ಆ್ಯಪ್ನಗರ

ಪದೇ ಪದೇ ಕಾಲು ಕೆರೆದು ಜಗಳಕ್ಕೆ ಬರ್ತಿದ್ದ ಗಂಡ: ಬಡಿದು ಬಿಸಾಕಿದ ಹೆಂಡತಿ!

ಗಂಡ ಹೆಂಡಿರ ಜಗಳ ಉಂಡು ಮಲಗೋವರೆಗೂ ಅನ್ನೋದು ಗಾದೆ. ಇದೀಗ ಗಂಡ ಹೆಂಡಿರ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತನ್ನ ಹೆಂಡ್ತಿ ಆಕೆಯ ಸಹೋದರರ ಜೊತೆ ಸೇರಿ ಥಳಿಸಿದ್ದಾಳೆ, ಜೀವ ಬೆದರಿಕೆ ಹಾಕಿದ್ದಾಳೆ ಅಂತಾ ಪತಿ ಮಹಾಶಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ಧಾನೆ.

Bangalore Mirror Bureau 29 Sep 2019, 12:55 pm
ಬೆಂಗಳೂರು: ಹೆಂಡತಿ ಜೊತೆ ಜಗಳ ಆಡ್ತಿದ್ದ ಎಂದು ಟ್ಯಾಕ್ಸಿ ಚಾಲಕನೊಬ್ಬನಿಗೆ ಆತನ ಮಾವನ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೊಡ್ಡಬೊಮ್ಮಸಂದ್ರ ನಿವಾಸಿ 36 ವರ್ಷದ ಚಂದ್ರಶೇಖರ್, ಪೆಟ್ಟು ತಿಂದ ಟ್ಯಾಕ್ಸಿ ಚಾಲಕ. ಚಂದ್ರಶೇಖರ್ ಪತ್ನಿ ಹೇಮಾವತಿ ತನ್ನ ತವರು ಮನೆಯವರಿಗೆ ಗಂಡನ ವರ್ತನೆ ಬಗ್ಗೆ ದೂರು ಕೊಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಹೇಮಾವತಿ ಸಹೋದರರು ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರನ್ನು ತಡೆದು ನಡುರಸ್ತೆಯಲ್ಲೇ ರಾಡ್‌ನಿಂದ ಥಳಿಸಿದ್ದಾರೆ.
Vijaya Karnataka Web wife beat husband


'ಯದುವೀರ್ ದರ್ಬಾರ್' ಶುರು!: ಅರಮನೆಯ ರತ್ನಖಚಿತ ಸಿಂಹಾಸನದಲ್ಲಿ ಖಾಸಗಿ ದರ್ಬಾರ್

ಚಂದ್ರಶೇಖರ್‌ನ ಕಾರನ್ನು ತಡೆದು ನಡುರಸ್ತೆಯಲ್ಲೇ ರಾಡ್‌ನಿಂದ ಥಳಿಸಿದ ಮೇಲೂ ಹೇಮಾವತಿಯ ಸಹೋದರರಿಗೆ ತೃಪ್ತಿಯಾಗಲಿಲ್ಲ. ಬಳಿಕ ಅವರು ತಮ್ಮ ಮನೆಗೆ ಚಂದ್ರಶೇಖರನನ್ನು ‘ಎತ್ತಾಕಿಕೊಂಡು’ ಹೋಗಿದ್ದಾರೆ. ಅಲ್ಲಿ ಚಂದ್ರಶೇಖರ್ ಖುದ್ದು ಆತನ ಪತ್ನಿಯೇ ತನ್ನ ಸಹೋದರರ ಜೊತೆ ಸೇರಿಕೊಂಡು ಥಳಿಸಿದ್ದಾರೆ. ಇವರಿಂದ ಹೇಗೇ ತಪ್ಪಿಸಿಕೊಂಡು ಬಂದ ಚಂದ್ರಶೇಖರ್, ಕೊನೆಗೆ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರ ಮೊರೆ ಹೋಗಿದ್ದಾರೆ.

ಮೈಸೂರು ದಸರಾ 2019: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಡಹಬ್ಬಕ್ಕೆ ಸಾಹಿತಿ ಎಸ್.ಎಲ್. ಭೈರಪ್ಪ ಚಾಲನೆ

‘ನನ್ನ ಪತ್ನಿ, ಆಕೆಯ ಮನೆಯವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಚಂದ್ರಶೇಖರ್ ದೂರು ನೀಡಿದ್ದಾರೆ. ಆದರೆ, ಇದು ಕೌಟುಂಬಿಕ ವಿಚಾರವಾದ ಕಾರಣ, ಸ್ವಲ್ಪ ಕಾಲಾವಕಾಶ ನೀಡಿ ಎಂದು ಚಂದ್ರಶೇಖರ್ ಪತ್ನಿ ಹೇಮಾವತಿಯವರ ಮನೆಯವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

'ಯಡಿಯೂರಪ್ಪ ಸಿಎಂ ಆದಮೇಲೆ ನದಿಗಳು ತುಂಬಿ ಹರಿಯುತ್ತಿವೆ'!: ಬಿಎಸ್‌ವೈ ಎದುರೇ ಜಿಟಿಡಿ ಹೊಗಳಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ