ಆ್ಯಪ್ನಗರ

ಕಾರು ಚಾಲಕನ ಕೊಲೆ: ಮತ್ತೊಬ್ಬನಿಗೆ ಇರಿತ

ಕಾರು ಚಾಲಕನೊಬ್ಬನನ್ನು ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾರ್ವೆಬಾವಿಪಾಳ್ಯದ ಐಟಿಐ ಲೇಔಟ್‌ನಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದೆ.

Vijaya Karnataka 26 Sep 2018, 5:00 am
ಬೆಂಗಳೂರು: ಕಾರು ಚಾಲಕನೊಬ್ಬನನ್ನು ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗಾರ್ವೆಬಾವಿಪಾಳ್ಯದ ಐಟಿಐ ಲೇಔಟ್‌ನಲ್ಲಿ ಮಂಗಳವಾರ ನಸುಕಿನಲ್ಲಿ ಸಂಭವಿಸಿದೆ.
Vijaya Karnataka Web MURDER1


ಬೊಮ್ಮನಹಳ್ಳಿ ನಿವಾಸಿ, ಮಂಡ್ಯ ಮೂಲದ ಯಶವಂತ (25) ಕೊಲೆಯಾದವ. ಆತನ ಜತೆಗಿದ್ದ ಸುನೀಲ್‌ ಎಂಬಾತನಿಗೂ ಇರಿಯಲಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಸ್ವಾಮಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ಯಶವಂತ ಕಾರು ಚಾಲಕನಾಗಿದ್ದು, ಈತನ ಸ್ನೇಹಿತರಾದ ಸುನೀಲ್‌ ಮತ್ತು ಸ್ವಾಮಿ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಐಟಿಐ ಲೇಔಟ್‌ನಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು. ಸೋಮವಾರ ರಾತ್ರಿ ಇವರ ಮನೆಗೆ ಯಶವಂತ ಬಂದಿದ್ದು, ಮೂವರು ಸೇರಿ ಪಾರ್ಟಿ ಮಾಡಿದ್ದರು. ಬಳಿಕ ಸುನೀಲ್‌ ನಿದ್ರೆ ಮಾಡಿದ್ದ. ನಸುಕಿನ ಮೂರು ಗಂಟೆ ಸುಮಾರಿಗೆ ಯಶವಂತ ಮತ್ತು ಸ್ವಾಮಿ ನಡುವೆ ಜಗಳವಾಡಲು ಶುರು ಮಾಡಿದ್ದರು. ಈ ವೇಳೆ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡ ಸ್ವಾಮಿ, ಯಶವಂತನ ಎದೆಗೆ ಇರಿದಿದ್ದ. ಎಚ್ಚರಗೊಂಡ ಸುನೀಲ್‌, ಯಶವಂತನ ರಕ್ಷಣೆಗೆ ಧಾವಿಸಿದ್ದು, ಆದರೆ, ಆತನ ಎದೆಗೂ ಇರಿದ ಸ್ವಾಮಿ ಅಲ್ಲಿಂದ ಪರಾರಿಯಾಗಿದ್ದ.

ಅವರ ಕೂಗಾಟ ಕೇಳಿಸಿಕೊಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ರಕ್ತಸ್ರಾವವಾಗಿ ಯಶವಂತ ಮೃತಪಟ್ಟಿದ್ದ.

ಕೊಲೆಗೆ ಕಾರಣ ಸ್ಪಷ್ಟವಾಗಿಲ್ಲ. ಸುನೀಲ್‌ ಚೇತರಿಸಿಕೊಂಡ ಬಳಿಕ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುವುದು ಎಂದು ಪೊಲೀಸರು ತಿಳಿಸಿದರು. ಬಂಡೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ