ಆ್ಯಪ್ನಗರ

ಕಟ್ಟಡ ಕಾರ್ಮಿಕರಾಗಿದ್ದ ಸಹೋದರರನ್ನೇ ಕೊಲೆ ಮಾಡಿದ ತಮ್ಮ

ಸಹೋದರರಿಬ್ಬರ ಜೋಡಿ ಕೊಲೆಗೆ ಸ್ವಂತ ತಮ್ಮನೇ ಕಾರಣ ಎಂಬುದನ್ನು ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

Vijaya Karnataka Web 18 Jun 2020, 6:04 pm
ಬೆಂಗಳೂರು: ಅನ್ನಪೂರ್ಣೇಶ್ವರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸಹೋದರರಿಬ್ಬರ ಜೋಡಿ ಕೊಲೆಗೆ ಸ್ವಂತ ತಮ್ಮನೇ ಕಾರಣ ಎನ್ನುವುದನ್ನು ಪತ್ತೆಹಚ್ಚಿರುವ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
Vijaya Karnataka Web bengaluru


ಕಲ್ಯಾಣ ನಗರದ ನಿವಾಸಿಗಳಾಗಿದ್ದ ಸಹದೇವ (27) ರಘುಸ್ವಾಮಿ (29) ಅವರನ್ನು ಒಡಹುಟ್ಟಿದ ತಮ್ಮ ರಾಜೇಶನೇ ಕೊಲೆ ಮಾಡಿದ್ದ ಎಂದು ಡಿಸಿಪಿ ರಮೇಶ್‌ ತಿಳಿಸಿದ್ದಾರೆ. ಕಟ್ಟಡ ಕಾರ್ಮಿಕರಾಗಿದ್ದ ಇಬ್ಬರು ಸಹೋದರರು, ನಿರ್ಮಾಣ ಹಂತದ ಕಟ್ಟಡದಲ್ಲೇ ಉಳಿದುಕೊಳ್ಳುತ್ತಿದ್ದರು. ಒಟ್ಟಿಗೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಆದರೆ ದುಡ್ಡಿನ ವಿಚಾರದಲ್ಲಿ ಮೂವರ ನಡುವೆ ಶುರುವಾದ ಜಗಳ ಜೋಡಿ ಕೊಲೆಗೆ ಕಾರಣವಾಗಿದೆ. ರಾಜೇಶ ಸಹೋದರರಿಬ್ಬರ ತಲೆ ಮೇಲೆ ಕಲ್ಲುಎತ್ತಿ ಹಾಕಿ ಪರಾರಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಾದಿ ತಪ್ಪಿಸಿದ್ದ
ಇಬ್ಬರನ್ನು ಕೊಲೆ ಮಾಡಿದ ಬಳಿಕ ಮತ್ತೊಬ್ಬ ಅಣ್ಣನಿಗೆ ಕರೆ ಮಾಡಿದ್ದ ರಾಜೇಶ, ಸಹದೇವ ಮತ್ತು ರಘು ಹೊಡೆದಾಡಿಕೊಂಡಿದ್ದಾರೆ. ಹೋಗಿ ನೋಡು ಎಂದು ಹೇಳಿದ್ದ. ಅಣ್ಣ ಸ್ಥಳಕ್ಕೆ ಹೋಗಿ ನೋಡಿದಾಗ ಇಬ್ಬರೂ ಕೊಲೆ ಆಗಿರುವುದು ಗೊತ್ತಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಆರೋಪಿ ತಮ್ಮ ರಾಜೇಶ್‌ನನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ