ಆ್ಯಪ್ನಗರ

ಚಿಕಿತ್ಸೆಗಾಗಿ ಇಟ್ಟಿದ್ದ ಹಣಕ್ಕೆ ಕನ್ನ ಹಾಕಿದ ಖದೀಮ,ಕಾರ್ಡ್‌ ನವೀಕರಣ ಎಂದು 1.25 ಲಕ್ಷ ವಂಚನೆ!

ಡೆಬಿಟ್‌ ಕಾರ್ಡ್‌ ನವೀಕರಣದ ಸೋಗಿನಲ್ಲಿ ವೃದ್ಧೆಯೊಬ್ಬರಿಗೆ ಕರೆ ಮಾಡಿದ ಆನ್‌ಲೈನ್‌ ಖದೀಮರು, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪತಿಯ ಚಿಕಿತ್ಸೆಗೆಂದು ಇಟ್ಟಿದ್ದ 1.25 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ.

Vijaya Karnataka Web 10 Dec 2019, 2:01 pm
ಬೆಂಗಳೂರು: ಡೆಬಿಟ್‌ ಕಾರ್ಡ್‌ ನವೀಕರಣದ ಸೋಗಿನಲ್ಲಿ ವೃದ್ಧೆಯೊಬ್ಬರಿಗೆ ಕರೆ ಮಾಡಿದ ಆನ್‌ಲೈನ್‌ ಖದೀಮರು, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪತಿಯ ಚಿಕಿತ್ಸೆಗೆಂದು ಬ್ಯಾಂಕ್‌ ಖಾತೆಯಲ್ಲಿಟ್ಟಿದ್ದ 1.25 ಲಕ್ಷ ರೂ. ದೋಚಿದ್ದಾರೆ.
Vijaya Karnataka Web online


ಈ ಸಂಬಂಧ ವಿದ್ಯಾರಾವ್‌ (68) ಎಂಬುವರು ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾ ಅವರ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಆಸ್ಪತ್ರೆಯಲ್ಲಿದ್ದಾಗ ಕರೆ ಮಾಡಿದ ವ್ಯಕ್ತಿ, ಎಸ್‌ಬಿಐನ ಪ್ರತಿನಿಧಿ ಎಂದು ಮಾತನಾಡಿದ್ದಾನೆ. ನಿಮ್ಮ ಖಾತೆಗೆ ಸಂಬಂಧಿಸಿದಂತೆ ಡೆಬಿಟ್‌ ಕಾರ್ಡ್‌ ನವೀಕರಣ ಮಾಡಬೇಕಾಗಿದೆ. ಅದಕ್ಕಾಗಿ ನಿಮ್ಮ ಕಾರ್ಡ್‌ ವಿವರ ಒದಗಿಸುವಂತೆ ಕೇಳಿದ್ದಾನೆ. ಆದರೆ, ಈಗಾಗಲೇ ಕಾರ್ಡ್‌ಗಳು ನವೀಕರಣಗೊಂಡಿವೆ ಎಂದು ವಿದ್ಯಾ ಹೇಳಿದ್ದಾರೆ. ಆದರೂ, ಬಿಡದ ಆರೋಪಿ ಹೊಸ ಮ್ಯಾಗ್ನೆಟಿಕ್‌ ಕಾರ್ಡ್‌ಗಳು ಬಂದಿರುವ ಕಾರಣ ನವೀಕರಣ ಮಾಡಬೇಕು ಎಂದು ಬಲವಂತ ಮಾಡಿ ನಂಬಿಕೆ ಹುಟ್ಟಿಸಿದ್ದಾನೆ.

ಆತನ ಮಾತು ನಂಬಿದ ವಿದ್ಯಾ ಅವರು ತಮ್ಮ ಬಳಿ ಇದ್ದ ಎರಡು ಕಾರ್ಡ್‌ಗಳ ವಿವರ ಹಾಗೂ ಆರೋಪಿ ಕೇಳಿದ ಇನ್ನಿತರ ವಿವರವನ್ನು ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿವಿದ್ಯಾ ಅವರ ಬ್ಯಾಂಕ್‌ ಖಾತೆಯಿಂದ 75 ಸಾವಿರ ರೂ. ಹಾಗೂ ಮತ್ತೊಂದು ಹಂತದಲ್ಲಿ50 ಸಾವಿರ ರೂ. ಕಡಿತಗೊಂಡಿದೆ. ನಂತರ ಹಣ ಕಡಿತಗೊಂಡಿರುವುದು ಗೊತ್ತಾಗಿ, ವಿದ್ಯಾ ಅವರು ಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ. ಆದರೆ, ನೀವಾಗಿಯೇ ಕಾರ್ಡ್‌ನ ವಿವರ ಕೊಟ್ಟಿರುವ ಕಾರಣ ಏನು ಮಾಡಲಾಗದು. ಪೊಲೀಸ್‌ ಠಾಣೆಗೆ ದೂರು ನೀಡಿ ಎಂದು ಬ್ಯಾಂಕ್‌ನವರು ಸಲಹೆ ನೀಡಿದ್ದಾರೆ. ವಿದ್ಯಾ ಅವರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಕ್ರಮವಾಗಿ ವರ್ಗಾವಣೆಗೊಂಡಿರುವ ಬ್ಯಾಂಕ್‌ ವಿವರಗಳನ್ನು ಪತ್ತೆ ಮಾಡಿ, ವಂಚಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಎಟಿಎಂ ಹಣ ದೋಚುತ್ತಿದ್ದ ಇಬ್ಬರ ಬಂಧನ: ಐಷಾರಾಮಿ ಹೋಟೆಲ್‌, ವಿಮಾನದಲ್ಲೇ ಪ್ರಯಾಣ

ಮತ್ತೊಂದು ಪ್ರಕರಣ: ಯಾವುದೇ ಮಾಹಿತಿ ಶೇರ್‌ ಮಾಡದಿದ್ದರೂ ಹಣ ಮಾಯ !
ಸಾಫ್ಟ್‌ವೇರ್‌ ಉದ್ಯೋಗಿ ಸೌಜನ್ಯ ಚಂದೂರಿ ಎಂಬುವವರ ಕ್ರೆಡಿಟ್‌ ಕಾರ್ಡ್‌ನಿಂದ ಖದೀಮರು 1.4 ಲಕ್ಷ ರೂ.ಯನ್ನು ವಿತ್‌ ಡ್ರಾ ಮಾಡಿಕೊಂಡಿದ್ದಾರೆ.

ಮೊಬೈಲ್‌ ಕರೆ ನಂಬಿ ಏಕಾಏಕಿ ಮಾಹಿತಿ ಕೊಟ್ಟು ಮೋಸ ಹೋಗಬೇಡಿ , ಎಚ್ಚರ!

ಭಾನುವಾರ ನಸುಕಿನಲ್ಲಿ ನನ್ನ ಕಾರ್ಡ್‌ ಬಳಸಿಕೊಂಡು 2019 ಯುಎಸ್‌ ಡಾಲರ್‌ ಅನ್ನು ವಿತ್‌ಡ್ರಾ ಮಾಡಿಕೊಳ್ಳಲಾಗಿದೆ. ಕಾರ್ಡ್‌ ನನ್ನ ಬಳಿಯೇ ಇತ್ತು. ಅಲ್ಲದೇ, ಕಾರ್ಡ್‌ನ ಯಾವುದೇ ವಿವರಗಳನ್ನು ನಾನು ಯಾರೊಂದಿಗೂ ಶೇರ್‌ ಮಾಡಿಕೊಂಡಿರಲಿಲ್ಲ. ನನಗೆ ಗೊತ್ತಿಲ್ಲದೆಯೇ ಹಣ ವಿತ್‌ಡ್ರಾ ಮಾಡಿಕೊಳ್ಳಲಾಗಿದೆ. ಈ ಕುರಿತು ಬ್ಯಾಂಕ್‌ನಿಂದ ಯಾವುದೇ ಸಂದೇಶಗಳು ಕೂಡ ಬಂದಿಲ್ಲ ಎಂದು ಕೊಡಿಗೇಹಳ್ಳಿ ಠಾಣೆಗೆ ನೀಡಿರುವ ದೂರಿನಲ್ಲಿಸೌಜನ್ಯ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ