ಆ್ಯಪ್ನಗರ

ಪೊಲೀಸ್‌ ಸಂಘದ ಶಶಿಧರ್‌ ಸಿಸಿಬಿ ವಶಕ್ಕೆ

ಪೊಲೀಸ್‌ ಸಮುದಾಯವನ್ನು ಸರಕಾರದ ವಿರುದ್ಧ ಪ್ರಚೋದನೆಗೆ ಪ್ರೇರೇಪಿಸಿದ್ದಲ್ಲದೆ, ಫೇಸ್‌ಬುಕ್‌ನಲ್ಲಿ ಔರಾದ್‌ಕರ್‌ ಸಮಿತಿ ವರದಿ ಜಾರಿಗೆ ಆಗ್ರಹಿಸಿ ಅನುಚಿತ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಪೊಲೀಸ್‌ ಮಹಾ ಸಂಘದ ಸ್ವಯಂಘೋಷಿತ ಅಧ್ಯಕ್ಷ ಶಶಿಧರ್‌ ಅವರನ್ನು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

Vijaya Karnataka 13 Feb 2019, 5:00 am
ಬೆಂಗಳೂರು: ಪೊಲೀಸ್‌ ಸಮುದಾಯವನ್ನು ಸರಕಾರದ ವಿರುದ್ಧ ಪ್ರಚೋದನೆಗೆ ಪ್ರೇರೇಪಿಸಿದ್ದಲ್ಲದೆ, ಫೇಸ್‌ಬುಕ್‌ನಲ್ಲಿ ಔರಾದ್‌ಕರ್‌ ಸಮಿತಿ ವರದಿ ಜಾರಿಗೆ ಆಗ್ರಹಿಸಿ ಅನುಚಿತ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಪೊಲೀಸ್‌ ಮಹಾ ಸಂಘದ ಸ್ವಯಂಘೋಷಿತ ಅಧ್ಯಕ್ಷ ಶಶಿಧರ್‌ ಅವರನ್ನು ಮಂಗಳವಾರ ಸಂಜೆ ವಶಕ್ಕೆ ಪಡೆದಿದ್ದಾರೆ.
Vijaya Karnataka Web ccb plice arrested shashidhar
ಪೊಲೀಸ್‌ ಸಂಘದ ಶಶಿಧರ್‌ ಸಿಸಿಬಿ ವಶಕ್ಕೆ


ರಾಜಾನುಕುಂಟೆಯಲ್ಲಿರುವ ಶಶಿಧರ್‌ ನಿವಾಸಕ್ಕೆ ಎರಡು ವಾಹನಗಳಲ್ಲಿ ತೆರಳಿದ ಸಿಸಿಬಿ ಸಿಬ್ಬಂದಿ ಮನೆಯಲ್ಲೇ ಇದ್ದ ಅವರನ್ನು ವಶಕ್ಕೆ ಪಡೆದರು. ಈ ವೇಳೆ ''ನನ್ನನ್ನು ಕರೆದೊಯ್ಯಲು ವಾರಂಟ್‌ ಇದೆಯೇ ? ನೋಟಿಸ್‌ ನೀಡಿದ್ದೀರಾ?'' ಎಂದು ಸಿಬ್ಬಂದಿಯ ಜತೆ ವಾಗ್ವಾದಕ್ಕೆ ಇಳಿದ ಶಶಿಧರ್‌ ಆನಂತರ ತಮ್ಮ ಮಗಳನ್ನು ಕರೆದುಕೊಂಡು ಸಿಸಿಬಿ ಅಧಿಕಾರಿಗಳ ಜತೆ ತೆರಳಿದರು.

ಶಶಿಧರ್‌ ಬಗ್ಗೆ ಬಂದಿದ್ದ ಕೆಲವು ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ವಿಚಾರಣೆ ನಡೆಸಿದ ನಂತರ ಆರೋಪಗಳು ನಿಜ ಎನ್ನುವುದು ಗೊತ್ತಾದರೆ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಈ ಬಗ್ಗೆ 'ವಿಜಯ ಕರ್ನಾಟಕ' ಜತೆ ಮಾತನಾಡಿದ ಶಶಿಧರ್‌ ಅವರ ಪತ್ನಿ, ''ಸಂಜೆ ವೇಳೆಗೆ ಸಿಸಿಬಿ ಯವರೆಂದು ಕೆಲವರು ಬಂದು ಅವರನ್ನು ಮನೆಯಿಂದ ಕರೆದುಕೊಂಡು ಹೋದರು. ಔರಾದ್‌ಕರ್‌ ವರದಿಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ಕೆಲವು ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿದ್ದರಂತೆ. ನಾನು ಕಾನೂನು ಮೀರಿ ಹೋಗಿಲ್ಲ. ಪೊಲೀಸ್‌ ಸಿಬ್ಬಂದಿಯನ್ನು ಪ್ರಚೋದಿಸುವ ಪ್ರಯತ್ನಕ್ಕೂ ಹೋಗುವುದಿಲ್ಲ ಎಂದು ಶಶಿಧರ್‌ ಅವರು ಖಚಿತವಾಗಿ ನಮ್ಮ ಬಳಿ ಹೇಳಿಕೊಂಡಿದ್ದರು. ನಾವು ಸಂಸಾರ ಸಮೇತವಾಗಿ ಕೆಲ ದಿನಗಳಿಂದ ಹೊರಗೆ ಹೋಗಿದ್ದೆವು. ಈ ವೇಳೆ ಪತ್ರಿಕೆಯೊಂದರಲ್ಲಿ ಶಶಿಧರ್‌ ಅವರ ಬಗ್ಗೆ ವರದಿಯೊಂದು ಬಂದಿತ್ತಂತೆ. ಈ ಹಿನ್ನೆಲೆಯಲ್ಲೂ ಅವರನ್ನು ಪೊಲಿಸರು ಕರೆದುಕೊಂಡು ಹೋಗಿರಬಹುದು. ಅವರ ಜತೆ ನಮ್ಮ ಮಗಳು ಕೂಡ ಸಿಸಿಬಿ ಕಚೇರಿಗೆ ಹೋಗಿದ್ದಳು. ಆದರೆ ಮಗಳನ್ನು ಮಾತ್ರ ಮಹಿಳಾ ಪೊಲೀಸರ ಭದ್ರತೆಯಲ್ಲಿ ಪೊಲೀಸ್‌ ವಾಹನದಲ್ಲೇ ಮನೆಗೆ ಕಳುಹಿಸಿದ್ದಾರೆ. ಶಶಿಧರ್‌ ಅವರು ಇನ್ನೂ ಪೊಲೀಸರ ವಶದಲ್ಲೇ ಇದ್ದಾರೆ. ಅವರ ವಿರುದ್ಧ ಯಾರಾದರೂ ದೂರು ನೀಡಿದ್ದಾರಾ? ಎಫ್‌ಐಆರ್‌ ದಾಖಲಾಗಿದೆಯಾ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸ್ಥಳೀಯ ಠಾಣೆಯಲ್ಲಿ ವಿಚಾರಿಸಿದರೆ ಯಾವುದೇ ಎಫ್‌ಐಆರ್‌ ಇಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಯಾವ ವಿಚಾರದ ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಖಚಿತವಾಗಿ ತಿಳಿಸಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ