ಆ್ಯಪ್ನಗರ

ಜ್ಯೋತಿಷ್ಯದ ಹೇಳಿಕೊಡುವ ನೆಪದಲ್ಲಿ ವಂಚನೆ, ಅತ್ಯಾಚಾರ

ಜ್ಯೋತಿಷ್ಯ ಹೇಳಿಕೊಡುವ ನೆಪದಲ್ಲಿ ಯುವತಿಯೊಬ್ಬಳಿಂದ 50 ಲಕ್ಷ ರೂ. ಹಣ ದೋಚಿರುವ ಜತೆಗೆ, ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಕ್ಷತ್ರನಾಡಿ ಖ್ಯಾತಿಯ ಜ್ಯೋತಿಷಿ ದಿನೇಶ್‌ನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.

Vijaya Karnataka 22 Apr 2018, 11:26 am
ಬೆಂಗಳೂರು: ಜ್ಯೋತಿಷ್ಯ ಹೇಳಿಕೊಡುವ ನೆಪದಲ್ಲಿ ಯುವತಿಯೊಬ್ಬಳಿಂದ 50 ಲಕ್ಷ ರೂ. ಹಣ ದೋಚಿರುವ ಜತೆಗೆ, ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಕ್ಷತ್ರನಾಡಿ ಖ್ಯಾತಿಯ ಜ್ಯೋತಿಷಿ ದಿನೇಶ್‌ನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web astrology


ಅಬ್ಬಿಗೆರೆ ನಿವಾಸಿಯಾದ ದಿನೇಶ್‌ (40) ನಕ್ಷತ್ರನಾಡಿ ಜ್ಯೋತಿಷಿ ಎಂದೇ ಖ್ಯಾತಿ ಗಳಿಸಿದ್ದು, ಖಾಸಗಿ ವಾಹಿನಿಗಳಲ್ಲಿ ಗ್ರಹಗತಿ ಕಾರ್ಯಕ್ರಮ ನಡೆಸುತ್ತಿದ್ದ. ಈತನ ವಿರುದ್ಧ ಮಾಗಡಿ ರಸ್ತೆ ನಿವಾಸಿಯಾಗಿರುವ 28 ವರ್ಷದ ಯುವತಿಯೊಬ್ಬಳು ದೂರು ನೀಡಿದ್ದಾಳೆ. ಅದರಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಯುವತಿಗೆ ಜ್ಯೋತಿಷ್ಯದಲ್ಲಿ ಆಸಕ್ತಿ ಇದ್ದ ಕಾರಣ ಒಂದೂವರೆ ವರ್ಷದ ಹಿಂದೆ ಖಾಸಗಿ ವಾಹಿನಿಯಲ್ಲಿ ದಿನೇಶ್‌ ಕಾರ್ಯಕ್ರಮ ನಡೆಸುವ ವೇಳೆ ನಂಬರ್‌ ಪಡೆದುಕೊಂಡು ಪೋನ್‌ ಮಾಡಿದ್ದಳು. ಅಲ್ಲಿಂದ ಅವರ ನಡುವೆ ಪರಿಚಯ ಏರ್ಪಟ್ಟಿತ್ತು. ಈ ವೇಳೆ ಜ್ಯೋತಿಷ್ಯದಲ್ಲಿ ತನಗಿರುವ ತಿಳಿವಳಿಕೆಯನ್ನು ದಯಪಾಲಿಸುವುದಾಗಿ ಆರೋಪಿಯು ಯುವತಿಗೆ ನಂಬಿಸಿದ್ದ. ಅದರಂತೆ ಮೊದಲ ನಾಲ್ಕೈದು ತಿಂಗಳು ಪಾಠ ಹೇಳಿಕೊಟ್ಟಿದ್ದ. ಬಳಿಕ ಸಮಸ್ಯೆಯೊಂದು ನಿನ್ನನ್ನು ಬಾಧಿಸುತ್ತಿದ್ದು, ಪರಿಹಾರಕ್ಕೆ 50 ಲಕ್ಷ ರೂ. ಬೇಕಾಗಬಹುದು ಎಂದು ಹೇಳಿದ್ದ. ಒಪ್ಪಿದ ಯುವತಿ ಅಷ್ಟೂ ಹಣ ಕೊಟ್ಟಿದ್ದಳು. ಈ ಮಧ್ಯೆ ಜ್ಯೋತಿಷ್ಯದ ಪಾಠ ಹೇಳುವ ನೆಪದಲ್ಲಿ ಪತ್ನಿ ಮನೆಯಲ್ಲಿ ಇಲ್ಲದಾಗ ಯುವತಿಯನ್ನು ಕರೆಸಿಕೊಂಡು ಅತ್ಯಾಚಾರವನ್ನೂ ಮಾಡಿದ್ದ.

''ನನ್ನ ರೀತಿ ಹಲವರಿಗೆ ಆರೋಪಿ ದಿನೇಶ್‌ ಮೋಸ ಮಾಡಿದ್ದಾನೆ. ದೂರು ನೀಡಲು ಮುಂದಾಗುವ ಮಹಿಳೆಯರಿಗೆ ಹಣ ಕೊಟ್ಟು ಬಾಯಿ ಮುಚ್ಚಿಸಿದ್ದಾನೆ. ನನ್ನಿಂದ ಪಡೆದ 50 ಲಕ್ಷ ರೂ. ಅನ್ನು ಬೇರೆ ಸಂತ್ರಸ್ತ ಮಹಿಳೆಯರಿಗೆ ನೀಡಿದ್ದಾನೆ,'' ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಈತನಿಂದ ದೌರ್ಜನ್ಯಕ್ಕೆ ಒಳಗಾದವರು ಇನ್ನೂ ಇದ್ದರೆ, ಅವರು ದೂರು ನೀಡಬಹುದು ಎಂದು ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ