ಆ್ಯಪ್ನಗರ

ಬಸ್‌ ಡಿಕ್ಕಿ : ಟೆಕ್ಕಿ ಬಲಿ

ಬಿಎಂಟಿಎಸ್‌ ಬಸ್‌ ಹರಿದು ಟೆಕ್ಕಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೆಆರ್‌ ಪುರ ಸಂಚಾರಿ ಠಾಣೆ ವ್ಯಾಪ್ತಿಯ ಐಟಿಪಿಎಲ್‌ ಮುಖ್ಯರಸ್ತೆಯ ಬಿ.ನಾರಾಯಣಪುರ ಬಸ್‌ ನಿಲ್ದಾಣದ ಬಳಿ ಬುಧವಾರ ನಡೆದಿದೆ.

Vijaya Karnataka 20 Dec 2018, 5:00 am
ಕೃಷ್ಣರಾಜಪುರ: ಬಿಎಂಟಿಎಸ್‌ ಬಸ್‌ ಹರಿದು ಟೆಕ್ಕಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೆಆರ್‌ ಪುರ ಸಂಚಾರಿ ಠಾಣೆ ವ್ಯಾಪ್ತಿಯ ಐಟಿಪಿಎಲ್‌ ಮುಖ್ಯರಸ್ತೆಯ ಬಿ.ನಾರಾಯಣಪುರ ಬಸ್‌ ನಿಲ್ದಾಣದ ಬಳಿ ಬುಧವಾರ ನಡೆದಿದೆ.
Vijaya Karnataka Web bmtc bus accident techie death
ಬಸ್‌ ಡಿಕ್ಕಿ : ಟೆಕ್ಕಿ ಬಲಿ


ಕಲ್ಯಾಣ ನಗರ ಸಮೀಪವಿರುವ ಯಾಸಿನ್‌ನಗರದ ನಿವಾಸಿ ನೋಮಾನ್‌ ನೌಷಾದ್‌(23) ಮೃತ ವ್ಯಕ್ತಿ. ಮೂರು ವರ್ಷದ ಹಿಂದೆ ಐಟಿಪಿಎಲ್‌ ಸಮೀಪವಿರುವ ಕಲಾರಿಂಗ್‌ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ನೊಮಾನ್‌ ನೌಷಾದ್‌, ಎಂದಿನಂತೆ ಬೆಳಿಗ್ಗೆ 8.50ರ ಸುಮಾರಿನಲ್ಲಿ ಬೈಕ್‌ನಲ್ಲಿ ಕೆಲಸಕ್ಕೆಂದು ಹೊರಟಿದ್ದರು. ಐಟಿಪಿಎಲ್‌ ಮುಖ್ಯರಸ್ತೆಯಲ್ಲಿ ಬಿ.ನಾರಾಯಣಪುರ ಸಮೀಪ ಮೆಟ್ರೋ ಕಾಮಗಾರಿಗೆ ಅಳವಡಿಸಿದ ಬ್ಯಾರಿಕೇಡ್‌ಗೆ ಬೈಕ್‌ ತಾಗಿದ್ದು, ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಗಡೆಗೆ ಬಿದ್ದಿದ್ದಾರೆ. ನಗರದಿಂದ ವೈಟ್‌ಪೀಲ್ಡ್‌ ಕಡೆಗೆ ವೇಗವಾಗಿ ಬಂದ ಡಿಪೋಗೆ 45ಕ್ಕೆ ಸೇರಿದ ಬಿಎಂಟಿಎಸ್‌ ಬಸ್‌ ಹಿಂಬದಿ ಚಕ್ರ ಇವರ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುಘಟನೆಗೆ ಕಾರಣವಾದ ಬಸ್‌ ಚಾಲಕ ರಂಗರಾಮೇಗೌಡನನ್ನು ಕೆಆರ್‌ಪುರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ