ಆ್ಯಪ್ನಗರ

ಜಗಳ ಬಿಡಿಸಲು ಮುಂದಾದ ಸೆಕ್ಯುರಿಟಿ ಗಾರ್ಡ್‌ಗೆ ಥಳಿತ

ಜಗಳ ಮಾಡುತ್ತಿದ್ದವರನ್ನು ಸಮಾಧಾನಪಡಿಸಲು ಮುಂದಾದ ಎಟಿಎಂ ಸೆಕ್ಯುರಿಟಿ ಗಾರ್ಡ್‌ವೊಬ್ಬರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಎಟಿಎಂ ಕೇಂದ್ರದ ಗಾಜು ಮತ್ತು ಸಿಸಿ ಕ್ಯಾಮೆರಾ ಧ್ವಂಸಗೊಳಿಸಿದ್ದಾರೆ.

Vijaya Karnataka 4 Nov 2018, 5:00 am
ಬೆಂಗಳೂರು: ಜಗಳ ಮಾಡುತ್ತಿದ್ದವರನ್ನು ಸಮಾಧಾನಪಡಿಸಲು ಮುಂದಾದ ಎಟಿಎಂ ಸೆಕ್ಯುರಿಟಿ ಗಾರ್ಡ್‌ವೊಬ್ಬರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಎಟಿಎಂ ಕೇಂದ್ರದ ಗಾಜು ಮತ್ತು ಸಿಸಿ ಕ್ಯಾಮೆರಾ ಧ್ವಂಸಗೊಳಿಸಿದ್ದಾರೆ.
Vijaya Karnataka Web atm security gaurd beaten by miscreants
ಜಗಳ ಬಿಡಿಸಲು ಮುಂದಾದ ಸೆಕ್ಯುರಿಟಿ ಗಾರ್ಡ್‌ಗೆ ಥಳಿತ


ಮೈಸೂರು ರಸ್ತೆ ಕವಿಕಾ ಲೇಔಟ್‌ ನಿವಾಸಿ ಎಸ್‌.ಕೃಷ್ಣಾಚಾರಿ (62) ಹಲ್ಲೆಗೊಳಗಾದವರು. ಮೈಸೂರು ರಸ್ತೆ ದೀಪಾಂಜಲಿ ನಗರ ಮೆಟ್ರೊ ನಿಲ್ದಾಣ ಸಮೀಪದ ಯೂನಿಯನ್‌ ಬ್ಯಾಂಕ್‌ ಎಟಿಎಂನ ಗಾಜು ಮತ್ತು ಸಿಸಿ ಕ್ಯಾಮೆರಾ ಧ್ವಂಸ ಮಾಡಿರುವ ಕಾರಣ ಸುಮಾರು 10 ಸಾವಿರ ರೂ. ನಷ್ಟ ಉಂಟಾಗಿದೆ.

ಸುಮಾರು ಒಂದುವರೆ ವರ್ಷದಿಂದ ಯುನಿಯನ್‌ ಬ್ಯಾಂಕ್‌ ಎಟಿಎಂಗೆ ಗಾರ್ಡ್‌ ಆಗಿ ಕೆಲಸ ಮಾಡುತ್ತಿರುವ ಕೃಷ್ಣಾಚಾರಿ ನ.1ರಂದು ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಕರ್ತವ್ಯದಲ್ಲಿದ್ದರು. ರಾತ್ರಿ 10.30ರ ಸುಮಾರಿಗೆ ಎಟಿಎಂ ಕೇಂದ್ರದ ಎದುರು ಮೂವರು ವ್ಯಕ್ತಿಗಳು ಜಗಳ ಮಾಡುತ್ತಿದ್ದರು. ಈ ವೇಳೆ ಕೃಷ್ಣಾಚಾರಿ ಅವರು ಜಗಳ ಬಿಡಿಸಲು ಹೋಗಿದ್ದು, ಕುಪಿತಗೊಂಡ ಮೂವರು, ಕೃಷ್ಣಾಚಾರಿ ಮೇಲೆ ಹಲ್ಲೆ ನಡೆಸಿದ್ದರು. ನಂತರ ಅವರನ್ನು ಎಟಿಎಂ ಕೇಂದ್ರದವರೆಗೆ ಎಳೆದುಕೊಂಡು ಹೋಗಿ, ಎಟಿಎಂ ಕೇಂದ್ರದ ಗಾಜು ಒಡೆದು, ಸಿಸಿ ಕ್ಯಾಮೆರಾ ಧ್ವಂಸಗೊಳಿಸಿದ್ದರು.

''ದುಷ್ಕರ್ಮಿಗಳು ಮದ್ಯದ ಅಮಲಿನಲ್ಲಿದ್ದರು. ಎಟಿಎಂ ಕೇಂದ್ರದ ಗಾಜು ಒಡೆದಿದ್ದಲ್ಲದೇ ಅಲ್ಲೇ ನಿಲ್ಲಿಸಿದ್ದ ಟೆಂಪೊ ಟ್ರಾವೆಲ್ಲರ್‌ ಸೇರಿ ಮೂರು ವಾಹನಗಳಿಗೆ ಹಾನಿ ಮಾಡಿದ್ದಾರೆ,'' ಎಂದು ಕೃಷ್ಣಾಚಾರಿ ತಿಳಿಸಿದರು.

''ಆರೋಪಿಗಳೆಲ್ಲರೂ 20 ವರ್ಷ ವಯಸ್ಸಿನವರಾಗಿದ್ದು, ಇನ್ನೂ ಹಲವು ಕಡೆ ಗಾಜುಗಳನ್ನು ಧ್ವಂಸ ಮಾಡಿದ್ದಾರೆ. ಕ್ಯಾಮೆರಾ ಧ್ವಂಸ ಮಾಡಿದ್ದರೂ ಅದಕ್ಕೂ ಮುಂಚೆ ದಾಖಲಾಗಿರುವ ವಿಡಿಯೊ ಆಧರಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ,'' ಎಂದು ಬ್ಯಾಟರಾಯನಪುರ ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ