ಆ್ಯಪ್ನಗರ

ಸರ ಕೀಳುವ ವೇಳೆ ಸರಗಳ್ಳನ ಬೆರಳು ಕಟ್‌ !

ಮಹಿಳೆಯ 56 ಗ್ರಾಂ ತೂಕದ ಸರ ಕಿತ್ತುಕೊಂಡು ಶರವೇಗದಲ್ಲಿ ಪರಾರಿಯಾಗುತ್ತಿದ್ದ ಸರಗಳ್ಳನ ಬೆರಳೊಂದು ಕಟ್‌ ಆಗಿ ಬಿದ್ದಿರುವ ಘಟನೆ ಕುಂದಲಹಳ್ಳಿ ಗೇಟ್‌ ಬಳಿ ಗುರುವಾರ ನಡೆದಿದೆ.

Vijaya Karnataka 15 Sep 2018, 5:00 am
ಬೆಂಗಳೂರು: ಮಹಿಳೆಯ 56 ಗ್ರಾಂ ತೂಕದ ಸರ ಕಿತ್ತುಕೊಂಡು ಶರವೇಗದಲ್ಲಿ ಪರಾರಿಯಾಗುತ್ತಿದ್ದ ಸರಗಳ್ಳನ ಬೆರಳೊಂದು ಕಟ್‌ ಆಗಿ ಬಿದ್ದಿರುವ ಘಟನೆ ಕುಂದಲಹಳ್ಳಿ ಗೇಟ್‌ ಬಳಿ ಗುರುವಾರ ನಡೆದಿದೆ.
Vijaya Karnataka Web chain snatching thiefs finger got cut
ಸರ ಕೀಳುವ ವೇಳೆ ಸರಗಳ್ಳನ ಬೆರಳು ಕಟ್‌ !


ಸರ ಕಳೆದುಕೊಂಡಿರುವ ಕುಂದಲಹಳ್ಳಿ ಎಇಸಿಎಸ್‌ ಲೇಔಟ್‌ ನಿವಾಸಿ ನಾಗೇಶ್ವರಿ (48) ಎಂಬುವವರು ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಇಸಿಎಸ್‌ ಲೇಔಟ್‌ 'ಡಿ' ಬ್ಲಾಕ್‌ 4ನೇ ಕ್ರಾಸ್‌ನಲ್ಲಿ ನೆಲೆಸಿರುವ ಪುತ್ರಿಯ ಮನೆಗೆ ನಾಗೇಶ್ವರಿ ಅವರು ಎರಡು ತಿಂಗಳ ಹಿಂದೆ ಬಂದು ವಾಸವಿದ್ದರು. ಸೆ.13ರ ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯ ಎದುರಿನ ರಸ್ತೆಯಲ್ಲಿ ಫೋನ್‌ನಲ್ಲಿ ಮಾತನಾಡಿಕೊಂಡು ವಾಕಿಂಗ್‌ ಮಾಡುತ್ತಿದ್ದರು.

ಈ ವೇಳೆ ಬೈಕಿನಲ್ಲಿ ಇಬ್ಬರು ದುಷ್ಕರ್ಮಿಗಳು ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹಿಂಬದಿಯಲ್ಲಿ ಕುಳಿತಿದ್ದ ಸವಾರನೊಬ್ಬ, ಹತ್ತಿರ ಬಂದು ಹಿಂದಿನಿಂದ ಮಹಿಳೆಯ ಮಾಂಗಲ್ಯ ಸರಕ್ಕೆ ಕೈ ಹಾಕಿದ್ದಾನೆ. ತಕ್ಷಣ ನಾಗೇಶ್ವರಿ, ಮಾಂಗಲ್ಯ ಸರವನ್ನು ಬಲವಾಗಿ ಹಿಡಿದುಕೊಂಡಿದ್ದಾರೆ. ಆಗ ದುಷ್ಕರ್ಮಿ ಕೂಡ ಬಲವಾಗಿ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಕಿರುಬೆರಳು ಮಾಂಗಲ್ಯ ಸರದ ರಿಂಗ್‌ಗೆ ಸಿಕ್ಕಿಕೊಂಡು ತುಂಡಾಗಿ ಕೆಳಗೆ ಬಿದ್ದಿದೆ. ಆದರೂ ಖದೀಮ 56 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಗಾಬರಿಗೊಂಡ ಮಹಿಳೆ ಕೂಡಲೇ ಸಂಬಂಧಿಕರಿಗೆ ತಿಳಿಸಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಕಿರು ಬೆರಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಚ್‌ಎಎಲ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ