ಆ್ಯಪ್ನಗರ

ಭೋಗ್ಯದ ಹಣ ವಾಪಸ್‌ ಕೇಳಿದ್ದಕ್ಕೆ ಹಲ್ಲೆ: ಇಬ್ಬರ ಬಂಧನ

ಭೋಗ್ಯಕ್ಕೆ ಕೊಟ್ಟಿದ್ದ ಹಣ ವಾಪಸ್‌ ಕೇಳಿದ್ದಕ್ಕೆ ಹಲ್ಲೆ ನಡೆಸಿದ್ದ ಅಪ್ಪ- ಮಗ ಇಬ್ಬರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 5 ಲಕ್ಷ ರೂ. ಭೋಗ್ಯಕ್ಕೆ ಕೊಟ್ಟಿದ್ದ ಹಣವನ್ನು ಕೇಳಿದ್ದಕ್ಕೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.

Vijaya Karnataka Web 13 Dec 2019, 11:31 am
ಬೆಂಗಳೂರು: ಭೋಗ್ಯಕ್ಕೆ ಕೊಟ್ಟಿದ್ದ ಹಣ ವಾಪಸ್‌ ಕೇಳಿದ್ದಕ್ಕೆ ಹಲ್ಲೆನಡೆಸಿದ್ದ ಅಪ್ಪ- ಮಗ ಇಬ್ಬರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಿಲಕ್‌ನಗರದ ನಿವಾಸಿ ಬಾಬು(45) ಹಾಗೂ ಇವರ ಪುತ್ರ ಕಾರ್ತಿಕ್‌(26) ಬಂಧಿತ ಆರೋಪಿಗಳು.
Vijaya Karnataka Web tilaknagar


ಪುಷ್ಪರಾಜ್‌ ಎಂಬುವವರು ಬಾಬು ಅವರ ಮನೆಯಲ್ಲಿ ಭೋಗ್ಯಕ್ಕೆ ಇದ್ದರು. 5 ವರ್ಷ ಆಗಿದ್ದರಿಂದ ಮನೆ ಖಾಲಿ ಮಾಡುವಂತೆ ಮಾಲೀಕರು ಸೂಚಿಸಿದ್ದರು. ಮನೆ ಖಾಲಿ ಮಾಡಲು ಒಪ್ಪಿಕೊಂಡ ಪುಷ್ಪರಾಜ್‌ ಭೋಗ್ಯಕ್ಕೆ ನೀಡಿದ್ದ 5 ಲಕ್ಷ ರೂ. ವಾಪಸ್‌ ಕೇಳಿದ್ದರು. ಹಣ ವಾಪಸ್‌ ಕೊಡಲು ಮನೆ ಮಾಲೀಕ ಮತ್ತು ಅವರ ಮಗ ಸತಾಯಿಸುತ್ತಲೇ ಇದ್ದರು.

ಇದೇ ಕಾರಣಕ್ಕೆ ಜಗಳ ನಡೆದಿತ್ತು. ಜಗಳದ ವೇಳೆಯಲ್ಲಿಅಪ್ಪ, ಮಗ ಇಬ್ಬರೂ ಪುಷ್ಪರಾಜ್‌ ಮೇಲೆ ಹಲ್ಲೆ ನಡೆಸಿದ್ದರು. ಮಚ್ಚಿನೇಟು ತಿಂದ ಪುಷ್ಪರಾಜ್‌ರನ್ನು ನಿಮ್ಹಾನ್ಸ್‌ಗೆ ದಾಖಲಿಸಲಾಗಿದ್ದು, ಗಂಭಿರ ಸ್ಥಿತಿಯಲ್ಲಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ