ಆ್ಯಪ್ನಗರ

ಬೆಂಗಳೂರು: ವ್ಹೀಲಿಂಗ್‌, ಡ್ರ್ಯಾಗ್‌ ರೇಸ್‌ ಮಾಡುವವರೇ ಎಚ್ಚರ, ಬರುತ್ತಿದೆ ಮತ್ತಷ್ಟು ಬಿಗಿ ಕ್ರಮ

ಹೊಸ ಏರ್‌ಪೋರ್ಟ್‌ ರಸ್ತೆ ಸಹಿತ ಹೆದ್ದಾರಿ, ರಿಂಗ್‌ ರಸ್ತೆ ಹಾಗೂ ಪಾಲಿಕೆ ಗಡಿ ಭಾಗದಲ್ಲಿ ವ್ಹೀಲಿಂಗ್‌ ನಡೆಯುತ್ತಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್‌ ಆಯುಕ್ತರಿಂದ ಡಿಸಿಪಿ, ಎಸಿಪಿಗಳಿಗೆ ಖಡಕ್‌ ಸೂಚನೆ

Vijaya Karnataka Web 10 Feb 2020, 5:31 pm
ಬೆಂಗಳೂರು: ನಗರದ ಯಾವುದೇ ರಸ್ತೆಗಳಲ್ಲಿ ವ್ಹೀಲಿಂಗ್‌, ಡ್ರ್ಯಾಗ್‌ ರೇಸ್‌ ನಡೆಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದರ ಜತೆಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಗರ ಪೊಲೀಸ್‌ ಆಯುಕ್ತರು ಎಲ್ಲಾ ಡಿಸಿಪಿ, ಎಸಿಪಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Vijaya Karnataka Web ವ್ಹೀಲಿಂಗ್‌
ವ್ಹೀಲಿಂಗ್‌


ಹೊಸ ಏರ್‌ಪೋರ್ಟ್‌ ರಸ್ತೆ ಸಹಿತ ಹೆದ್ದಾರಿ, ರಿಂಗ್‌ ರಸ್ತೆ ಹಾಗೂ ಪಾಲಿಕೆ ಗಡಿ ಭಾಗದಲ್ಲಿ ವ್ಹೀಲಿಂಗ್‌ ನಡೆಯುತ್ತಿದೆ. ಕೆಲವೆಡೆ ಸಂಚಾರ ಪೊಲೀಸರು ವ್ಹೀಲಿಂಗ್‌ ಮಾಡುವವರ ವಿರುದ್ಧ ಕ್ರಮ ಕೈಗೊಂಡಿದ್ದರೂ, ಯುವಜನರು ಕದ್ದು ಮುಚ್ಚಿ ರಾತ್ರಿ ವೇಳೆ ರಸ್ತೆಯಲ್ಲಿನಿಯಮ ಉಲ್ಲಂಘಿಘಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ವಿರುದ್ಧ ಪೊಲೀಸರಿಗೆ ದೂರುಗಳು ಕೇಳಿ ಬಂದಿರುವ ಕಾರಣ ವಾರಾಂತ್ಯದ ವೇಳೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

''ರಸ್ತೆಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವ್ಹೀಲಿಂಗ್‌ ಮಾಡುವುದನ್ನು ಸಹಿಸುವುದಿಲ್ಲ. ಇಂತಹ ಪ್ರಕರಣಗಳಲ್ಲಿಈಗಾಗಲೇ ಹಲವರ ವಿರುದ್ಧ ಕ್ರಮ ಕೈಗೊಂಡಿದ್ದು, ದಂಡ ವಿಧಿಸಲಾಗಿದೆ. ಮತ್ತೆ ಮತ್ತೆ ನಿಯಮ ಉಲ್ಲಂಘಿಘಿಸಿದವರ ವಾಹನ ಮುಟ್ಟುಗೋಲು ಹಾಕಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಸದ್ಯದಲ್ಲೇ ವ್ಹೀಲಿಂಗ್‌ ಮಾಡುವವರ ಮೇಲೆ ದಿನದ 24 ಗಂಟೆಯೂನಿಗಾ ಇಡಲಾಗುವುದು'' ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ 'ವಿಜಯ ಕರ್ನಾಟಕಕ್ಕೆ'ಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ