ಆ್ಯಪ್ನಗರ

ಮಹಿಳೆಯ ಕೈಗೆ ಚಾಕುವಿನಿಂದ ಇರಿದು ಸರ ಅಪಹರಣ

ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರತಿರೋಧ ತೋರಿದ ಮಹಿಳೆಯ ಕೈಗೆ ಚಾಕುವಿನಿಂದ ಮೂರು ಬಾರಿ ಇರಿದ ದುಷ್ಕರ್ಮಿಗಳು, ಚಿನ್ನದ ಸರ ದೋಚಿರುವ ಘಟನೆ ಯಲಹಂಕದಲ್ಲಿ ನಡೆದಿದೆ.

Vijaya Karnataka 16 Mar 2019, 5:00 am
ಬೆಂಗಳೂರು : ಸರವನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರತಿರೋಧ ತೋರಿದ ಮಹಿಳೆಯ ಕೈಗೆ ಚಾಕುವಿನಿಂದ ಮೂರು ಬಾರಿ ಇರಿದ ದುಷ್ಕರ್ಮಿಗಳು, ಚಿನ್ನದ ಸರ ದೋಚಿರುವ ಘಟನೆ ಯಲಹಂಕದಲ್ಲಿ ನಡೆದಿದೆ.
Vijaya Karnataka Web chain snatching
ಮಹಿಳೆಯ ಕೈಗೆ ಚಾಕುವಿನಿಂದ ಇರಿದು ಸರ ಅಪಹರಣ


ಬಾಗಲೂರಿನ ಚಾಗಲಹಟ್ಟಿ ನಿವಾಸಿ ಲಕ್ಷ್ಮಿ(35) ಗಾಯಗೊಂಡವರು.

ಗುರುವಾರ(ಮಾ.14) ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆ ಸಮೀಪದ ರಸ್ತೆಯಲ್ಲಿ ಲಕ್ಷ್ಮೇ ವಾಯು ವಿಹಾರಕ್ಕೆ ಹೋಗುತ್ತಿದ್ದರು. ಈ ವೇಳೆ ಎರಡು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ್ದಾರೆ. ವಿಳಾಸ ಹೇಳಿದ ಬಳಿಕ ಬೈಕ್‌ನಲ್ಲಿ ಸ್ವಲ್ಪ ಮುಂದೆ ಹೋದ ದುಷ್ಕರ್ಮಿಗಳು, ಮತ್ತೆ ಬೈಕ್‌ ತಿರುಗಿಸಿಕೊಂಡು ಬಂದು ಮಾಂಗಲ್ಯಸರವನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಆಗ ಲಕ್ಷ್ಮೇ ಪ್ರತಿರೋಧ ತೋರಿ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ, ದುಷ್ಕರ್ಮಿಗಳು ತಮ್ಮ ಬಳಿಯಿದ್ದ ಚಾಕುವಿನಿಂದ ಎಡಗೈಗೆ ಮೂರು ಬಾರಿ ಇರಿದಿದ್ದಾರೆ. ಕೈ ಬಿಟ್ಟ ನಂತರ ಕತ್ತಿನಲ್ಲಿದ್ದ 40 ಗ್ರಾಂ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.

ಕೂಗಾಡಿದ ಲಕ್ಷ್ಮಿ ನೆರವಿಗಾಗಿ ಜನರು ಬರುವಷ್ಟರಲ್ಲಿ ದುಷ್ಕರ್ಮಿಗಳು ಕಣ್ಮರೆಯಾಗಿದ್ದರು. ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು.

ಪ್ರಕರಣ ದಾಖಲಿಸಿಕೊಂಡು ಕೃತ್ಯ ನಡೆದ ಸ್ಥಳದ ಸುತ್ತಲಿನ ಕಟ್ಟಡಗಳಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಾಗಲೂರು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ