ಆ್ಯಪ್ನಗರ

ಬ್ಯಾಂಕ್‌ ಸಿಬ್ಬಂದಿಯಿಂದಲೇ ಗ್ರಾಹಕರ ಖಾತೆಗೆ ಕನ್ನ: ₹22 ಲಕ್ಷ ವರ್ಗಾಯಿಸಿದ್ದ ಆರೋಪಿ ಸೆರೆ!

ಗ್ರಾಹಕರೊಬ್ಬರ ಖಾತೆಯಲ್ಲಿನ ಹಣವನ್ನು ಬ್ಯಾಂಕ್‌ ಸಿಬ್ಬಂದಿಯೇ ಲಪಟಾಯಿಸಿರುವ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಸಿಐಡಿ ಸೈಬರ್‌ ಕ್ರೈಂ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಈತ ಗ್ರಾಹಕನ ಖಾತೆಯಿಂದ 22 ಲಕ್ಷ ರೂ. ದೋಚಿದ್ದ.

Vijaya Karnataka Web 29 Jul 2020, 9:28 pm
ಬೆಂಗಳೂರು: ಗ್ರಾಹಕರೊಬ್ಬರ ಖಾತೆಯಲ್ಲಿನ ಹಣವನ್ನು ಬ್ಯಾಂಕ್‌ ಸಿಬ್ಬಂದಿಯೇ ಲಪಟಾಯಿಸಿರುವ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಸಿಐಡಿ ಸೈಬರ್‌ ಕ್ರೈಂ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Vijaya Karnataka Web banking fraud new


ಐಡಿಎಫ್‌ಸಿ ಬ್ಯಾಂಕ್‌ ವ್ಯವಸ್ಥಾಪಕ ರಾಜೇಶ್‌ ನಂದಾ ಕೊಟ್ಟ ದೂರಿನ ಮೇರೆಗೆ ಆಂಧ್ರಪ್ರದೇಶ ಮೂಲದ ಶ್ರೀನಿವಾಸ್‌ನನ್ನು (39) ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಜೀವನಬಿಮಾನಗರದ ನಿವಾಸಿಯಾಗಿರುವ ಶ್ರೀನಿವಾಸ್‌, ಈ ಹಿಂದೆ ಐಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಬ್ಯಾಂಕ್‌ ಕೆಲಸಕ್ಕೆ ರಾಜೀನಾಮೆ ನೀಡಿ ಬೇರೊಂದು ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ ಮೊದಲು ಕೆಲಸ ಮಾಡುತ್ತಿದ್ದ ವೇಳೆ ಒಂದಷ್ಟು ಗ್ರಾಹಕರ ಮಾಹಿತಿಯನ್ನು ಕದ್ದು ಇಟ್ಟುಕೊಂಡಿದ್ದ. ಕೆಲಸ ಬಿಟ್ಟ ಬಳಿಕ ಗ್ರಾಹಕರೊಬ್ಬರ ಖಾತೆಯಲ್ಲಿನ 22 ಲಕ್ಷ ರೂ. ಬೇರೊಂದು ಖಾತೆಗೆ ವರ್ಗಾಯಿಸಿ ಲಪಟಾಯಿಸಿದ್ದ ಎನ್ನುವುದು ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಪ್ರತಿದಿನ 5 ಸಾವಿರ ಪ್ರಕರಣ: ಬೆಂಗಳೂರಲ್ಲಿ 50 ಸಾವಿರ ದಾಟಿದ ಸೋಂಕು!

ನಂಬರ್‌ ಬದಲಾಯಿಸಿದ್ದ: ಖಾತೆಯಿಂದ ಹಣ ವರ್ಗಾವಣೆಯಾಗುವ ವೇಳೆಯಲ್ಲಿ ಗ್ರಾಹಕರ ಮೊಬೈಲ್‌ ನಂಬರ್‌ಗೆ ಬ್ಯಾಂಕ್‌ನಿಂದ ಮೆಸೇಜ್‌ ಹೋಗುತ್ತದೆ ಎನ್ನುವುದನ್ನು ತಿಳಿದಿದ್ದ ಆರೋಪಿ, ಬ್ಯಾಂಕ್‌ ದಾಖಲೆಗಳಲ್ಲಿದ್ದ ಗ್ರಾಹಕರ ನಂಬರನ್ನೇ ಬದಲಾಯಿಸಿ ಬೇರೊಂದು ನಂಬರ್‌ ಸೇರಿಸಿದ್ದ.

ಬಳಿಕ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಒಟಿಪಿಯನ್ನು ತನ್ನ ಮೊಬೈಲ್‌ಗೆ ಬರುವಂತೆ ಮಾಡಿಕೊಂಡಿದ್ದ. ಬಳಿಕ ರಾವ್‌ ಎಂಬುವರ ಖಾತೆಯಲ್ಲಿದ್ದ ಹಣವನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿರುವ ಕಲ್ಪನಾ ಎಂಬುವರ ಖಾತೆಗೆ ವರ್ಗಾಯಿಸಿದ್ದ. ಹಣ ವರ್ಗಾವಣೆ ಆಗಿರುವ ಕುರಿತು ರಾವ್‌ ಅವರು ಬ್ಯಾಂಕ್‌ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು.

ಜುಲೈ 31ರೊಳಗೆ ಮುಗಿಸಲೇಬೇಕಾದ 7 ಹಣಕಾಸು ಟಾಸ್ಕ್‌ಗಳಿವು!

ಖಾತೆ ಪರಿಶೀಲನೆ ವೇಳೆ ಗ್ರಾಹಕರ ಮೊಬೈಲ್‌ ನಂಬರ್‌ ಬದಲಾಗಿರುವುದು ಗೊತ್ತಾಗಿತ್ತು. ಹೀಗಾಗಿ, ಸೈಬರ್‌ ಠಾಣೆಗೆ ವಂಚನೆ ದೂರು ಕೊಟ್ಟಿದ್ದರು. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಸಿಐಡಿ ಅಧಿಕಾರಿಗಳು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ