ಆ್ಯಪ್ನಗರ

5 ರೂ. ಚೇಂಜ್ ಕೊಡ್ಲಿಲ್ಲ ಅಂತಾ ಲೇಡಿ ಕಂಡಕ್ಟರ್‌ಗೆ ಪರಚಿ ಬಿಸಾಕಿದ ಶೂರ್ಪನಖಿ!

5 ರೂಪಾಯಿಗೆ ಕೊಲೆಗಳೇ ನಡೆದುಹೋದ ದಾಖಲೆ ಪೊಲೀಸರ ರೆಕಾರ್ಡ್‌ ರೂಂಗಳಲ್ಲಿ ಸಿಗುತ್ತೆ. ಅದೇ ರೀತಿ 5 ರೂಪಾಯಿಗೆ ಮುಖ, ಮೂತಿ ಪರಚಿ ಹಾಕಿದ ಘಟನೆಯೂ ನಡೆದಿದೆ. ಈ ಘಟನೆ ನಡೆದಿರೋದು ಚಲಿಸುತ್ತಿರೋ ಬಿಎಂಟಿಸಿ ಬಸ್‌ನಲ್ಲಿ. ಪರಚಿಸಿಕೊಂಡವರು ಲೇಡಿ ಕಂಡಕ್ಟರ್!

Bangalore Mirror Bureau 20 Sep 2019, 5:03 pm
ಬೆಂಗಳೂರು: 5 ರೂಪಾಯಿ ಚಿಲ್ಲರೆ ಕೊಡೋದು ತಡವಾಗಿದ್ದಕ್ಕೆ ಬಿಎಂಟಿಸಿ ಬಸ್‌ ಕಂಡಕ್ಟರ್‌ಗೆ ಪ್ರಯಾಣಿಕ ಮಹಿಳೆಯೊಬ್ಬರು ಮೈತುಂಬಾ ಪರಚಿದ್ದಾರೆ! ಮುಖ, ಮೈ, ಕೈಗೆ ಪರಚಿ ಗಾಯಗೊಳಿಸಿದ್ದಷ್ಟೇ ಅಲ್ಲ, ಕನ್ನಡಕದ ಗಾಜನ್ನೂ ಆರೋಪಿ ಮಹಿಳೆ ಒಡೆದು ಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಬಸ್‌ನಿಂದ ಪರಾರಿಯಾಗಲು ಯತ್ನಿಸಿದ ಮಹಿಳೆಯನ್ನು ಸಹ ಪ್ರಯಾಣಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Vijaya Karnataka Web bmtc bus conductor


ಮೈಸೂರು ರಸ್ತೆ ಫ್ಲೈಓವರ್ ಅಧ್ವಾನ: ನೆಟ್ಟು, ಬೋಲ್ಟು ಲೂಸಾಗಿ ದಡಬಡ ಅಂತಿದೆ ರೋಡ್!

ಪರಚುವಷ್ಟು ಸಿಟ್ಟು ಬಂದಿದ್ದೇಕೆ?

ಬಿಎಂಟಿಸಿ ಬಸ್‌ನ ಕಂಡಕ್ಟರ್‌, ಪೊಲೀಸರಿಗೆ ನೀಡಿದ ವಿವರಣೆ ಇಲ್ಲಿದೆ ನೋಡಿ. `80R ಬಸ್‌ನಲ್ಲಿ ನಾನು ಕಂಡಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಕೆಂಪೇಗೌಡ ಬಸ್‌ ನಿಲ್ದಾಣದಿಂದ ಹೊರಟ ಬಸ್, 10.15ರ ಸುಮಾರಿಗೆ ನಂದಿನಿ ಲೇಔಟ್‌ನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಸ್‌ ನಿಲ್ದಾಣ ತಲುಪಿತು. 22 ಪ್ರಯಾಣಿಕರು ಆಗ ಬಸ್‌ನಲ್ಲಿದ್ದರು. ಮನೆ ಕೆಲಸ ಮಾಡುವ 45 ವರ್ಷ ವಯಸ್ಸಿನ ಸರಸ್ವತಿ ಕೂಡಾ ಇದೇ ಬಸ್‌ನಲ್ಲಿದ್ದರು.'

ಪಿಜಿಯಲ್ಲಿ ವಾಸ್ತವ್ಯ ಹೂಡುವ ಯುವತಿಯರೇ ಹುಷಾರ್!: ಮಾಲೀಕನಿಂದಲೇ ಲೈಂಗಿಕ ದೌರ್ಜನ್ಯ

'ಡ್ರೈವರ್‌ ಸೀಟ್‌ ಪಕ್ಕದಲ್ಲಿ ಆರೋಪಿ ಮಹಿಳೆ ಸರಸತ್ವತಿ ನಿಂತಿದ್ದರು. ನಾನು ಕೊನೆಯ 22ನೇ ವ್ಯಕ್ತಿಗೆ ಟಿಕೆಟ್‌ ಕೊಡುವ ವೇಳೆಗೆ, ಆಕೆ 5 ರೂಪಾಯಿ ಬಾಕಿ ಕೊಡುವಂತೆ ಕೂಗಿ ಕೇಳಿದರು. ನಾನು ಬಸ್‌ನ ಹಿಂಭಾಗದಲ್ಲಿದ್ದೆ. ಯಾವುದೇ ಬಾಕಿ ಉಳಿಸಿಲ್ಲ ಎಂದು ಅಲ್ಲಿಂದಲೇ ಕೂಗಿ ಹೇಳಿದೆ. ಕೂಡಲೇ ಆಕೆ ಕೂಗಾಡುತ್ತಾ ವಾದಿಸೋಕೆ ಮುಂದಾದಳು. ಆಗ ನಾನು ಆಕೆಗೆ ಸ್ವಲ್ಪ ಸಮಯ ಕಾಯುವಂತೆ ಹೇಳಿದೆ. ಆದರೆ ಆಕೆ ಬಾಯಿಗೆ ಬಂದಂತೆ ಬೈಯ್ಯತೊಡಗಿದಳು. ಕೂಡಲೇ ನಾನು ಬಸ್‌ನ ಮುಂಭಾಗಕ್ಕೆ ಹೋಗಿ ಆಕೆಗೆ ಚಿಲ್ಲರೆ ಕೊಟ್ಟೆ. ಆಕೆ ಇಳಿಯಬೇಕಿದ್ದ ನಿಲ್ದಾಣ ಬಂದ ಕಾರಣ, ಇಳಿಯಿರಿ ಎಂದು ಹೇಳಿದೆ. ಕೂಡಲೇ ಸಿಟ್ಟಿಗೆದ್ದ ಆಕೆ, ನನ್ನ ತಲೆಯ ಮೇಲೆ ಹೊಡೆದಳು. ಮುಖ ಹಾಗೂ ಕುತ್ತಿಗೆಗೆ ಉಗುರಿನಿಂದ ಪರಚಿದಳು. ಅವಾಚ್ಯ ಶಬ್ದಗಳಿಂದ ಬೈಯ್ಯತೊಡಗಿದಳು. ತಲೆ ಕೂದಲನ್ನು ಎಳೆದು ನನ್ನ ಕೈಗಳಿಗೂ ಪರಚಿ ಗಾಯ ಮಾಡಿದಳು. ಆಕೆಯ ಉಗುರು ಉದ್ದವಾಗಿ, ಚೂಪಾಗಿ ಇತ್ತು. ಹೀಗಾಗಿ ನನ್ನ ಮೈತುಂಬಾ ಪರಚಿದ ಗಾಯಗಳಾದವು. ಅಷ್ಟರಲ್ಲಿ ನಿಲ್ದಾಣ ಬಂದ ಕಾರಣ ಬಸ್‌ ನಿಲ್ಲಿಸಲಾಯ್ತು. ಕೂಡಲೇ ಬಸ್‌ ಇಳಿದು ಹೊರಡಲು ಮಹಿಳೆ ಸಿದ್ಧವಾದಳು. ಆದರೆ, ಸಹಪ್ರಯಾಣಿಕರು ಆಕೆಯನ್ನು ಹಿಡಿದು, ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ’ ಎಂದು ಮಹಿಳಾ ಕಂಡಕ್ಟರ್ ಮಧು ಅವರು ವಿವರಿಸಿದ್ದಾರೆ.

ಯುವತಿಯಿಂದ ಮಸಾಜ್ ಮಾಡಿಸಿಕೊಳ್ಳೋ ಆಸೆ!: ಯುವಕನಿಗೆ ಬಿತ್ತು ಭರ್ಜರಿ ಟೋಪಿ

ಮಧು ಅವರ ಪ್ರಕಾರ, ಆರೋಪಿ ಮಹಿಳೆ ಸರಸ್ವತಿ ಯಾವುದೋ ಕಾರಣಕ್ಕೆ ಬೇಸರದಲ್ಲಿದ್ದರು. ಈಕೆಯ ಹುಚ್ಚಾಟದಿಂದಾಗಿ ನನ್ನ ಕನ್ನಡಕದ ಗಾಜು ಒಡೆದುಹೋಯ್ತು. ಆದರೆ ನಾನು ತಿರುಗಿ ಹಲ್ಲೆ ಮಾಡಲಿಲ್ಲ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರೇ ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಎಂದು ಮಧು ಹೇಳ್ತಾರೆ. 16 ವರ್ಷಗಳಿಂದ ಬಸ್ ಕಂಡಕ್ಟರ್‌ ಆಗಿ ಕೆಲಸ ಮಾಡ್ತಿರುವ ಮಧು ಅವರಿಗೆ ಈ ರೀತಿಯ ಅನುಭವವೇ ಆಗಿರಲಿಲ್ಲವಂತೆ.

ಆರೋಪಿ ಮಹಿಳೆ ಸರಸ್ವತಿ ಪೊಲೀಸ್ ಠಾಣೆಯಲ್ಲಿ ಉಲ್ಟಾ ಹೊಡೆಯಲು ಯತ್ನಿಸಿದಳು. ನನ್ನ ಮೇಲೇ ಹಲ್ಲೆಯಾಗಿದೆ ಎಂದು ವಾದಿಸತೊಡಗಿದಳು. ಆದರೆ, ಆಕೆಯ ಮೈಮೇಲೆ ಯಾವುದೇ ಗಾಯದ ಗುರುತುಗಳು ಇರಲಿಲ್ಲ. ಹೀಗಾಗಿ, ನಂದಿನಿ ಲೇಔಟ್‌ ಪೊಲೀಸರು ಆರೋಪಿ ಸರಸ್ವತಿ ವಿರುದ್ಧ ಪ್ರಕರಣ ದಾಖಲಿಸಿದರು. ಇದೀಗ ಆರೋಪಿ ಮಹಿಳೆ ಸರಸ್ವತಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಶೀಲ ಶಂಕಿಸಿದ ಪತಿರಾಯ: ಬಡಿದು ಚರಂಡಿಗೆ ಬಿಸಾಕಿದ ಪತ್ನಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ