ಆ್ಯಪ್ನಗರ

ಬಿಎಂಟಿಸಿಗೆ ಬಾಲಕ ಬಲಿ

ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ಭಾಷ್ಯಂಸರ್ಕಲ್‌ನಲ್ಲಿ ನಡೆದಿದೆ.

ವಿಕ ಸುದ್ದಿಲೋಕ 22 May 2017, 8:33 am

ಬೆಂಗಳೂರು: ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ಭಾಷ್ಯಂಸರ್ಕಲ್‌ನಲ್ಲಿ ನಡೆದಿದೆ.

ರಾಜಾಜಿನಗರ ನಿವಾಸಿ ಪ್ರಿಯದರ್ಶನ್‌ (17) ಮೃತ ಯುವಕ. ಪಿಯುಸಿ ಮುಗಿಸಿದ್ದ ಈತ ಎಂದಿನಂತೆ ಸ್ನೇಹಿತ ರಾಘು ಜತೆಗೆ ಸ್ವಿಮ್ಮಿಂಗ್‌ಗೆಂದು ಹೋಗಿದ್ದ. ವಾಪಸಾಗುವಾಗ ನ್ಯೂ ಶಾಂತಿ ಸಾಗರ್‌ ಹೋಟೆಲ್‌ನಲ್ಲಿ ಟೀ ಕುಡಿಯುವ ಸಲುವಾಗಿ ಬರುತ್ತಿದ್ದಾಗ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದಿದೆ.

Vijaya Karnataka Web bus accident student killed
ಬಿಎಂಟಿಸಿಗೆ ಬಾಲಕ ಬಲಿ


ಪ್ರಿಯದರ್ಶನ್‌ ತಲೆ ಮೇಲೆ ಬಸ್ಸಿನ ಹಿಂಬದಿ ಚಕ್ರ ಹರಿದಿದ್ದರಿಂದ ಆತ ಸ್ಥಳದಲ್ಲೇ ಮೃತಪ್ಟಿಟ್ಟಿದ್ದು ಹಿಂಬದಿ ಸವಾರ ರಘುಗೆ ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ. ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆದಿದೆ. ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ