ಆ್ಯಪ್ನಗರ

ಬ್ಯಾಂಕ್‌ ಮ್ಯಾನೇಜರ್‌ ಬೆದರಿಸಿ ದರೋಡೆ

ಕೆನರಾ ಬ್ಯಾಂಕ್‌ ವ್ಯವಸ್ಥಾಪಕರನ್ನು ದುಷ್ಕರ್ಮಿಯೊಬ್ಬ ಬೆದರಿಸಿ ಸ್ಕೂಟರ್‌ನಲ್ಲಿ ಸುತ್ತಾಡಿಸಿ ಎಟಿಎಂನಿಂದ 40 ಸಾವಿರ ರೂ. ಡ್ರಾ ಮಾಡಿಸಿಕೊಂಡಿರುವ ಘಟನೆ ಜಯನಗರ ಮೆಟ್ರೊ ನಿಲ್ದಾಣದ ಬಳಿ ನಡೆದಿದೆ.

Vijaya Karnataka 5 May 2018, 5:00 am
ಬೆಂಗಳೂರು: ಕೆನರಾ ಬ್ಯಾಂಕ್‌ ವ್ಯವಸ್ಥಾಪಕರನ್ನು ದುಷ್ಕರ್ಮಿಯೊಬ್ಬ ಬೆದರಿಸಿ ಸ್ಕೂಟರ್‌ನಲ್ಲಿ ಸುತ್ತಾಡಿಸಿ ಎಟಿಎಂನಿಂದ 40 ಸಾವಿರ ರೂ. ಡ್ರಾ ಮಾಡಿಸಿಕೊಂಡಿರುವ ಘಟನೆ ಜಯನಗರ ಮೆಟ್ರೊ ನಿಲ್ದಾಣದ ಬಳಿ ನಡೆದಿದೆ.
Vijaya Karnataka Web bank manager robed
ಬ್ಯಾಂಕ್‌ ಮ್ಯಾನೇಜರ್‌ ಬೆದರಿಸಿ ದರೋಡೆ


ಹಂಪಿನಗರ ನಿವಾಸಿ ಕೆ.ಸರ್ವೇಶ್‌ (50) ಸುಲಿಗೆಗೆ ಒಳಗಾದವರು. ಏ.30ರಂದು ರಾತ್ರಿ 7.45ರಿಂದ 8.45ರ ನಡುವೆ ಘಟನೆ ನಡೆದಿದೆ. ಏ.30 ರಂದು ರಾತ್ರಿ 7.45ರ ಸುಮಾರಿಗೆ ಜಯನಗರಕ್ಕೆ ಬಂದಿದ್ದ ಸರ್ವೇಶ್‌, ಮೆಟ್ರೊ ನಿಲ್ದಾಣದ ಸರ್ವಿಸ್‌ ರಸ್ತೆಯಲ್ಲಿ ತಮ್ಮ ಕಾರು ನಿಲ್ಲಿಸಿ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬಂದ ಸುಮಾರು 30ರಿಂದ 35 ವರ್ಷದ ದುಷ್ಕರ್ಮಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿ ಮೊಬೈಲ್‌ ಪೋನ್‌ ಕಿತ್ತುಕೊಂಡಿದ್ದಾನೆ. ಬಳಿಕ ಮೊಬೈಲ್‌ ಫೋನ್‌ ಅನ್ನು ಕಾರ್‌ನಲ್ಲೇ ಎಸೆದು ಬಿಸಾಡಿ ಸರ್ವೇಶ್‌ ಅವರನ್ನು ಬೆದರಿಸಿ ತನ್ನ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಜಯನಗರದ ಸುತ್ತಲಿನ ಪ್ರದೇಶಗಳಲ್ಲಿ ಸುತ್ತಾಡಿಸಿದ್ದಾನೆ. ಬಳಿಕ ವಿವಿ ಪುರ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್‌ನ ಎಟಿಎಂ ಬಳಿ ನಿಲ್ಲಿಸಿ, ಸರ್ವೇಶ್‌ ಅವರ ಕಾರ್ಡ್‌ನಿಂದ 40 ಸಾವಿರ ರೂ. ಡ್ರಾ ಮಾಡಿಸಿದ್ದಾನೆ. ಹಣ ಪಡೆದು ಮತ್ತೆ 2 ಲಕ್ಷ ರೂ. ನೀಡಬೇಕು ಎಂದು ಹೆದರಿಸಿದ್ದಾನೆ. ಈ ವೇಳೆ ಸರ್ವೇಶ್‌ ಅವರು ಆರೋಪಿಯಿಂದ ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸರ್ವೇಶ್‌ ಅವರನ್ನು ವಿ.ವಿ ಪುರ ಪೊಲೀಸ್‌ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಸೂಚಿಸಿದ್ದಾರೆ.

'' ಸಾರ್ವಜನಿಕ ರಸ್ತೆಯಲ್ಲಿ ಈ ರೀತಿ ಘಟನೆ ನಡೆದಿರುವುದು ಭೀತಿ ಉಂಟು ಮಾಡಿದೆ. ಆತ ಯಾರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಬೆದರಿಕೆ ಹಾಕಿ 40 ಸಾವಿರ ರೂ. ನಗದು ಡ್ರಾ ಮಾಡಿಸಿ ನಂತರ, ನಂತರ ಬಳಿಯಿದ್ದ 5,500 ರೂ. ಸುಲಿಗೆ ಮಾಡಿದ್ದಾನೆ,'' ಎಂದು ಸರ್ವೇಶ್‌ ತಿಳಿಸಿದರು.

ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ