ಆ್ಯಪ್ನಗರ

ಹೊಯ್ಸಳ ವಾಹನಕ್ಕೆ ಬೆಂಕಿ ಹಾಕುವ ಬೆದರಿಕೆ: ಬಳ್ಳಾರಿ ಟಸ್ಕರ್ಸ್‌ ಮುಖಂಡನ ಬಂಧನ

ಮಧ್ಯರಾತ್ರಿ ದಾಟಿದರೂ ನಿಯಮ ಮೀರಿ ಧ್ವನಿವರ್ಧಕ ಅಳವಡಿಸಿದ್ದನ್ನು ಪ್ರಶ್ನಿಸಿದ ಹೊಯ್ಸಳ ಸಿಬ್ಬಂದಿಯನ್ನು ಬೆದರಿಸಿ ವಾಹನಕ್ಕೆ ಬೆಂಕಿ ಹಚ್ಚುವುದಾಗಿ ಹೆದರಿಸಿದ ಆರೋಪದ ಮೇರೆಗೆ ಎಚ್‌ಎಎಲ್‌ ಠಾಣೆ ಪೊಲೀಸರು, ಬಳ್ಳಾರಿ ಟಸ್ಕರ್ಸ್‌ ಕ್ರಿಕೆಟ್‌ ತಂಡದ ಮುಖಂಡ ಅರವಿಂದ ವೆಂಕಟೇಶ್‌ ರೆಡ್ಡಿಯನ್ನು ಬಂಧಿಸಿದ್ದಾರೆ.

Vijaya Karnataka 13 Aug 2018, 10:28 am
ಬೆಂಗಳೂರು: ಮಧ್ಯರಾತ್ರಿ ದಾಟಿದರೂ ನಿಯಮ ಮೀರಿ ಧ್ವನಿವರ್ಧಕ ಅಳವಡಿಸಿದ್ದನ್ನು ಪ್ರಶ್ನಿಸಿದ ಹೊಯ್ಸಳ ಸಿಬ್ಬಂದಿಯನ್ನು ಬೆದರಿಸಿ ವಾಹನಕ್ಕೆ ಬೆಂಕಿ ಹಚ್ಚುವುದಾಗಿ ಹೆದರಿಸಿದ ಆರೋಪದ ಮೇರೆಗೆ ಎಚ್‌ಎಎಲ್‌ ಠಾಣೆ ಪೊಲೀಸರು, ಬಳ್ಳಾರಿ ಟಸ್ಕರ್ಸ್‌ ಕ್ರಿಕೆಟ್‌ ತಂಡದ ಮುಖಂಡ ಅರವಿಂದ ವೆಂಕಟೇಶ್‌ ರೆಡ್ಡಿಯನ್ನು ಬಂಧಿಸಿದ್ದಾರೆ.
Vijaya Karnataka Web arrest


ಎಚ್‌ಎಎಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್‌ ತಂಡವು ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಪಡೆದಿದ್ದ ಅನುಮತಿ ಮೇರೆಗೆ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕಗಳನ್ನು ಅಳವಡಿಸಲು ಅವಕಾಶ ನೀಡಲಾಗಿತ್ತು. ಆದರೆ ಮಧ್ಯರಾತ್ರಿ 1 ಗಂಟೆ ಕಳೆದರೂ ಹಾಡು-ಪಾರ್ಟಿ ಮುಂದುವರಿದಿತ್ತು. ಇದನ್ನು ಪ್ರಶ್ನಿಸಿದ ಪೊಲೀಸ್‌ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

''ರಾತ್ರಿ ಒಂದು ಗಂಟೆಯಾದರೂ ಧ್ವನಿವರ್ಧಕಗಳ ಆರ್ಭಟ ನಿಲ್ಲದಿದ್ದಾಗ ಸಾರ್ವಜನಿಕರು 'ನಮ್ಮ 100'ಕ್ಕೆ ಕರೆ ಮಾಡಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ವ್ಯಾಪ್ತಿಯ ಹೊಯ್ಸಳ ಸಿಬ್ಬಂದಿಗೆ ದೂರು ರವಾನೆ ಆಗಿತ್ತು. ಸ್ಥಳಕ್ಕೆ ಬಂದ ಸಿಬ್ಬಂದಿ ಧ್ವನಿವರ್ಧಕ ಬಂದ್‌ ಮಾಡಿ ಪಾರ್ಟಿ, ಕಾರ್ಯಕ್ರಮ ಮುಗಿಸುವಂತೆ ಕಾರ್ಯಕ್ರಮದ ಆಯೋಜಕರಾಗಿದ್ದ ರೆಡ್ಡಿ ಅವರಿಗೆ ಸೂಚಿಸಿದ್ದರು. ಆದರೆ, ಅವರು ತನಗೆ ದೊಡ್ಡ ದೊಡ್ಡ ನಾಯಕರು ಗೊತ್ತು ಎಂದು ಹೇಳುತ್ತಾ ಸ್ಥಳಕ್ಕೆ ಬಂದ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ್ದರು. ಓರ್ವ ಸಿಬ್ಬಂದಿಯನ್ನು ದೈಹಿಕವಾಗಿಯೇ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಜತೆಗೆ ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಬಿಡುವ ಬೆದರಿಕೆಯನ್ನೂ ಹಾಕಿದ್ದರು. ಈ ಎಲ್ಲಾ ಆರೋಪದ ಕಾರಣಕ್ಕೆ ಸ್ಥಳದಲ್ಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಯಿತು'' ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ