ವಿಕ ಸುದ್ದಿಲೋಕ ಬೆಂಗಳೂರು
ಎಚ್ಎಎಲ್ ಸಮೀಪದ ವಿಭೂತಿಪುರದಲ್ಲಿ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ನಾಲ್ಕು ವರ್ಷದ ಬಾಲಕನನ್ನು ಕಚ್ಚಿ ಗಾಯಗೊಳಿಸಿವೆ.
ಮನೋಜ್ ಮತ್ತು ಮುರುಗಮ್ಮ ದಂಪತಿಯ ಪುತ್ರನಾದ ಪ್ರವೀಣ್ ಗಾಯಗೊಂಡ ಬಾಲಕ, ಗಂಭೀರ ಸ್ವರೂಪದ ಕಚ್ಚಿದ ಗಾಯಗಳಾಗಿರುವ ಈತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುಕೆಜಿ ಒದುತ್ತಿದ್ದ ಪ್ರವೀಣ್, ಬುಧವಾರ ಸಂಜೆ 5 ಗಂಟೆ ಸುಮಾರಿಗೆ ವಿಭೂತಿಪುರದಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಹೋಗಿದ್ದ. ಈ ವೇಳೆ ಒಂದು ಕಡೆ ಒಂಟಿಯಾಗಿದ್ದ ಪ್ರವೀಣ್ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿವೆ. ಬಾಲಕನನ್ನು ಬಿಡಿಸಿಕೊಂಡ ಸ್ಥಳೀಯರು ಹಾಗೂ ಪಾಲಕರು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬೀದಿ ನಾಯಿಗಳ ಮೇಲೆ ನಿಯಂತ್ರಣ ಹೇರದ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ದೂರು ದಾಖಲಾಗಿಲ್ಲ ಎಂದು ಎಚ್ಎಎಲ್ ಪೊಲೀಸರು ತಿಳಿಸಿದರು.
ಎಚ್ಎಎಲ್ ಸಮೀಪದ ವಿಭೂತಿಪುರದಲ್ಲಿ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ನಾಲ್ಕು ವರ್ಷದ ಬಾಲಕನನ್ನು ಕಚ್ಚಿ ಗಾಯಗೊಳಿಸಿವೆ.
ಮನೋಜ್ ಮತ್ತು ಮುರುಗಮ್ಮ ದಂಪತಿಯ ಪುತ್ರನಾದ ಪ್ರವೀಣ್ ಗಾಯಗೊಂಡ ಬಾಲಕ, ಗಂಭೀರ ಸ್ವರೂಪದ ಕಚ್ಚಿದ ಗಾಯಗಳಾಗಿರುವ ಈತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುಕೆಜಿ ಒದುತ್ತಿದ್ದ ಪ್ರವೀಣ್, ಬುಧವಾರ ಸಂಜೆ 5 ಗಂಟೆ ಸುಮಾರಿಗೆ ವಿಭೂತಿಪುರದಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಹೋಗಿದ್ದ. ಈ ವೇಳೆ ಒಂದು ಕಡೆ ಒಂಟಿಯಾಗಿದ್ದ ಪ್ರವೀಣ್ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ಮಾಡಿ ಗಾಯಗೊಳಿಸಿವೆ. ಬಾಲಕನನ್ನು ಬಿಡಿಸಿಕೊಂಡ ಸ್ಥಳೀಯರು ಹಾಗೂ ಪಾಲಕರು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬೀದಿ ನಾಯಿಗಳ ಮೇಲೆ ನಿಯಂತ್ರಣ ಹೇರದ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ದೂರು ದಾಖಲಾಗಿಲ್ಲ ಎಂದು ಎಚ್ಎಎಲ್ ಪೊಲೀಸರು ತಿಳಿಸಿದರು.