ಆ್ಯಪ್ನಗರ

ತಮ್ಮನ ಪತ್ನಿ , ಮಗಳ ಮೇಲೆ ಹಲ್ಲೆ ಆರೋಪ

ಆಸ್ತಿ ವಿಚಾರದ ಮಾತುಕತೆ ನಡೆಯುವ ವೇಳೆ ಸಹೋದರನ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್‌ ಹಾಗೂ ರೌಡಿ ಶೀಟರ್‌ ನಾಗರಾಜ್‌ ವಿರುದ್ಧ ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

Vijaya Karnataka 28 Nov 2018, 5:00 am
ಬೆಂಗಳೂರು: ಆಸ್ತಿ ವಿಚಾರದ ಮಾತುಕತೆ ನಡೆಯುವ ವೇಳೆ ಸಹೋದರನ ಪತ್ನಿ ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್‌ ಹಾಗೂ ರೌಡಿ ಶೀಟರ್‌ ನಾಗರಾಜ್‌ ವಿರುದ್ಧ ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web case aginst note naga
ತಮ್ಮನ ಪತ್ನಿ , ಮಗಳ ಮೇಲೆ ಹಲ್ಲೆ ಆರೋಪ


ನಾಗರಾಜ್‌ ಮತ್ತು ಈತನ ಪುತ್ರರಾದ ಎನ್‌.ಗಾಂಧಿ, ಎನ್‌. ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಚಾಮುಂಡೇಶ್ವರಿ ಹಾಗೂ ಅವರ ಮಕ್ಕಳಾದ ಜಯಲಕ್ಷ್ಮೀ, ಶ್ವೇತಾ ಹಲ್ಲೆಯಿಂದ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನ.25ರಂದು ಬೆಳಗ್ಗೆ 5 ಗಂಟೆಗೆ ಘಟನೆ ನಡೆದಿದೆ.

ಆರೋಪಿ ನಾಗರಾಜ್‌ ತನ್ನ ಇಬ್ಬರು ಮಕ್ಕಳು ಮತ್ತು 8 ಮಂದಿ ಸ್ನೇಹಿತರನ್ನು ಕರೆದುಕೊಂಡು ಸಹೋದರ ಧರ್ಮನ ಮನೆಗೆ ಹೋಗಿದ್ದರು. ಮಾತುಕತೆಗೆಂದು ಹೋಗಿದ್ದರಾದರೂ ಮಾತಿನ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಸಹೋದರನ ಪತ್ನಿ ಚಾಮುಂಡೇಶ್ವರಿ, ಇವರ ಮಗಳು ಶ್ವೇತಾ ಅವರಿಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಲ್ಲದೆ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದರು. ಗಲಾಟೆ ಕೇಳಿ ಸ್ಥಳಕ್ಕೆ ಬಂದ ಬಾಡಿಗೆದಾರರಾದ ಜಯಲಕ್ಷ್ಮೀ ಅವರ ಮೇಲೂ ಹಲ್ಲೆ ನಡೆಸಿದ್ದರು. ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದರು.

ನಾಗರಾಜ್‌ ಮತ್ತು ಈತನ ಸಹೋದರ ಧರ್ಮನ ನಡುವೆ ಆಸ್ತಿ ವಿಚಾರವಾಗಿ ಈ ಹಿಂದೆ ಜಗಳ ನಡೆದಿತ್ತು. ಧರ್ಮ ಅನಾರೋಗ್ಯದಿಂದ ಮೃತಪಟ್ಟಿದ್ದು ಆಸ್ತಿ ವಿವಾದ ಮಾತ್ರ ಮುಂದುವರಿದಿತ್ತು. ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ