ಆ್ಯಪ್ನಗರ

ಪೊಲೀಸ್‌ ಸೋಗಿನಲ್ಲಿ ಮಹಿಳೆಯ ಸರಗಳ್ಳತನ

ಪೊಲೀಸರ ಸೋಗಿನಲ್ಲಿ ಬಂದ ಖದೀಮನೊಬ್ಬ 'ಸರ ಮುಚ್ಚಿಟ್ಟುಕೊಳ್ಳಿ' ಎಂದು ಸಲಹೆ ನೀಡಿ ಮಹಿಳೆಯೊಬ್ಬರ 60 ಗ್ರಾಂ ತೂಕದ ಮಾಂಗಲ್ಯ ಸರ ದೋಚಿರುವ ಘಟನೆ ಉಳ್ಳಾಲ ಮುಖ್ಯರಸ್ತೆಯಲ್ಲಿ ನಡೆದಿದೆ.

Vijaya Karnataka 3 Dec 2018, 5:00 am
ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದ ಖದೀಮನೊಬ್ಬ 'ಸರ ಮುಚ್ಚಿಟ್ಟುಕೊಳ್ಳಿ' ಎಂದು ಸಲಹೆ ನೀಡಿ ಮಹಿಳೆಯೊಬ್ಬರ 60 ಗ್ರಾಂ ತೂಕದ ಮಾಂಗಲ್ಯ ಸರ ದೋಚಿರುವ ಘಟನೆ ಉಳ್ಳಾಲ ಮುಖ್ಯರಸ್ತೆಯಲ್ಲಿ ನಡೆದಿದೆ.
Vijaya Karnataka Web chain snatch by miscreant
ಪೊಲೀಸ್‌ ಸೋಗಿನಲ್ಲಿ ಮಹಿಳೆಯ ಸರಗಳ್ಳತನ


ಸರ ಕಳೆದುಕೊಂಡಿರುವ ಉಷಾರಾಣಿ ಎಂಬುವರು ಈ ಕುರಿತು ಜ್ಞಾನಭಾರತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನ.27ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಿರಾಣಿ ಸಾಮಾನುಗಳನ್ನು ತರಲು ಸ್ನೇಹಿತೆ ಮಂಜುಳಾ ಎಂಬುವರ ಜೊತೆ ಉಳ್ಳಾಲ ಮುಖ್ಯರಸ್ತೆಯಲ್ಲಿ ಉಷಾರಾಣಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡ ಬೈಕ್‌ ಬಂದ ದುಷ್ಕರ್ಮಿ, ಅವರನ್ನು ತಡೆದು ನಿಲ್ಲಿಸಿದ್ದಾನೆ. 'ನಾನು ಮಫ್ತಿಯಲ್ಲಿರುವ ಪೊಲೀಸ್‌ ಸಿಬ್ಬಂದಿ. ಈ ಭಾಗದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ, ನೀವು ಧರಿಸಿರುವ ಚಿನ್ನದ ಸರ ತೆಗೆದು ಬ್ಯಾಗ್‌ನಲ್ಲಿ ಹಾಕಿಕೊಳ್ಳಿ' ಎಂದು ಹೇಳಿದ್ದಾನೆ.

ನಿಜಕ್ಕೂ ಆತ ಪೊಲೀಸ್‌ ಇರಬಹುದು ಎಂದು ನಂಬಿದ ಉಷಾರಾಣಿ ಅವರು, ಸರ ತೆಗೆಯಲು ಮುಂದಾಗುತ್ತಿದ್ದಂತೆ, ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಸಹಾಯ ಕೋರಿ ಕೂಗಾಡಿದಾಗ ಸಾರ್ವಜನಿಕರು ಸೇರುವಷ್ಟರಲ್ಲಿ ದುಷ್ಕರ್ಮಿ ಕಣ್ಮರೆಯಾಗಿದ್ದ. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ