ಆ್ಯಪ್ನಗರ

ಕಿರುಕುಳದ ವಿರುದ್ಧ ದೂರು ನೀಡಲು ಹೋದ ಮಹಿಳೆ ಜೈಲು ಪಾಲು!

ವ್ಯಕ್ತಿಯೊಬ್ಬ ತನಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಪೊಲೀಸರಿಗೆ ದೂರು ಕೊಡಲು ಹೋದ ಬಾಂಗ್ಲಾ ಮಹಿಳೆ ಸ್ವತಃ ಜೈಲು ಜೈಲು ಪಾಲಾಗಿರುವ ಘಟನೆ ನಡೆದಿದೆ. ದಾಖಲೆ ಪತ್ರಗಳನ್ನು ಪರಿಶೀಲಿಸಿದಾಗ ಆಕೆ ಅಕ್ರಮವಾಗಿ ಭಾರತಕ್ಕೆ ಬಂದವಳು ಎಂದು ತಿಳಿದುಬಂತು.

Vijaya Karnataka Web 4 Nov 2019, 10:08 am
ಬೆಂಗಳೂರು: ವ್ಯಕ್ತಿಯೊಬ್ಬ ತನಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಪೊಲೀಸರಿಗೆ ದೂರು ಕೊಡಲು ಹೋದ ಬಾಂಗ್ಲಾ ಮಹಿಳೆ ಸ್ವತಃ ಜೈಲು ಪಾಲಾಗಿದ್ದಾರೆ. ಬಾಂಗ್ಲಾದ ಕುಲ್ನಾರುಕ್ಷ ಜಿಲ್ಲೆಯ ನೂರ್ಪು (23) ಬಂಧಿತ ಮಹಿಳೆ. ಮಲ್ಲತ್ತಳ್ಲಿಯ ಶೆಡ್‌ವೊಂದರಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದ ಈಕೆ ಬೆಂಗಳೂರಿಗೆ ಬಂದು ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇರೆಗೆ ಜ್ಞಾನಭಾರತಿ ಠಾಣೆ ಪೊಲೀಸರು, ಜೈಲಿಗೆ ಕಳುಹಿಸಿದ್ದಾರೆ.
Vijaya Karnataka Web arrest


ನಡೆದದ್ದೇನು?
ಶೆಡ್‌ನಲ್ಲಿ ನೆಲೆಸಿದ್ದ ಈಕೆಗೆ ಸಾದಿಕ್‌ ರೆಹಮಾನ್‌ ಎಂಬಾತ ಕಾಟ ಕೊಡುತ್ತಿದ್ದ. ಈತನ ಕಾಟ ತಡೆಯಲಾರದೆ ರಕ್ಷಣೆ ಕೋರಿ ನೂರ್ಪು ಪೊಲೀಸರಿಗೆ ದೂರು ನೀಡಲು ಠಾಣೆಗೆ ತೆರಳಿದ್ದಳು. ಈ ವೇಳೆ ಈಕೆಯ ರಹದಾರಿ ಪತ್ರಗಳನ್ನು ಪೊಲೀಸರು ಕೇಳಿದ್ದರು. ಆದರೆ ತನ್ನ ಬಳಿ ಯಾವುದೇ ಪತ್ರ ಇಲ್ಲಎಂದು ಆಕೆ ಹೇಳಿದ್ದಲ್ಲದೆ ಕೂಲಿ ಕೆಲಸಕ್ಕಾಗಿ ತಾನು ಇಲ್ಲಿಗೆ ಬಂದಿದ್ದಾಗಿ ಹೇಳಿಕೆ ನೀಡಿದ್ದಳು. ತಕ್ಷಣ ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈಕೆ ಅಕ್ರಮ ವಲಸೆ ಬಂದು ನೆಲೆಸಿದ್ದಾಳೆ ಎನ್ನುವುದು ಗೊತ್ತಾಗುತ್ತಿದ್ದಂತೆ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಈಕೆಗೆ ಕಾಟ ಕೊಡುತ್ತಿದ್ದ ಸಾದಿಕ್‌ನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈತ ಅಧಿಕೃತವಾಗಿ ಪಾಸ್‌ಪೋರ್ಟ್‌ ಮತ್ತು ವೀಸಾ ಹೊಂದಿದ್ದು, ಕಾನೂನು ಬದ್ಧವಾಗಿ ದಾಖಲೆಗಳನ್ನು ಹೊಂದಿದ್ದಾನೆ. ಈ ಕಾರಣದಿಂದ ಆತನಿಗೆ ಬೇರೆ ಯಾವ ಮಹಿಳೆಗೂ ಕಾಟ ಕೊಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ