ಹ್ಯಾಂಡಲ್ ಮುರಿದು ದುಬಾರಿ ಬೆಲೆಯ ಬೈಕ್ ಕಳವು ಮಾಡುತ್ತಿದ್ದ ಆರೋಪಿಗಳ ಸೆರೆ
ಬಜಾಜ್ ಪಲ್ಸರ್, ಯಮಹಾ ಎಫ್ಜಡ್ ಮತ್ತಿತರ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, 30 ಲಕ್ಷ ರೂ. ಮೌಲ್ಯದ 22 ಬೈಕ್ಗಳನ್ನು ಜಪ್ತಿ ಮಾಡಿದ್ದಾ
Vijaya Karnataka 19 Aug 2018, 5:00 am
ಬೆಂಗಳೂರು: ಬಜಾಜ್ ಪಲ್ಸರ್, ಯಮಹಾ ಎಫ್ಜಡ್ ಮತ್ತಿತರ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು, 30 ಲಕ್ಷ ರೂ. ಮೌಲ್ಯದ 22 ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ.
ತಮಿಳುನಾಡು ಮೂಲದ ಕಾರ್ತಿಕ್ (19), ಪೀಟರ್ (19), ಪ್ರಕಾಶ(18), ಮಾದೇಶ (18) ಹಾಗೂ ಸಂತೋಷ (21) ಬಂಧಿತರು.
ಆರೋಪಿಗಳು ಇತ್ತೀಚೆಗೆ ಕಳ್ಳತನ ಮಾಡಿದ್ದ 220 ಸಿಸಿ ಪಲ್ಸರ್ ಬೈಕ್ ಹಾಗೂ ಹೊಂಡಾ ಬೈಕ್ಗಳನ್ನು ಚನ್ನಕೇಶವನಗರದಲ್ಲಿ ಕಮ್ಮಿ ಬೆಲೆಗೆ ಮಾರಾಟ ಮಾಡಲು ಗ್ರಾಹಕರನ್ನು ಹುಡುಕುತ್ತಿದ್ದರು. ಈ ಕುರಿತು ಸಿಕ್ಕ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಂಧಿತ ಕಾರ್ತಿಕ್ ವಿರುದ್ಧ ಇದೇ ಮೇ ತಿಂಗಳಲ್ಲಿ ತಮಿಳುನಾಡಿನ ಹೊಸೂರಿನ ಹುಡ್ಕೋ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರಿಂದ ಬಂಧಿತನಾಗಿ ಒಂದು ತಿಂಗಳು ಕಾಲ ಜೈಲಿನಲ್ಲಿದ್ದ ಆರೋಪಿ, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ.
ಕೃಷ್ಣಗಿರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ 6 ತಿಂಗಳು ಜೈಲಿನಲ್ಲಿದ್ದ ಸಂತೋಷ್ ಹಾಗೂ ಇತರ ಮೂವರ ಜತೆ ಸೇರಿದ ಕಾರ್ತಿಕ್, ಮತ್ತೆ ಬೈಕ್ ಕಳ್ಳತನ ಆರಂಭಿಸಿದ್ದ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಬದಿ ನಿಲ್ಲಿಸಿರುವ ದುಬಾರಿ ಬೆಲೆಯ ಬೈಕ್ಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಗಳು, ಅವುಗಳನ್ನು ಕಮ್ಮಿ ಬೆಲೆಗೆ ವಿಲೇವಾರಿ ಮಾಡಿ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ತಮಿಳುನಾಡು ಮೂಲದ ಕಾರ್ತಿಕ್ (19), ಪೀಟರ್ (19), ಪ್ರಕಾಶ(18), ಮಾದೇಶ (18) ಹಾಗೂ ಸಂತೋಷ (21) ಬಂಧಿತರು.
ಆರೋಪಿಗಳು ಇತ್ತೀಚೆಗೆ ಕಳ್ಳತನ ಮಾಡಿದ್ದ 220 ಸಿಸಿ ಪಲ್ಸರ್ ಬೈಕ್ ಹಾಗೂ ಹೊಂಡಾ ಬೈಕ್ಗಳನ್ನು ಚನ್ನಕೇಶವನಗರದಲ್ಲಿ ಕಮ್ಮಿ ಬೆಲೆಗೆ ಮಾರಾಟ ಮಾಡಲು ಗ್ರಾಹಕರನ್ನು ಹುಡುಕುತ್ತಿದ್ದರು. ಈ ಕುರಿತು ಸಿಕ್ಕ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಬಂಧಿತ ಕಾರ್ತಿಕ್ ವಿರುದ್ಧ ಇದೇ ಮೇ ತಿಂಗಳಲ್ಲಿ ತಮಿಳುನಾಡಿನ ಹೊಸೂರಿನ ಹುಡ್ಕೋ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಅಲ್ಲಿನ ಪೊಲೀಸರಿಂದ ಬಂಧಿತನಾಗಿ ಒಂದು ತಿಂಗಳು ಕಾಲ ಜೈಲಿನಲ್ಲಿದ್ದ ಆರೋಪಿ, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದ.
ಕೃಷ್ಣಗಿರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿ 6 ತಿಂಗಳು ಜೈಲಿನಲ್ಲಿದ್ದ ಸಂತೋಷ್ ಹಾಗೂ ಇತರ ಮೂವರ ಜತೆ ಸೇರಿದ ಕಾರ್ತಿಕ್, ಮತ್ತೆ ಬೈಕ್ ಕಳ್ಳತನ ಆರಂಭಿಸಿದ್ದ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಬದಿ ನಿಲ್ಲಿಸಿರುವ ದುಬಾರಿ ಬೆಲೆಯ ಬೈಕ್ಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಗಳು, ಅವುಗಳನ್ನು ಕಮ್ಮಿ ಬೆಲೆಗೆ ವಿಲೇವಾರಿ ಮಾಡಿ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದರು.