಳವಾಡಿ ಪೊಲೀಸ್‌ ಪೇದೆಗೆ ಥಳಿಸಿದ ಟೆಕ್ಕಿ!

ಡ್ರೈವರ್ ವಸೀಮ್‌ನನ್ನು ಕಾರ್‌ನಿಂದ ಹೊರಗೆಳೆದ ನಾಲ್ವರೂ ದುಷ್ಕರ್ಮಿಗಳು ಮನಬಂದಂತೆ ಥಳಿಸಿದ್ದಾರೆ. ಕಾರ್‌ಗೂ ಹಾನಿ ಮಾಡಿದ್ಧಾರೆ. ನಮಗೇ ಎದುರು ಮಾತಾಡ್ತೀಯಾ ಎಂದು ಜಾಡಿಸಿದ್ದಾರೆ. ಬೈಕ್‌ನ ಕೀನಿಂದ ಬೆನ್ನಿನ ಮೇಲೆ ಗುದ್ದಿದ್ದಾರೆ. ನಾಲ್ವರು ಕೊಟ್ಟ ಹೊಡೆತದಿಂದ ರಕ್ತಸಿಕ್ತವಾಗಿದ್ದರೂ ಕೂಡಾ ಡ್ರೈವರ್ ವಸೀಮ್ ಕಷ್ಟಪಟ್ಟು 100 ನಂಬರ್‌ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದಿದ್ದಾರೆ. ಸಿಕ್ಕಾಪಟ್ಟೆ ಕುಡಿದಿದ್ದ ಈ ನಾಲ್ವರೂ ದುಷ್ಕರ್ಮಿಗಳು, ಕ್ಷುಲ್ಲಕ ಕಾರಣಕ್ಕೆ ಕೆರಳಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ವಸೀಮ್‌ ಬೆನ್ನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಮುಖದ ಮೇಲೂ ಗಾಯಗಳಾಗಿವೆ. ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗನ ಸಾವಿಗೆ ಮನನೊಂದ ವೃದ್ಧ: ‘ಸತಿ ಸಹಗಮನ’ದ ರೀತಿ ಕಾಡಿನಲ್ಲಿ ಆತ್ಮಹತ್ಯೆಗೆ ಶರಣು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ