ಆ್ಯಪ್ನಗರ

ದಾಖಲೆ ಮಾಡಿಸಲು ಕೊಟ್ಟ ಪತ್ರ ಒತ್ತೆ ಇಟ್ಟು ಸಾಲ ಪಡೆದ !

ತನಗೆ ಸೇರಿದ ದಾಖಲೆಯನ್ನು ತನಗೇ ಗೊತ್ತಿಲ್ಲದೆ ಬ್ಯಾಂಕ್‌ನಲ್ಲಿ ಒತ್ತೆ ಇಟ್ಟು 15 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ರೆವಿನ್ಯೂ ಇನ್ಸ್‌ಪೆಕ್ಟರ್‌ ಶರತ್‌ಚಂದ್ರಬಾಬು ವಿರುದ್ಧ ಮೂರ್ತಿ ಎನ್ನುವವರು ದೂರು ನೀಡಿದ್ದಾರೆ.

Vijaya Karnataka 20 Mar 2019, 7:35 am
ಬೆಂಗಳೂರು : ತನಗೆ ಸೇರಿದ ದಾಖಲೆಯನ್ನು ತನಗೇ ಗೊತ್ತಿಲ್ಲದೆ ಬ್ಯಾಂಕ್‌ನಲ್ಲಿ ಒತ್ತೆ ಇಟ್ಟು 15 ಲಕ್ಷ ರೂ. ಸಾಲ ಪಡೆದಿರುವ ಬಗ್ಗೆ ರೆವಿನ್ಯೂ ಇನ್ಸ್‌ಪೆಕ್ಟರ್‌ ಶರತ್‌ಚಂದ್ರಬಾಬು ವಿರುದ್ಧ ಮೂರ್ತಿ ಎನ್ನುವವರು ದೂರು ನೀಡಿದ್ದಾರೆ.
Vijaya Karnataka Web FIR


ದೂರಿನ ಆಧಾರದ ಮೇಲೆ ಬನಶಂಕರಿ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಜಾಗದ ದಾಖಲೆಗಳನ್ನು ಮಾಡಿಕೊಡಲು ಮೊದಲು 2 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಹಣ ನೀಡದ ಕಾರಣಕ್ಕೆ ತಮ್ಮ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್‌ನಲ್ಲಿ ಇಟ್ಟು ಸಾಲ ಪಡೆದಿದ್ದಾರೆ. ಸಾಲವನ್ನೂ ತೀರಿಸದೇ, ದಾಖಲೆಗಳನ್ನೂ ವಾಪಾಸ್‌ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ನಡೆದದ್ದೇನು ?

ಮೂರ್ತಿ ಉತ್ತರಹಳ್ಳಿ ಬಳಿ 2 ಎಕರೆ ಜಮೀನು ಹೊಂದಿದ್ದು, ಜಾಗಕ್ಕೆ ಸಂಬಂಧಿಸಿದ ದಾಖಲಾತಿ ಮಾಡಿಸಿಕೊಳ್ಳಲು ರೆವಿನ್ಯೂ ಇನ್ಸ್‌ಪೆಕ್ಟರ್‌ ಶರತ್‌ಚಂದ್ರ ಬಾಬು ಬಳಿ ಹೋಗಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಅವರು, ದಾಖಲಾತಿ ಮಾಡಿಕೊಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ದಾಖಲೆಗಳೆಲ್ಲ ಸಮರ್ಪಕವಾಗಿ ಇದ್ದರೂ ಲಂಚ ಕೇಳಿದ್ದರಿಂದ ಹಣ ಕೊಡಲು ಮೂರ್ತಿ ನಿರಾಕರಿಸಿದ್ದರು. ನಂತರದಲ್ಲಿ ಅದೇ ಜಾಗದ ದಾಖಲೆ ಪತ್ರಗಳನ್ನೇ ಬ್ಯಾಂಕ್‌ನಲ್ಲಿಟ್ಟು 15 ಲಕ್ಷ ರೂ. ಸಾಲ ಪಡೆದಿರುವುದು ಮೂರ್ತಿ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ದೂರು ನೀಡಲು ಠಾಣೆಗೆ ಹೋದರಾದರೂ ಸಿವಿಲ್‌ ವ್ಯಾಜ್ಯ ಆದ ಕಾರಣ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಸಕ್ತಿ ತೋರಿಸಿದ್ದರು ಎನ್ನಲಾಗಿದೆ.

ನಂತರ 4ನೇ ಎಸಿಎಂಎಂ ನ್ಯಾಯಾಲಯದಲ್ಲಿ ಶರತ್‌ಚಂದ್ರಬಾಬು ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯ ಈ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲು ಸೂಚಿಸಿದ ಹಿನ್ನೆಲೆಯಲ್ಲಿ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ